ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ ಕ್ಷೇತ್ರದ ಜನತೆ ಈ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥೀ 20ರಿಂದ 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ವಿಶ್ವಾಸ ವ್ಯಕ್ತ ಪಡಿಸಿದರು.
ಪಟ್ಟಣದ ಚೌಧರಿ ಲೇಔಟನಲ್ಲಿರುವ ಬಿಜೆಪಿ ಅಭ್ಯರ್ಥಿಯ ಮನೆಯಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ದೇವಣಗಾಂವ ಮತ್ತು ಕನ್ನೋಳ್ಳಿ ಜಿಪಂ ಕ್ಷೇತ್ರಗಳ ಜವಾಬ್ದಾರಿ ನನಗಿದೆ ಆ ಕ್ಷೇತ್ರಗಳಲ್ಲಿ ಭೂಸನೂರ ಅವರ ಕಾರ್ಯ ಸಾದನೆಗಳ ಬಗ್ಗೆ ಮಾತನಾಡುತ್ತಿದ್ದಾರೆ ಅಲ್ಲದೆ ಕೋವಿಡ್ ಸಂದರ್ಭದಲ್ಲಿ ಅಧಿಕಾರವನ್ನು ಎಣಿಸದೇ ಜನರ ಸೇವೆ ಮಾಡಿದ್ದಾರೆ. ಕ್ಷೇತ್ರದ ಜನರ ನಾಡಿಮಿಡಿತ ಅರಿತಿದ್ದಾರೆ. ಕಳೆದ 2 ವರ್ಷದ ಅವಧಿಯಲ್ಲಿ ತಾರಾಪುರ, ತಾವರಖೇಡ, ಬ್ಯಾಡಗಿಹಾಳ ಗ್ರಾಮಗಳಲ್ಲಿ ಮಹಾಪುರ ಬಂದು 8660 ಜನ ರೈತರ 2256 ಹೆಕ್ಟೇರ ಜಮೀನು ಜಲಾವೃತವಾಗಿ ಬೆಳೆ ಹಾನಿಯಾಗಿದ್ದು 3453.08 ಲಕ್ಷ ಸರಕಾರ ಪರಿಹಾರ ಕೊಡಬೇಕಾಗಿದ್ದು 747.29 ಲಕ್ಷ ಇನ್ ಪುಟ್ ಸಬ್ಸಿಡಿಯನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗಿದೆ. ಇಲ್ಲಿಯವರೆಗೆ ಇಡೀ ಕ್ಷೇತ್ರದಲ್ಲಿ 2952.68 ಕ್ಷೇತ್ರವನ್ನು ತಂತ್ರಾಂಶದಲ್ಲಿ ನೋಡಲಾಗಿದ್ದು ರೈತರ ಖಾತೆಗೆ 25327 ಹೆಕ್ಟೇರ ಜಮೀನು ತಂತ್ರಾಂಶ ಮಾಡಲಾಗಿದೆ ಈ ಹಣವನ್ನು ಹಂತ ಹಂತವಾಗಿ ರೈತರ ಖಾತೆಗೆ ಜಮೆ ಮಾಡಲಾಗುವುದು ಮತ್ತು 2019ರಲ್ಲಿ ಮಹಾಪುರ ಬಂದಾಗ ಪ್ರತಿ ಬಾರಿ ಮಹಾಪುರ ಬಂದಾಗ ಜನರಿಗೆ ಉಳಿದುಕೊಳ್ಳಲು ಪುನರ್ ವಸತಿ ಕೇಂದ್ರಗಳನ್ನು ತೆರೆಯಬೇಕು ಎನ್ನುವ ಬೇಡಿಕೆ ಇಟ್ಟಿದ್ದರು. ಅಂದು ನೀಡಿದ ಭರವಸೆಯಂತೆ 358 ಜನರಿಗೆ ಹಕ್ಕು ಪತ್ರ ನೀಡಲಾಗಿದೆ ಅಲ್ಲದೆ ಪುನರ್ವಸತಿ ಕೇಂದ್ರಗಳಿಗೆ ಬೇಕಾಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯಲಾಗಿದ್ದು ಮುಂಬರುವ ದಿನಗಳಲ್ಲಿ ಪೂರೈಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಈ ಜಿಲ್ಲೆಯಲ್ಲಿ 2 ನೇ ಅಲೆ ಬಂದಾಗ ಆಕ್ಸಿಜನ ಕೊರತೆಯನ್ನು ನೀಗಿಸಲು 9 ಕಡೆಗಳಲ್ಲಿ ಆಕ್ಸಿಜನ್ ಘಟಕಗಳನ್ನು ತೆರೆಯಲಾಗಿದ್ದು ಅಲ್ಲದೆ ಸುಪರ್ ಸ್ಪೆಶಾಲಿಟಿ ಹಾಸ್ಪಿಟಲ್ 2 ನೇ ಹಂತದ ಕಟ್ಟಡ ನಿರ್ಮಾಣ ಅಗಬೇಕಾಗಿದ್ದು ಅದರ ಬಗ್ಗೆ ಆರೋಗ್ಯ ಸಚಿವ ಡಾ. ಸುಧಾಕರ ಅವರಲ್ಲಿ ಪ್ರಸ್ತಾವನೆ ಇಡಲಾಗಿದೆ, ಮುಂಬರುವ ದಿನಗಳಲ್ಲಿ ಅದು ಕಾರ್ಯಗತಗೊಳ್ಳುತ್ತದೆ. ವಿಮಾನ ನಿಲ್ದಾಣ ಕಾಮಗಾರಿ ಪ್ರಾರಂಭಿಸಲಾಗಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದ ಮೇಲೆ ಬೇರೆ ಬೇರೆ ರೀತಿಯ ಕಾಮಗಾರಿಗಳು ನಡೆಯುತ್ತಿವೆ ಆ ಕಾರಣಕ್ಕೆ ಈ ಕ್ಷೇತ್ರದ ಜನರು ಆಡಳಿತಾರೂಢ ಸರಕಾರವನನು ನೋಡಿ ನಮ್ಮ ಅಭ್ಯರ್ಥಿಯನ್ನು ಭರ್ಜರಿಯಾಗಿ ಗೆಲ್ಲಿಸಿಕೊಡುತ್ತಾರೆ ಎನ್ನುವ ಆತ್ಮವಿಶ್ವಾಸ ನನಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲೆಯ ಮಲ್ಲಮ್ಮ ಜೋಗುರ, ಲಲಿತಾ ಭೂಸನೂರ, ಶಿಲ್ಪಾ ಕುದರಗೊಂಡ, ಸಾವಯವ ಬೆಳೆ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜುಗೌಡ ಪಾಟೀಲ, ಮಂಡಲ ಅಧ್ಯಕ್ಷ ಈರಣ್ಣಾ ರಾವೂರ. ಪತ್ರಿಕಾ ಪ್ರತಿನಿಧಿಗಳಾದ ವಿಜಯ ಜೋಶಿ, ಸುದರ್ಶನ ಜಿಂಗಾಣಿ ಇದ್ದರು.