spot_img
spot_img

ಚಿಕ್ಕ ಮಕ್ಕಳ ಉಚಿತ ಹೃದಯ ತಪಾಸಣಾ ಶಿಬಿರ

Must Read

spot_img
- Advertisement -

ಸವದತ್ತಿ:ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ತ್ಯ ಕಾರ್ಯಕ್ರಮ ಹಾಗೂ ವಿಹಾನ್ ಹಾರ್ಟ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹುಬ್ಬಳ್ಳಿ ಇವರ ಜಂಟಿ ಸಹಯೋಗದಲ್ಲಿ ಸವದತ್ತಿ ತಾಲೂಕಿನ ೧೮ ವರ್ಷ ವಯಸ್ಸಿನ ಒಳಗಿನ ಶಾಲಾ ಮಕ್ಕಳಿಗೆ ಈ ಸಂದರ್ಭದಲ್ಲಿ ಉಚಿತ ತಪಾಸಣೆ ನಡೆಸಲಾಯಿತು.

ಸಾಮಾನ್ಯವಾಗಿ, ಹೃದಯರಕ್ತನಾಳದ ಕಾಯಿಲೆಯು ಹೃದಯದ ಮೇಲೆ ಪರಿಣಾಮ ಬೀರುವ ಅಸ್ವಸ್ಥತೆಗಳ ವ್ಯಾಪ್ತಿಯನ್ನುವಿವರಿಸುತ್ತದೆ. ರಕ್ತನಾಳಗಳ ಕಿರಿದಾಗುವಿಕೆ ಹೃದ್ರೋಗದ ಸಾಮಾನ್ಯ ರೂಪವಾಗಿದೆ. ಸಿವ್ಹಿಡಿ ಪರಿಧಮನಿಯ ಕಾಯಿಲೆ ಸೇರಿದಂತೆ ರೋಗಗಳನ್ನು ಒಳಗೊಳ್ಳುತ್ತದೆ; ಹೃದಯದ ಲಯದ ತೊಂದರೆಗಳು, ಅಥವಾ ಆರ್ಹೆತ್ಮಿಯಾ; ಹೃದಯ ಸೋಂಕುಗಳು; ಮತ್ತು ಜನ್ಮಜಾತ ಹೃದಯ ದೋಷಗಳು.ಇಂತಹ ತೊಂದರೆ ಗಳನ್ನು ಆರಂಭಿಕ ಹಂತದಲ್ಲಿ ಕಂಡು ಕೊಂಡು ತಪಾಸಣೆ ಜರುಗಿಸುವ ಮೂಲಕ ಹೃದಯ ಕ್ಕೆ ಆಗುವ ತೊಂದರೆ ನಿವಾರಿಸಲು ಅನುಕೂಲ ಎಂದು ಡಾ ಅರುಣ ಬಬಲೇಶ್ವರ ಈ ಸಂದರ್ಭದಲ್ಲಿ ತಿಳಿಸಿದರು.

ವೇದಿಕೆಯಲ್ಲಿ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ವೈ ಬಿ ಕಡಕೋಳ. ಡಿ. ಎಲ್ ಭಜಂತ್ರಿ. ರಾಷ್ಟ್ರೀಯ ಬಾಲ ಸ್ವಾಸ್ತ್ಯ ಕಾರ್ಯ ಕ್ರಮ ದ ವೈದ್ಯರಾದ ಡಾ. ಶಿವನಗೌಡ ಹಚಡದ, ಡಾ.ಗೀತಾ ಸೂಡಿ, ಡಾ. ಶಶಿಕಲಾ ತಡಕೋಡ, ಡಾ.ವಿಜಯಲಕ್ಷ್ಮೀ ಹುಚ್ಚೇಲಿ, ಡಾ.ಖಾಜಪ್ಪ ಹೊಸಮನಿ,  ಮಕ್ತುಂಬಿ ಹಂಪಿಹೊಳಿ, ಸಂಜೀವ ಪರಪ್ಪನವರ ಉಪಸ್ಥಿತರಿದ್ದ ರು.

- Advertisement -

ತಾಲೂಕಿನ ವಿವಿಧ ಭಾಗಗಳಿಂದ ತಮ್ಮ ಮಕ್ಕಳೊಂದಿಗೆ ಆಗಮಿಸಿದ್ದ ಪಾಲಕರು ಮಕ್ಕಳ ಆರೋಗ್ಯ ತಪಾಸಣೆ ಯಲ್ಲಿ ಪಾಲ್ಗೊಂಡು ತಮ್ಮ ಮಕ್ಕಳ ಹೃದಯ ತಪಾಸಣಾ ಶಿಬಿರ ವನ್ನು ಯಶಸ್ವಿಗೊಳಿಸಿದರು.

ತಪಾಸಣಾ ಶಿಬಿರ ದ ಪ್ರಾರಂಭದಲ್ಲಿ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ಡಿ ಎಲ್ ಭಜಂತ್ರಿ ಸ್ವಾಗತಿಸಿದರು. ಡಾ. ಶಿವನಗೌಡ ಹಚಡದ ಕಾರ್ಯ ಕ್ರಮ ದ ಉದ್ದೇಶ ತಿಳಿಸಿದರು. ವೈ ಬಿ ಕಡಕೋಳ ನಿರೂಪಿಸಿದರು. ಡಾ. ಗೀತಾ ಸೂಡಿ ವಂದಿಸಿದರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ನಾಗೂರಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

ಹುನಗುಂದ: ತಾಲೂಕಿನ ನಾಗೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಮಕ್ಕಳ ಕಲಿಕಾ ಹಬ್ಬ ನಡೆಯಿತು. ಕ್ಲಸ್ಟರಿನ ಹನ್ನೆರಡು ಶಾಲೆಗಳಿಂದ ಆಗಮಿಸಿದ 100ಕ್ಕೂ...
- Advertisement -

More Articles Like This

- Advertisement -
close
error: Content is protected !!
Join WhatsApp Group