ಬೈಲಹೊಂಗಲ – ಮಹಾಮಾರಿ ಕೊರೊನಾ ರೋಗವನ್ನು ತಡೆಗಟ್ಟಲು ಹಗಲಿರುಳು ಸದಾ ಶ್ರಮಿಸುತ್ತಿರುವ ಪೊಲೀಸ ಸಿಬ್ಬಂದಿಗೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ತಾಲೂಕ ಗುತ್ತಿಗೆದಾರರ ಸಂಘದ ಸದಸ್ಯರು ಗುರುವಾರ ಮುಂಜಾನೆ ವ್ಯವಸ್ಥೆ ಮಾಡಿದರು.
ತಾಲೂಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶಿವಾನಂದ ಮಡಿವಾಳರ, ಉಪಾಧ್ಯಕ್ಷ ಉದಯ ಬೆಳಗಾವಿ ಕಾರ್ಯದರ್ಶಿ ಬಸವರಾಜ ಸುತ್ತುಗಟ್ಟಿ ನೇತೃತ್ವದಲ್ಲಿ ಸಂಘದ ಸದಸ್ಯರಾದ ಅಬ್ದುಲ್ ರಜಾಕ್ ಬಾಗವಾನ್, ಶಿವಾನಂದ ದಿವಾನದ, ಚಂದ್ರಗೌಡ ನಾಗನಗೌಡರ, ಅಶೋಕ ಹೊಸೂರ, aದಾನಂದ ಮಠಪತಿ, ಶಂಕರ ಗಾಣಿಗೇರ, ನಿಂಗಪ್ಪ ಕುರಿ, ಬಸವರಾಜ ನರೇಗಲ್ಲ ಹಾಗೂ ಮಂಜುನಾಥ ಹುಲಮನಿ ಸೇರಿ ಪೊಲೀಸ್ ಸಿಬ್ಬಂದಿಯವರಿಗೆ ಉಪಾಹಾರ ನೀಡಿದರು.
ನಂತರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ, ಇಂಚಲ ಕ್ರಾಸಿನಲ್ಲಿ ಹಾಗೂ ರಾಣಿ ಚೆನ್ನಮ್ಮ ಸರ್ಕಲ್ಲಿನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರಿಗೆ ಉಪಾಹಾರ ನೀಡಿದರು ನಂತರ ಇಲ್ಲಿಯ ಸರ್ಕಾರಿ ಆಸ್ಪತ್ರೆಗೆ ತೆರಳಿ ಅಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳಿಗೆ ಹಾಗೂ ರೋಗಿಗಳಿಗೆ ಉಪಹಾರ ಹಣ್ಣು ಹಾಗೂ ನೀರಿನ ಬಾಟಲಿಗಳನ್ನು ನೀಡಿದರು.