- Advertisement -
ಕಾಮಾಕ್ಷಿಪಾಳ್ಯ ಬೆಂಗಳೂರು ನೇಕಾರ ಕುರುಹಿನಶೆಟ್ಟಿ ಸಮಾಜ ಸಂಘ ರಿ ಇವರಿಂದ 2023ನೇ ಸಾಲಿನ ನೂತನ ವರ್ಷದ ತೂಗು ಪಂಚಾಂಗವನ್ನು ( ಕ್ಯಾಲೆಂಡರ್ ) ಬಿಡುಗಡೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ನೇಕಾರ ಕುರುಹಿನಶೆಟ್ಟಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡುವ ಕಾರ್ಯಕ್ರಮವನ್ನು ಕುಲದೈವ ಶ್ರೀ ನೀಲಕಂಠೇಶ್ವರ ಸ್ವಾಮಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಕಾಮಾಕ್ಷಿಪಾಳ್ಯ ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷರಾದ ಗಟ್ಟಿ ಗುರುಮೂರ್ತಿ, ಕಾರ್ಯದರ್ಶಿಗಳಾದ ಬಂಗಿ ರಮೇಶ್, ಉಪಾಧ್ಯಕ್ಷರಾದ ಮುದಗಲ್ ಸಿದ್ದಪ್ಪ, ಖಜಾಂಚಿಗಳಾದ ಮಾದಗುಂಡಿ ಶ್ರೀನಿವಾಸ, ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀಮತಿ ರೂಪಾ ಲಿಂಗೇಶ್ವರ್, ಲಿಂಗೇಶ್ವರ್, ಸೇರಿದಂತೆ ಸಮಾಜ ಬಾಂಧವರು ಉಪಸ್ಥಿತರಿದ್ದರು.
- Advertisement -
ಮಲ್ಲಿಕಾರ್ಜುನ ಪೋಲಕಲ್
ಗಂಗಾವತಿ