ಕವನ

ಕವನ : ಸೈತಾನನ ಸಂತತಿ !!

ಸೈತಾನನ ಸಂತತಿ!! ಬಟ್ಟೆಯ ಬಿಚ್ಚಿಸಿ ನೋಡಿದರೆ ಧರ್ಮವು ಕಾಣುವುದೇ...!ನಡೆ ನುಡಿ ಸಹೃದಯಗಳಲಿ ಅಡಗಿದೆ ಮಾನವ ಧರ್ಮ...ಧರ್ಮದ ಅಮಲು ನೆತ್ತಿಗೇರಿಸಿ ನರ್ತನ ಮಾಡುವ ಅಧಮರೇಕ್ರೂರ ಮನದ ಕೊಲೆಗಡುಕ ಸೈತಾನನ ಸಂತತಿಯವರೇ...ಅರ್ಥವಾಗದು ದುರುಳ ಜನಕೆ ಕರುಳ ಸಂಬಂಧಗಳ ನೋವುಕಲಿಸುವುದು ಕಾಲವೇ ನಿಮಗೆ ಕೊಳಕು ಮನದ ಕ್ರಿಮಿಗಳೇ...ಪಹಲ್ಗಮ್ ನಲ್ಲಿ ನೆತ್ತರು ಸುರಿಸಿ ಬಲಿದಾನವಾದ ಸಹೋದರರೇಭಗವಂತ ಚಿರಶಾಂತಿ ನೀಡಲಿ ನಿಮಗಿದೋ ಸಾವಿರ ನಮನ...ಎ.ಎಸ್.ಗಡದವರ(ಅಡವೀಶ) ಹಿ.ಪ್ರಾ.ಕ.ಹೆ.ಮ.ಆಶ್ರಮ ಶಾಲೆ ದೇಶನೂರ - 591147 ತಾ:ಬೈಲಹೊಂಗಲ ಜಿ:ಬೆಳಗಾವಿ.

ಕವನ : ಒಡನಾಟ

ಒಡನಾಟ ಈಗೀಗ ಏಕೋ ಬೇಡವಾಗಿದೆ ಒಡನಾಟದ ಸವಿ ಕಾಲ ಒಂದಿತ್ತು ನನ್ನವರೆಂಬ ಭಾವ ಭಂಗಿ ಮರೆಯಾಯಿತು ನಡೆ ನುಡಿಯ ಬದಲಾವಣೆಗೆ. ಗೂಡಿನ ಹಕ್ಕಿಯ ಗರಿ ಬಲಿತಿದೆ ಹೊರಟಿದೆ ದಾಹ ತಣಿಸಲು ಮೋಹದ ಬಲೆ ಕಟ್ಟಿ ಕೊಂಡು ಜಗ ಜಟ್ಟಿಯಂತೆ ಅಖಾಡಕ್ಕಿಳಿದು ತನ್ನತನವ ಸಾಬೀತು ಪಡಿಸಲು. ಅನುಬಂಧದ ಗುಟುಕು ಹೀರಿದ್ದು ಸಂಬಂಧದ ಸವಿ ಉಂಡಿದ್ದು ಜೀವ ರಕ್ಷಕರಂತೆ ನಿಂತಿದ್ದು ಎಲ್ಲವೂ ಮುಸುಕಿನ ಗುಡ್ಡಾಟದಿ ಒದ್ದಾಡಿ ಒದ್ದಾಡಿ ನಲುಗಿದೆ. ಬಂಧ ಅನುರಾಗದ ಮುಸುಕಿನಲಿ ಬೆಳೆಸಿದ್ದು ಹೌದಾದರೂ ಕರ್ತವ್ಯ ನಿರ್ವಹಣೆ ಎಂದು ಕೈ ಚೆಲ್ಲಿ ಕುಳಿತು ಮುಂದೊಂದು...

ಕವನ : ಲಿಂಗಾಯತ ಸಾಫ್ಟವೇರ್ ಕರಪ್ಟಾಗಿದೆ

ಲಿಂಗಾಯತ ಸಾಫ್ಟ್‌ವೇರ್ ಕರಪ್ಟಾಗಿದೆ... ಕ್ಷಮಿಸಿ ವಚನ ಶಾಸ್ತ್ರ ಲಿಂಗಾಯತ ಸಾಫ್ಟ್‌ವೇರುಗಳೆಲ್ಲಾ ಕರಪ್ಟಾಗಿವೆಮೊನ್ನೆಮೊನ್ನೆ ಹಾಕಿಸಿದ ಶರಣರ ಮದರಬೋಡಿಗೆ ಮೆಮೊರಿ ಆಪ್ಷನ್ನೇ ತೆಗೆದುಹಾಕಲಾಗಿದೆಯಂತೆಈಗ ಅನುಭವ ಸಾಫ್ಟ್‌ವೇರೂ ಬರುವುದೇ ಹೀಗಂತೆ!ಬಸವ ಧರ್ಮ ಹೊಸ ಲ್ಯಾಪ್‌ಟಾಪಿಗೆ ಬ್ಯಾಟರಿ ಡ್ರೈವೇ ಇಲ್ಲಬಸವ ಭಕ್ತರ ಮೇನ್‌ಸ್ವಿಚ್ಚಿನೊಂದಿಗೆ ಕನೆಕ್ಷನ್ನೂ ಇಲ್ಲಅಲ್ಲದೆ ಯಾವ ನೆನಪೂ ಇಲ್ಲ ಮೆಮೋರಿ ಲಾಸಾಗಿದೆ, ಎಲ್ಲವೂ ಮರೆತಿದೆ...ಅರಿವಳಿಕೆ ತಿನ್ನುತ್ತ ಆಪರೇಷನ್ ಟೇಬಲ್ಲಿನ ಮೇಲೆ ಒಂಬತ್ತು ಶತಮಾನ ಕಳೆದದ್ದೂ ನೆನಪೇ ಇಲ್ಲಇದೀಗ ವಚನ ದರ್ಶನ ವೈರಸ್ ಒಳಗೆ ನುಸುಳಿದೆ. ಸಿಸ್ಟಮ್ ಕೆಟ್ಟು ಹೋಗಿದೆಮಠ ಸ್ವಾಮಿಗಳ ಫೈಲುಗಳಲ್ಲೂ, ಅಗ್ರಹಾರದ ಮುದ್ರೆ ಬಿದ್ದಿದೆ ಫೋಲ್ಡರುಗಳಲ್ಲೂ ಶರಣರು ವಿಂಡೋ ಬಂದಾಗಿದೆ..ಇನ್ನು ವೈರಸ್ ಗಾರ್ಡ್‌ಗಳಾಕಿ ಉಪಯೋಗವಿಲ್ಲ..ಮೆಮೋರಿ ಮರೆತ ನಿವೃತ್ತಿ ಅಧಿಕಾರಿಗಳ ಮೊದಲು...

ಕವನ : ಬೆಲೆಯಿಲ್ಲ ಭಾವನೆಗೆ

ಬೆಲೆಯಿಲ್ಲ ಭಾವನೆಗೆ ಭಾವನೆಗಳಿಗೆ ಬೆಲೆ ಇಲ್ಲ ಮನುಜ ಮೋಹದ ಬಲೆ ಸಹಜ ಕೊಟ್ಟು ತೆಗೆದು ಕೊಳ್ಳುವ ಇರಾದೆಯಲಿ ಒಗ್ಗಟ್ಟು ಬರೀ ನೆಪದ ತೆರದಲಿ.ನಾನೆಂಬ ಗರಿ ಮೂಡಿ ನೀನೆಂಬ ಭೇದ ಹರಡಿ ಬೆನ್ನಿಗೆ ಚೂರಿ ಹಾಕುವ ಹುನ್ನಾರ ಚೆನ್ನಿಗನ ಮಾತಂತೆ ಬಿಡಾರ.ಹೊದಿಕೆಗೆ ಹೂಡಿಕೆ ಮಾಡಿ ಒಳ ಮರ್ಮ ತಿಳಿಯದೆ ತಡಕಾಡಿ ಗಾಳಕ್ಕೆ ಸಿಕ್ಕ ಮೀನು ಕಲಿಗಾಲದ ಬಳುವಳಿ ನೀನು.ಸಂಪತ್ತಿನ ನಶೆಗೆ ವಿಪತ್ತು ಆಹ್ವಾನಿಸಿದ ಬಗೆಗೆ ವಿಷಪ್ರಾಶನವಾದ ಆಹಾರ ಮೋಸದ ಜಾಲಕೆ ಆಕರ.ಡಂಭಾಚಾರದ ಬದುಕಿಗೆ ಮಾನವೀಯತೆ ತೆರೆ...

ಕವನ : ಮೋಹಕ ಚೆಲುವೆ

ಮೋಹಕ ಚೆಲುವೆ ಬಾಂದಳದಿ ಹೊಳೆಯುವ ತಿಂಗಳ ಬೆಳಕಿನ ಶ್ವೇತವರ್ಣೆ ನನ್ನ ಚೆಲುವೆ ಬೆಳಗುವ ನಿನ್ನ ಕಣ್ಣುಗಳಲಿ ಈ ಚೆಲುವನ ರೂಪವೇ ಅಡಗಿಕೊಂಡಿರುವುದ ನಾ ಬಲ್ಲೆ ನಾಚಿ ನೀರಾದ ಮೊಗ್ಗಿನ ಮುಡಿಯಂತಿರುವ ನಿನ್ನ ಚೆಂದುಟಿ ರುಧಿರ ವರ‍್ಣದ ಚೆಂಗುಲಾಬಿಯಲ್ಲವೇ ಚೆಲುವೆ ?ನಾಟ್ಯ ಮಯೂರಿಯ ಕುಣಿತ ನಾಚಿಸುವ ನಿನ್ನ ಹೆಜ್ಜೆಯ ನಾದಗಳು ಎದೆ ಝಲ್ಲೆನಿಸಿ ತುಂತುರು ಮಳೆಯ ಸಿಂಚನದಂತೆ ನಾಟ್ಯವಾಡಿ ಮನವ ತಣಿಸುತಿವೆ ಆಗಸದಿ ಹೊಳೆಯುವ ಚೆಲುವಿನ ಮೋಹಕ ತಾರೆ ನೀನಲ್ಲದೆ ಮತ್ತಾರು ಹೇಳು ಚೆಲುವೆ ?ನನ್ನ ಮನದ...

ಕವನ : ಕೆಂಪು ಸೂರ್ಯ

ಕೆಂಪು ಸೂರ್ಯಕಪ್ಪು ಮಣ್ಣಿನ ದಲಿತ ಕೇರಿಯ ಮಹಾರಾಷ್ಟ್ರದ ಕೆಂಪು ಸೂರ್ಯ. ಬುದ್ಧ ಬಸವ ಮಾರ್ಕ್ಸ್ ಪುಲೆ ಶಾಹು ಚಿಂತನ ಬರಿಗಾಲಿನ ಪಯಣ ಕಿತ್ತು ತಿನ್ನುವ ಬಡತನ ಶೃದ್ಧೆ ಶ್ರಮದ ಗೆಳೆತನ ಕೊಲಂಬಿಯಾ ಶಿಕ್ಷಣ ನೂರು ಪದವಿಯ ಜಾಣ ಸತ್ಯ ಸಮತೆಯ ಬಾಣ ಹಗಲಿರುಳು ಕಠಿಣ ಕಾರ್ಯ ಬರೆದಿಟ್ಟರು ಲಿಖಿತ ಘಟನಾ ಭಾರತ ದೇಶದ ಮಾನ ಸಮ್ಮಾನ ಡಾ ಅಂಬೇಡ್ಕರರ ದಿವ್ಯ ಜ್ಞಾನ ನ್ಯಾಯಕ್ಕಾಗಿ ಘೋಷಣಾ ಇಲ್ಲವಾಯಿತು ಶೋಷಣಾ ಬನ್ನಿ ಭಾರತೀಯರೇ ಉಳಿಸುವ ನಮ್ಮ ಸಂವಿಧಾನ. ಕೆಂಪು ಸೂರ್ಯ ಮುಳಗಲಾರ ಸಮಾನತೆಯ ಹರಿಕಾರ ಬಾಬಾ ಸಾಹೇಬ ಅಮರ...

ಕವನ : ಸುಣಧೋಳಿಯ ಶ್ರೀಗುರು

ಸುಣದೋಳಿಯ ಶ್ರೀ ಗುರುಗಟ್ಟಿ ಇರಲಿ ತಂಗಿ ನಿನ್ನ ಭಾವ ಭಂಗಿ ನಾನು 'ದೊಡ್ಡಾಕೆಂದು ಕುಣಿಬ್ಯಾಡ ಹಿಗ್ಗಿ ಗುರುವಿನ ಮರೆತು ಮಾಡಬ್ಯಾಡ ನೀ ಸುಗ್ಗಿ|| ಪ ||ಮನದ ಮೈಲಿಗೆ ತೊಳಕೋರ ಶಿರಬಾಗಿ ನಾನು 'ಹೋದರೆ ವರವಾಗಿ ಶಿವಯೋಗಿ ಹೀನ ದುರ‍್ಗುಣಗಳನ್ನು ನೀ ನೀಗಿ ಬಂದರೆ ಅಪ್ಪಿಕೊಳ್ಳದೆ ಬಿಡದಿಹನು ಶಿವಯೋಗಿಸತಿಸುತರ ಚಿಂತ್ಯಾಗ ಯತಿವರನ ಮರತ್ಯಾಕ ಪಂಚಾಕ್ಷರಿ ಮಂತ್ರ ಪಠಿಸಿದರ ಸಾಕ ಸುಣದೋಳಿ ಯೋಗಿ ಬರತಾನ ಹಂತ್ಯಾಕಹಗ್ಗವಿಲ್ಲದ ತೇರ ಹಿಗ್ಗಿಲೆ...

ಕವನ : ದೇವ ಮಾನವ ಬಾಬಾ ಸಾಹೇಬ 

ದೇವ ಮಾನವ ಬಾಬಾ ಸಾಹೇಬ  ಆ ದೇವರನ್ನು ಕಂಡಿಲ್ಲ ನಾವು ದೇವರನ್ನು ನಿಮ್ಮಲ್ಲಿಯೇ ಕಂಡು ಕೊಂಡೆವು ನಾವು ಅಕ್ಷರಶಃ ದೈವೀ ಗುಣಗಳನ್ನು ಮೈಗೂಡಿಸಿಕೊಂಡ ನಿಜವಾದ ದೇವರು ನೀವು ದೇವತಾ ಮನುಷ್ಯರು ನೀವು ಮನುಜರೆಲ್ಲ ಒಂದೇ ನಮ್ಮಲ್ಲಿ ಹರಿವ ರಕ್ತ ಒಂದೇ ಈ ಭೂಮಿಯ ಬೆಳಕು, ಹರಿಯುವ ನೀರು ಒಂದೇ ಎಂದು ಸಮಾನತೆಯ ಮಾನವೀಯತೆಯ ತತ್ವಗಳನು ಎಲ್ಲರಿಗೂ ತಿಳಿಸಿದ ದೇವರು ನೀವು. ಹಿಂದುಳಿದ ಸಮಾಜಕ್ಕಷ್ಟೇ ಅಲ್ಲದೇ ಮಹಿಳೆಯರ ಮತ್ತು               ...

ಎರಡು ಕವನಗಳು

 ಮಹಾಮನೆಯ ಮಹಾಮಗಳು _____________________ ಮಹಾಮನೆಯ ಮಗಳು ಉರಿಯು೦ಡ ಕರ್ಪುರ ಕದಳಿಯ ಕತ್ತಲೆಯ ಬೆಳಗುವ ಮಹಾಬೆಳಗು ಅಕ್ಕರೆಯ ಅಕ್ಕ ಮಹಾದೇವಿಯಕ್ಕ ತೊರೆದು ಕೌಶಿಕನರಮನೆ ಹೊರಟಳು ಕಲ್ಯಾಣಕೆ ತುಂಡು ಕಂಬಳಿ ಹೊತ್ತು ತವರ ಮೋಹವ ಬಿಟ್ಟು ತರು ಗುಲ್ಮ ಲತೆ ಹೂವು ಪಶು ಪಕ್ಷಿ ದುಂಬಿಯ ಸ್ನೇಹ ತೊಟ್ಟು ಮಗಳೆ೦ದು ಕರೆದೊಯ್ದ ಅನುಭವದ ಮಂಟಪಕೆ ಅಣ್ಣ ಬಸವಣ್ಣ ಶರಣರ ದಂಡು ಅಲ್ಲಮರ ಪ್ರಶ್ನೆಗೆ ಕೊಟ್ಟಳು ಉತ್ತರ ಅಪರೂಪದ ಅನುಭಾವ ಚೆಲುವಿನ ಚಿತ್ಕಳೆ ಜ್ಞಾನದ ಜ್ಯೋತಿ ಉಡತಡಿಯ ಉಡುಗೊರೆ ಕಲ್ಯಾಣದ ಐಸಿರಿ ಶ್ರೀಶೈಲಕೆ ನಡೆ ನಿಂತಳು ಗುರು ಲಿಂಗವಿಡಿದು ಚೆನ್ನಮಲ್ಲಿಕಾರ್ಜುನರ ನೆರಳು ಮಹಾಮನೆಯ...

ಎರಡು ಕವನಗಳು

ಇದ್ದ ಅಲ್ಲಮ ಇಲ್ಲದಂತೆ  ------------------------------ ಕಲ್ಯಾಣ ಹಣತೆ ಭಕ್ತಿ ರಸ ತೈಲ ಅನುಭವ ಅಬ್ಬರ ಚಿಂತನೆ ಹೊರಗೆ ದುಡಿ ಮದ್ದಳೆ ಸದ್ದು ಒಳಗೊಳಗೆ ಮಿಡಿವ ತಂತಿ ಕಾಣಲಾಗದ ತೋರಬಾರದ ಮಹಾ ಘನವ ತೋರಿ ಅರಿವು ಮರೆಯ ಜಾಣ. ಅಂಧ ಮೌಡ್ಯಕೆ ಬಾಣ ಜಗದ ಭೂತಲದ ಕಾಲಜ್ಞಾನ ಶಬ್ದದೊಳಗಿನ ಮಹಾ ನಿಶಬ್ದ ಬೀಜದೊಳಗಿನ ಉಲಿವ ಮರ. ವ್ಯೋಮ ಕಾಯದ ಬಯಲು ಮಂತ್ರ ಗೌಪ್ಯದ ಮುನ್ನುಡಿ ಅನುಭೂತಿಯ ಕನ್ನಡಿ ಅಲ್ಲಾನ ಆಗಮನ ಲಾಮಾನ ನಿರ್ಗಮನ ಮಧ್ಯ ಅಲ್ಲಮ ನಿನ್ನ ಜನನ ಜ್ಞಾನದ ಚಿಜ್ಜ್ಯೋತಿ ವೈರಾಗ್ಯದ ಮೂರುತಿ ವಚನಗಳ...
- Advertisement -

Latest News

ಕವನ : ಸಮರದ ಮಾತು

ಸಮರದ ಮಾತು ಅದೆಷ್ಟು ಇವೆ ನಿನ್ನ ಮಾತಿನ ಸಮರದ ಬಾಣಗಳು ಎದೆಯ ಗುಂಡಿಗೆಯನು ಸೀಳಿ ನಿಂತಿವೆವೀರ ಪರಾಕ್ರಮದ ಕೂಸೂ ನಾನಲ್ಲ ನಿನ್ನ ಜೊತೆ ಹೋರಾಡಿ ಜಯಿಸುವ ಶಕ್ತಿಯೂ ನನ್ನಲಿಲ್ಲ ಏಕೆಂದರೆಆ ಶಕ್ತಿ ಎಲ್ಲವನ್ನೂ ಕಿತ್ತು ಕೊಂಡ ವೀರ ಯೋಧ ಮಾತಿನ...
- Advertisement -
close
error: Content is protected !!
Join WhatsApp Group