spot_img
spot_img

ಬ್ರಹ್ಮಶಿವ, ತಾತ್ವಿಕ ನೆಲೆಯ ಭಿನ್ನ ಕವಿ; ಡಾ. ಚಿತ್ತಯ್ಯ ಪೂಜಾರ

Must Read

- Advertisement -

ಬೆಳಗಾವಿ, ಜ 19: ಕನ್ನಡ ವಿಡಂಬನ ಕವಿ ಎಂದು ಖ್ಯಾತಿ ಪಡೆದ ಬ್ರಹ್ಮಶಿವ ತನ್ನ ತಾತ್ವಿಕ ನೆಲೆಯ ಭಿನ್ನ ವಿಚಾರಗಳಿಂದ ಧಾರ್ಮಿಕ ಚಿಂತನೆಗಳನ್ನು ತನ್ನ ಕೃತಿಯಾದ ಸಮಯ ಪರೀಕ್ಷೆಯಲ್ಲಿ ಪ್ರತಿಪಾದಿಸಿದ್ದಾನೆ. ಪರ ಧರ್ಮದ ವಿಚಾರಗಳನ್ನು ವಿಡಂಬನಾತ್ಮಕವಾಗಿ ಚಿತ್ರಿಸುತ್ತಾ ಅದಕ್ಕೆ ತಕ್ಕ ಉಪಮೇಯಗಳನ್ನು ನಿರೂಪಿಸುತ್ತಾನೆ. ಧಾರ್ಮಿಕ ಚಿಂತನೆಗಳನ್ನು ತನ್ನ ವಿಚಾರಗಳಿಂದ ಒರೆಗೆ ಹಚ್ಚುವ ಕಾರ್ಯ ಮಾಡಿದ್ದಾನೆ. ಕನ್ನಡದ ಬಂಡಾಯ ನೆಲೆಯನ್ನು ಈತನಲ್ಲಿ ಕಾಣಬಹುದು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿ ಆಯೋಜಿಸಿದ್ದ ‘ಬ್ರಹ್ಮಶಿವನ ಸಮಯ ಪರೀಕ್ಷೆ ಸ್ವರೂಪ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಡಾ. ಚಿತ್ತಯ್ಯ ಪೂಜಾರ ಇವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಸ್. ಎಮ್. ಗಂಗಾಧರಯ್ಯ ಅವರು ಮಾತನಾಡಿ ಬ್ರಹ್ಮಶಿವನ ಮರು ಓದು ಕಾರ್ಯವಾಗಬೇಕು ಬ್ರಹ್ಮ ಶಿವನ ವಿಚಾರ ಕತೃತ್ವ ಹೊಸ ವಿಚಾರಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು.

- Advertisement -

ಕಾರ್ಯಕ್ರಮದಲ್ಲಿ ಡಾ. ಗಜಾನನ ನಾಯ್ಕ, ಡಾ. ಮಹೇಶ್ ಗಾಜಪ್ಪನವರ, ಡಾ. ಶೋಭಾ ನಾಯಕ, ಡಾ. ಪಿ. ನಾಗರಾಜ, ಡಾ. ಅಶೋಕ ಮುಧೋಳ, ಎಂ.ಎ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

- Advertisement -
- Advertisement -

Latest News

ಬಡವರ ಮನೆ ಊಟ ಚಂದ ಸ್ಥಿತಿವಂತರ ಮನೇಲಿ ಆಟ ಚಂದ ಆದರೂ ಯಾರ ನೆಮ್ಮದಿ ಎಲ್ಲಿ ಅಡಗಿದೆಯೋ ಬಲ್ಲವರಾರು?

ಅಮ್ಮ ನಿನಗ್ ಎಷ್ಟ ಸಲ ಹೇಳಿದಿನಿ ಪಕ್ಕದ ಮನೆಗೆ ಹೋಗಬೇಡಾ ಅಂತ.ನಿನಗೆ ಬೇಜಾರಾದ್ರೆ ಟಿವಿ ನೋಡು,ನಿದ್ದೆ ಮಾಡು, ಬೇಕಿದ್ರೆ ಮನೇಲೆ ಭಜನೆ, ದೇವರ ನಾಮಸ್ಮರಣೆ ಇಂತದ್ದೇನೋ...
- Advertisement -

More Articles Like This

- Advertisement -
close
error: Content is protected !!
Join WhatsApp Group