ದಿ.ಸುರೇಶ ಅಂಗಡಿಯವರಿಂದ ತೆರವಾಗಿದ್ದ ಬೆಳಗಾವಿ ಲೋಕಸಭಾ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯನ್ನಾಗಿ ಪಕ್ಷವು ಅಂಗಡಿಯವರ ಪತ್ನಿ ಶ್ರೀಮತಿ ಮಂಗಳಾ ಅವರಿಗೆ ಟಿಕೆಟ್ ನೀಡಲು ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಈಗ ಬೆಳಗಾವಿ, ಬಸವಕಲ್ಯಾಣ ಹಾಗೂ ಮಸ್ಕಿ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು ಬೆಳಗಾವಿಯಿಂದ ಕಾಂಗ್ರೆಸ್ ನಿಂದ ಸತೀಶ ಜಾರಕಿಹೊಳಿಯವರ ಸ್ಪರ್ಧೆ ಬಹುತೇಕ ಖಚಿತವಾಗಿದೆ.
ಬಸವಕಲ್ಯಾಣಕ್ಕೆ ಶರಣು ಸಲಗರ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಪ್ರತಾಪಗೌಡಾ ಪಾಟೀಲ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ ಎಂಬುದಾಗಿ ಪಕ್ಷದ ಪ್ರಕಟಣೆ ತಿಳಿಸಿದೆ.
ಉಳಿದಂತೆ ಹೊರರಾಜ್ಯಗಳಲ್ಲೂ ಉಪಚುನಾವಣೆಗಳು ನಡೆಯುತ್ತಲಿದ್ದು ಆಂಧ್ರಪ್ರದೇಶದ ತಿರುಪತಿ ಕ್ಷೇತ್ರಕ್ಕೆ ಶ್ರೀಮತಿ ಕೆ ರತ್ನ ಪ್ರಭಾ, ಝಾರ್ಖಂಡ್ ನ ಮಧುಪುರ ಕ್ಷೇತ್ರದಿಂದ ಗಂಗಾ ನಾರಾಯಣ ಸಿಂಗ್, ಮಧ್ಯಪ್ರದೇಶದ ದಾಮೋಹದಿಂದ ರಾಹುಲ್ ಸಿಂಗ್ ಹಾಗೂ ಮಿಜೋರಾಂ ನ ಸರ್ಚಿಪ್ ಕ್ಷೇತ್ರದಿಂದ ಲಾಲಹರಿಟೆಂಗಾ ಚೆಂಗಟೆ ಬಿಜೆಪಿಯ ಅಭ್ಯರ್ಥಿ ಗಳಾಗಿದ್ದಾರೆ.