ಬೆಳಗಾವಿ: ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಬೆಳಗಾವಿ ಹಾಗೂ ತನ್ಮಯ ಚಿಂತನ ಚಾವಡಿ ಬೆಳಗಾವಿ ವತಿಯಿಂದ ಸ.ರಾ .ಸುಳಕೂಡೆ ಅವರು ಸಂಪಾದಿಸಿದ” ಸ್ವಾತಂತ್ರ್ಯ ಅಮೃತ ದಾರೆ “ಎಂಬ ಗ್ರಂಥ ಅವಲೋಕನ ಸಮಾರಂಭ ಮಂಗಳವಾರ ದಿನಾಂಕ 30 ಜನವರಿ 2023 ರಂದು ಮಹಾಂತೇಶ್ ನಗರದ ಮಹೇಶ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ ಕಾರ್ಯಕ್ರಮದ ಅಧ್ಯಕ್ಷತೆಯನ್ನುಹ ಹಿರಿಯ ಸಾಹಿತಿಗಳಾದ ಯು .ಎನ್. ಸಂಗನಾಳಮಠ ಹೊನ್ನಾಳಿ ದಾವಣಗೆರೆ ಜಿಲ್ಲೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಚಾರ್ಯರಾದ ಎಂ .ವಿ .ಭಟ್ ವಹಿಸಿಕೊಳ್ಳುವರು ಪುಸ್ತಕ ಅವಲೋಕನವನ್ನು ಶ್ರೀಮತಿ ಕಮಲಾ ಗಣಾಚಾರಿ ಅವರು ನಡೆಸಿ ಕೊಡಲಿದ್ದಾರೆ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ ಘಟಕದ ಅಧ್ಯಕ್ಷರಾದ ಸುರೇಶ ಹಂಜಿ, ತನ್ಮಯ ಪ್ರಕಾಶನದ ಅಶೋಕ ಉಳ್ಳಾಗಡ್ಡಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿಗಳಾದ ಎಂ.ವಾಯ್.ಮೆಣಸಿನಕಾಯಿ ಅವರು ಉಪಸ್ಥಿತರಿರುವರು ಸಾಹಿತ್ಯ ಆಸಕ್ತರು ಭಾಗವಹಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.