ಸಿಂದಗಿ: ನಮ್ಮ ಅಧಿಕಾರವಧಿಯಲ್ಲಿ ನೀಡಿದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಆದರೆ ಬಿಜೆಪಿ ಸರಕಾರ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಎಲ್ಲಾ ಜನರನ್ನು ಮೂರ್ಖರನ್ನಾಗಿಸಿ ಅಚ್ಚೇದಿನ್ ದಾಖಲೆಗಳಲ್ಲಿ ತೋರಿಸುತ್ತಿದೆ ಇಂತಹ ಸರಕಾರವನ್ನು ಕಿತ್ತೊಗೆಯಲು ನಮ್ಮ ಜೊತೆ ಕೈ ಜೊಡಿಸಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿನಂತಿಸಿದರು.
ಪಟ್ಟಣದ ಸರಕಾರಿ ಪ್ರೌಡಶಾಲಾ ಆವರಣದಲ್ಲಿ ಹಮ್ಮಿಕೊಂಡ ಎರಡನೇ ಹಂತದ ಪ್ರಜಾಧ್ವನಿ ಯಾತ್ರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರಧಾನಮಂತ್ರಿಯವರು ಎಂದಿದ್ದರೂ. ಅವರು ಅಚ್ಛೇದಿನ್ ಬರುತ್ತದೆ ಆದರೆ ಅಚ್ಛೇದಿನ್ ಬರಲಿಲ್ಲ ಬದಲಾಗಿ ಗ್ಯಾಸ್, ತೈಲ ಬೆಲೆ, ದಿನಬಳಕೆ ವಸ್ತುಗಳ ಬೆಲೆ,ರಸಗೊಬ್ಬರ ,ಬೀಜಗಳ ಬೆಲೆ ಬಿಜೆಪಿ ಹೆಚ್ಚಿಸುವ ಮೂಲಕ ಜನ ವಿರೋಧಿ ಆಡಳಿತ ನಡೆಸುತ್ತಿದ್ದಾರೆಂದು ವಿರುದ್ಧ ವಾಗ್ದಾಳಿ ನಡೆಸಿದರು. ನಾವು ಬಸವಾದಿಶರಣರ ತತ್ವಗಳನ್ನು ಮೈಗೂಡಿಸಿಕೊಂಡು ಈ ನಾಡಿನ ಜನರ ಪರ ಕೆಲಸ ಮಾಡುತ್ತಿದ್ದೇವೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಂಡಾ ಕಂದಾಯ ಗ್ರಾಮ ನಮ್ಮದೆ: ಕಲ್ಬುರ್ಗಿಯಲ್ಲಿ ತಾಂಡಾಗಳಿಗೆ ಕಂದಾಯ ಘೋಷಣೆ ಮಾಡಿದ್ದೇವೆಂದು ಪ್ರಧಾನಿಯವರನ್ನು ಬೊಮ್ಮಾಯಿಯವರು ನಮ್ಮ ಸರಕಾರದಲ್ಲೆ ಮಾಡಿದ್ದು ಸುಳ್ಳುಗಳನ್ನು ಹೇಳುತ್ತಿದ್ದಾರೆ. ತಾಂಡಾಗಳಲ್ಲಿ ಜನರು ವಾಸಿಸುತ್ತಿದ್ದು ಅಂಥ ಸ್ಥಳಗಳನ್ನು ಕಂದಾಯ ಗ್ರಾಮವನ್ನಾಗಿ ಮಾಡಿದ್ದೇವೆ ಅಲ್ಲದೆ ಸೇವಾಲಾಲ ಜಯಂತಿ ಆಚರಣೆಗೆ ಚಾಲನೆ ನೀಡಿದ್ದೇವೆ ಮತ್ತು ಅಭಿವೃದ್ಧಿ ನಿಗಮ ಸ್ಥಾಪಿಸಿ 500 ಕೋಟಿ ಅನುದಾನವನ್ನು ಕೊಟ್ಟಿದ್ದೇವೆ ಆದರೆ ನಂತರ ಬಂದ ಬಿಜೆಪಿ ಸರಕಾರ ಬರೀ 75 ಕೋಟಿ ಮಾತ್ರ ಹಣ ನೀಡಿದೆ ಹಾಗಿದ್ದರೆ ಇದೇನಾ ತಾಂಡಾ ಜನರ ಮೇಲೆ ಇಟ್ಟ ವಿಶ್ವಾಸನಾ ಎಂದರು.
ಕುರುಬ, ಕಬ್ಬಲಿಗ ಸಮುದಾಯಗಳ ಎಸ್ಟಿಗೆ:
ಕುರುಬ ಮತ್ತು ಕಬ್ಬಲಿಗ ಸಮುದಾಯಗಳನ್ನು ಎಸ್ಟಿಗೆ ಸೇರಿಸುವಂತೆ ನಾವು 2-3 ಬಾರಿ ಒತ್ತಾಯಿಸಿದ್ದೇವೆ. ರಾಜ್ಯ ಮತ್ತು ಕೇಂದ್ರದಲ್ಲಿಯು ಬಿಜೆಪಿ ಸರಕಾರವಿದೆ ಈ ಸಮುದಾಯಗಳನ್ನು ಎಸ್ಟಿಗೆ ಸೇರಿಸಿ ನ್ಯಾಯ ದೊರಕಿಸುವ ಮನಸ್ಸು ನಿಮ್ಮಲ್ಲಿದೆಯಾ ಎಂದು ಪ್ರಶ್ನಿಸಿದರು.
ಮಾಜಿ ಜಲಸಂಪೂನ್ಮೂಲ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ಪ್ರಜಾಧ್ವನಿಎಂದರೆ ಜನರ ಧ್ವನಿ ಈ ಕಾರ್ಯಕ್ರಮವಾಗಿದೆ. ಬಿಜೆಪಿ, ಆರ್ಎಸ್ಎಸ್, ಸಂಘ ಪರಿವಾರದವರು ಯಾರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದವರಲ್ಲ. ಬರೀ ಬಿಟೀಷ ಏಜಂಟರಾಗಿ ಕೆಲಸ ಮಾಡಿದಂತವರು ಇಂತವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನೆ ಮಾಡುತ್ತಿದೆ. ನಮ್ಮ ಹಿರಿಯರು ಮಾಡೊರುವದನ್ನು ಪ್ರಧಾನಿ ಮೋದಿಯವರು ಮಾರಾಟ ಮಾಡಿಕೊಳ್ಳುತ್ತ ಕೋಟ್ಯಂತರ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿದೆ.
ಅಲ್ಲದೆ ರಾಜ್ಯದಲ್ಲಿ 40 ಪರ್ಸೆಂಟ್ ಸರಕಾರ ನಡೆಸುತ್ತಿದೆ ಎಂದು ಗುತ್ತಿಗೆದಾರರ ಸಂಘಟನೆ ಆರೋಪಿಸಿದೆ ಸಿದ್ಧರಾಮಯ್ಯ ಅಧಿಕಾರವಧಿಯಲ್ಲಿ 50ಸಾವಿರ ಕೋಟಿ ನೀರಾವರಿಗಾಗಿ ಮೀಸಟ್ಟಿತ್ತು ಅಲ್ಲದೆ ಈಗಿನ ಪ್ರಣಾಳಿಕೆಯಲ್ಲಿ 5 ವರ್ಷಗಳ ಅವಧಿಗೆ 200 ಸಾವಿರ ಕೊಟಿ ನೀರಾವರಿಗೆ ಮಿಸಲಿಡುವುದಾಗಿ ಭರವಸೆ ಕೊಟ್ಟಿದಲ್ಲದೆ ಬಡವರಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್, ವಸತಿ ಯೋಜನೆಯಡಿ ಮನೆಗಳು, ಅನ್ನಭಾಗ್ಯ ಯೋಜನೆಗೆ 10 ಕೆಜಿ ಅಕ್ಕಿ ಮುಂದುವರೆಸುವುದಾಗಿ ಸೇರಿದಂತೆ ಯೋಜನೆಯಗಳನ್ನು ಜಾರಿಗೆ ತರುವ ಭರವಸೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್.ಸಿ.ಮಹಾದೇವಪ್ಪ, ಪ್ರಕಾಶ ರಾಠೋಡ, ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ, ಮಾಜಿ ಶಾಸಕ ಶರಣಪ್ಪ ಸುಣಗಾರ, ಎಸ್.ಎಂ.ಪಾಟೀಲ ಗಣಿಹಾರ ಮಾತನಾಡಿದರು.