ಸಿಂದಗಿ: ಕೇಂದ್ರದಲ್ಲಿ ಕಳೆದ 7 ವರ್ಷಗಳ ಅವಧಿಯಲ್ಲಿ ಇಡೀ ರೈತ ಸಮುದಾಯಕ್ಕೆ ಪೆನ್ಷನ್ ನೀಡುವ ರೀತಿಯಲ್ಲಿ 10 ಸಾವಿರ ಬಿಜೆಪಿ ನೀಡುತ್ತಿದೆ. ರೈತ ಸಂಚಾರಿ ಯೋಜನೆಯಡಿ ಹನಿ ನೀರಾವರಿ ಯೋಜನೆ ಕಲ್ಪಿಸಿಕೊಟ್ಟಿದೆ. ಕರೋನ ಸಂದರ್ಭದಲ್ಲಿ ಉತ್ತಮವಾದ ಆಡಳಿತ ನೀಡಿದೆ ಆ ಕಾರಣಕ್ಕೆ ಈ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 30 ಸಾವಿರ ಅಂತರದ ಮತಗಳಿಂದ ಗೆಲ್ಲುತ್ತಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಭವಿಷ್ಯ ನುಡಿದರು.
ಪಟ್ಟಣದ ಚೌಧರಿ ಲೇಔಟನಲ್ಲಿರುವ ಅಭ್ಯರ್ಥಿಯ ಮನೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,ಕರ್ನಾಟಕ ಕರೋನಾ ನಿರ್ವಹಣೆಯಲ್ಲಿ ನಂ 1 ಸ್ಥಾನದಲ್ಲಿದೆ ಎಂದು ತಜ್ಞರೆ ಹೇಳಿದ್ದಾರೆ. ಅದರೂ ತೃಪ್ತಿಯಿಲ್ಲ. ನೆರೆ ಹಾವಳಿಯಿಂದ ಸುಮಾರು ರೂ 60 ಸಾವಿರ ಕೋಟಿಗೂ ಅಧಿಕ ನಷ್ಟವಾಗಿದೆ ಆದಾಗ್ಯೂ ಸಮರ್ಪಕವಾಗಿ ನಿರ್ವಹಿಸಿದ್ದೇವೆ. ಈ ಚುನಾವಣೆಯಲ್ಲಿ ಜಾತಿ, ಧರ್ಮದ ಆಧಾರದ ಮೇಲೆ ಮತ ಕೇಳುವುದಿಲ್ಲ ಸಬ್ ಕೆ ಸಾಥ್ ಸಬ್ ಕೆ ವಿಕಾಸ ಆಡಳಿತದ ಮೇಲೆ ಮತ ಕೇಳುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಸಂಘ ಪರಿವಾರದವರನ್ನು ವಿನಾಕಾರಣ ಟೀಕಿಸುತ್ತಿದ್ದಾರೆ. ಎಲ್ಲಿಯವರೆಗೆ ಪ್ರಧಾನಿ ನರೇಂದ್ರ ಮೋದಿಯನ್ನು ಸಮರ್ಥವಾಗಿ ಎದುರಿಸುವದಿಲ್ಲವೋ ಅಲ್ಲಿಯವರೆಗೆ ನೆಲಕ್ಕಚ್ಚಿದವರು ಮೇಲೇಳಲ್ಲ. ಕಾಂಗ್ರೆಸ್ ಮುಕ್ತ ಭಾರತ ಅದು ಸಾಬೀತಾಗುತ್ತಿದೆ. ಆರ್.ಎಸ್ಎಸ್ ಈ ದೇಶದಲ್ಲಿ ಭಾರತೀಯ ಸಂಸ್ಕೃತಿಯನ್ನು ಉಳಿಸಬೇಕು ಎಂದು ಕೇಶವ ಕೃಪಾ ಮತ್ತು ನಾಗ್ಪುರದಲ್ಲಿ 130 ಕೋಟಿ ಜನ ಭಾರತೀಯರಾಗಿ ಬಾಳಬೇಕು ಅಭಿಮಾನದಿಂದ ಬೆಳೆಯಬೇಕು ಎನ್ನುವ ಧ್ಯೇಯ ಧೋರಣೆಯಿಂದ ಆರ್.ಎಸ್ಎಸ್ ಇದೆ ಅದನ್ನು ನಿಂದಿಸುವುದನ್ನು ಬಿಡಿ ಎಂದರು.
ರಾಜ್ಯದಲ್ಲಿ ಎಲ್ಲ ಶೋಷಿತ ಸಮುದಾಯಗಳು ಮುಖ್ಯವಾಹಿನಿಗೆ ಬರಬೇಕು ಮತ್ತು ದಾರ್ಶನಿಕರಿಗೆ ಗೌರವ ಸಲ್ಲಬೇಕು ಎಂದು ಛತ್ರಪತಿ ಶಿವಾಜಿ ಮಹಾರಾಜ, ಅಂಬಿಗರ ಚೌಡಯ್ಯ, ಮಹರ್ಷಿ ವಾಲ್ಮೀಕಿ, ಕನಕದಾಸರ ಜಯಂತಿಗಳನ್ನು ಆಚರಿಸುವಂತೆ ನಮ್ಮ ಅವಧಿಯಲ್ಲಿ ಆದೇಶ ನೀಡಿದ್ದು. ತಳವಾರ ಸಮುದಾಯಕ್ಕೆ ಮೀಸಲಾತಿ ದೊರಕಬೇಕು ಎನ್ನುವ ವಾದದಲ್ಲಿ ಇದ್ದವನು ನಾನು ಈಗ ನೀತಿ ಸಂಹಿತೆ ಸಂದರ್ಭದಲ್ಲಿ ಆ ಹೇಳಿಕೆ ನೀಡುವುದು ಸರಿಯಲ್ಲ ಎಂದು ಹೇಳಿದ್ದೇನೆ ಹೊರತು ಯಾವುದೋ ಪಟ್ಟಭದ್ರ ಹಿತಾಸಕ್ತಿಗಳು ಹೇಳಿಕೆ ನೀಡಿದ್ದು ಸತ್ಯಕ್ಕೆ ದೂರವಾಗಿದೆ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿ, ಶಾಸಕ ಸೋಮನಗೌಡ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಜೋಗುರ, ಜಿಲ್ಲಾ ವಕ್ತಾರ ರಾಜಶೇಖರ ಪೂಜಾರಿ, ಸಿದ್ದಣ್ಣ ಬಿರಾದಾರ ಅಡಕಿ, ಮಂಡಲ ಅದ್ಯಕ್ಷ ಈರಣ್ಣ ರಾವೂರ, ಮಾಧ್ಯಮ ಪ್ರತಿನಿಧಿಗಳಾದ ಸುದರ್ಶನ ಜಿಂಗಾಣಿ, ಶಿವಕುಮಾರ ಬಿರಾದಾರ ಇದ್ದರು.
ವರದಿ : ಪಂಡಿತ್ ಯಂಪೂರೆ, ಸಿಂದಗಿ