“ಸಿದ್ಧ ಕಲ್ಯಾಣ” ಗೌರವ ಗ್ರಂಥ ಬಿಡುಗಡೆಗೆ ಅಭಿನಂದನೆಗಳು

Must Read

ಶರಣ ಸಾಹಿತಿ ದಂಪತಿಗಳಾದ ಪ್ರೋ. ಸಿದ್ಧಣ್ಣ ಲಂಗೋಟಿ ಮತ್ತು ಡಾ. ಕಲ್ಯಾಣಮ್ಮ ಲಂಗೋಟಿ ಇವರ ಕುರಿತು ಪ್ರಕಟಗೊಂಡಿರುವ “ಸಿದ್ಧ ಕಲ್ಯಾಣ” ಗೌರವ ಗ್ರಂಥ ಬಿಡುಗಡೆ ಸಮಾರಂಭವು ರವಿವಾರ ದಿನಾಂಕ: 05/12/2021 ರಂದು ಸಾಯಂಕಾಲ 6 ಗಂಟೆಗೆ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠ, ಇಳಕಲದಲ್ಲಿ ಜರುಗಲಿದೆ.

ಈ ಗ್ರಂಥದ ಪ್ರಕಟಣಾ ಸಮಿತಿಯ ಗೌರವ ಅಧ್ಯಕ್ಷರು ಪರಮ ಪೂಜ್ಯರಾದ ಶ್ರೀ.ಮ.ಘ.ಚ. ಡಾ. ಬಸವಲಿಂಗ ಪಟ್ಟದ ದೇವರು ಹಿರೇಮಠ ಸಂಸ್ಥಾನ, ಬಾಲ್ಕಿ, ಪೂಜ್ಯಶ್ರೀ ಗುರುಮಹಾಂತ ಸ್ವಾಮಿಗಳು ಚಿತ್ತರಗಿ ಸಂಸ್ಥಾನಮಠ ಇಳಕಲ್ಲ, ಪೂಜ್ಯಶ್ರೀ ವಿ. ಸಿದ್ಧರಾಮಣ್ಣ ಶರಣರು ಬಸವ ಬಳಗ ದಾವಣಗೆರೆ, ಪೂಜ್ಯಶ್ರೀ ಶಿವಾನಂದ ಗುರೂಜಿ ಬಸವಗುರು ತಪೋವನ ಶಿರಮಗೊಂಡನಹಳ್ಳಿ ಇವರ ನೇತೃತ್ವದಲ್ಲಿ ನಿರೂಪಿತಗೊಂಡಿದೆ.

ಈ ಗ್ರಂಥದ ಪ್ರಧಾನ ಸಂಪಾದಕರು ವೀರಶೆಟ್ಟಿ ಬಾವುಗೆ ಶರಣ ಸಾಹಿತಿಗಳು, ಬಾಲ್ಕಿ ಮತ್ತು ಪ್ರೊ. ಪ್ರಭಾವತಿ ಕಣವಿ ಕವಿಯಿತ್ರಿ ರಾಮದುರ್ಗ ಇವರು ನಾಡಿನ ಮಠಾಧೀಶರನ್ನು, ವಿದ್ವಾಂಸರನ್ನು ಸಾಹಿತಿ,ಲೇಖಕರನ್ನು ಸಂಪರ್ಕಿಸಿ 11 ವಿಭಾಗಗಳಲ್ಲಿ ಪ್ರೊ. ಸಿದ್ಧಣ್ಣ ಹಾಗೂ ಡಾ.ಕಲ್ಯಾಣಮ್ಮ ಅವರ ಶೈಕ್ಷಣಿಕ, ಧಾರ್ಮಿಕ, ಆಧ್ಯಾತ್ಮಿಕ, ಸಾಹಿತ್ಯಿಕ, ಸಾಂಸ್ಕೃತಿಕ, ಸಾಧನೆಗಳನ್ನು ಅತ್ಯಂತ ಅರ್ಥ ಪೂರ್ಣವಾಗಿ ಈ ಗ್ರಂಥದಲ್ಲಿ ಕಟ್ಟಿಕೊಟ್ಟಿದ್ದಾರೆ.

ಭಾಗ-1 ನಾಡಿನ ಮಠಾಧೀಶರ ಹಾಗೂ ಗಣ್ಯರ ಶುಭಹಾರೈಕೆ ಸಂದೇಶಗಳನ್ನು ಹೊಂದಿದೆ. ಭಾಗ-2 ರಲ್ಲಿ ಪ್ರೊ. ಸಿದ್ಧಣ್ಣ ಹಾಗೂ ಡಾ. ಕಲ್ಯಾಣಮ್ಮ ಅವರ ಪರಿಚಯ ಲೇಖನಗಳಿವೆ. ಭಾಗ-3 ರಲ್ಲಿ ಗೌರವ ಅಧ್ಯಕ್ಷರ ಲೇಖನಗಳು ಇವೆ. ಭಾಗ-4 ರಲ್ಲಿ ಕವಿ ಸಾಹಿತಿಗಳ ಲೇಖನಗಳಿವೆ,ಭಾಗ-5 ರಲ್ಲಿ ಕವಿಗಳ ದೃಷ್ಟಿಯಲ್ಲಿ ಸಿದ್ಧಕಲ್ಯಾಣರ ಕುರಿತು ಕವನಗಳಿವೆ. ಭಾಗ-6 ರಲ್ಲಿ ಆಧುನಿಕ ವಚನಕಾರರ ಸಿದ್ಧ ಕಲ್ಯಾಣ ಕುರಿತು ಆಧುನಿಕ ವಚನಕಾರರು ಬರೆದ ವಚನಗಳಿವೆ. ಭಾಗ-7 ರಲ್ಲಿ ಮರಾಠಿ ಸಾಹಿತಿಗಳ ಲೇಖನಗಳಿವೆ. ಭಾಗ-8 ರಲ್ಲಿ ಹಿಂದಿ ಸಾಹಿತಿಗಳ ಲೇಖನಗಳು, ಭಾಗ-9 ರಲ್ಲಿ ಇಂಗ್ಲೀಷ ಸಾಹಿತಿಗಳ ಲೇಖನಗಳು, ಭಾಗ-10 ರಲ್ಲಿ ಪ್ರೊ. ಸಿದ್ಧಣ್ಣ ಹಾಗೂ ಡಾ. ಕಲ್ಯಾಣಮ್ಮ ಸಾಹಿತ್ಯ ಕೃತಿಗಳ ಕುರಿತು. ಕವಿ ಸಾಹಿತಿಗಳ ಅಭಿಪ್ರಾಯಗಳಿವೆ. ಭಾಗ-11 ರಲ್ಲಿ ಕವಿ ಕುವೆಂಪು ದರ್ಶನ- ಸಂದರ್ಶನ, ರಾಷ್ಟ್ರನಾಯಕ ಎಸ್. ನಿಜಲಿಂಗಪ್ಪ ದರ್ಶನ-ಸಂದರ್ಶನ ವರನಟ ಡಾ. ರಾಜಕುಮಾರ ಅವರ ದರ್ಶನ-ಸಂದರ್ಶನ ಲೇಖನಗಳಿವೆ. ಇದಲ್ಲದೆ ಪ್ರೊ. ಸಿದ್ಧಣ್ಣ ಮತ್ತು ಡಾ. ಕಲ್ಯಾಣಮ್ಮ ಅವರ ವಂಶಾವಳಿ ವಿವರಗಳಿವೆ. “ಬಸವ ಬೆಳಗು” ತ್ರೈಮಾಸಿಕ ಪತ್ರಿಕೆಯ ವಿಜ್ಞಾಪನೆಗಳಿವೆ.

ಸಿದ್ಧ ಕಲ್ಯಾಣ ಈ ಅಭಿನಂದನಾ ಗ್ರಂಥವು ಪ್ರೊ. ಸಿದ್ಧಣ್ಣ ದಂಪತಿ ಅವರು ದೇಶ ವಿದೇಶಗಳಲ್ಲಿ ಶರಣ ಸಾಹಿತ್ಯವನ್ನು ಮನೆ ಮನಗಳಿಗೆ ತಲುಪಿಸಿದ ನಿಸ್ವಾರ್ಥ ಸೇವೆಯ ವಿಹಂಗಮ ನೋಟವಿವೆ. ಪ್ರೊ. ಸಿದ್ಧಣ್ಣನವರು ತತ್ವಶಾಸ್ತ್ರ, ಹಿಂದಿ, ಕನ್ನಡ, ಸ್ನಾತಕೋತ್ತರ ಪದವಿ ಪಡೆದವರು ಯೋಗ ಶಾಸ್ತ್ರ ಮತ್ತು ಕಾನೂನು ಪದವಿ ಧರರು ಅದರಂತೆ ಡಾ. ಕಲ್ಯಾಣಮ್ಮನವರು ಕನ್ನಡ ಸ್ನಾತಕೋತ್ತರ ಪದವಿಯೊಂದಿಗೆ ಯೋಗ ಮತ್ತು ಪಿ.ಎಚ್.ಡಿ ಪದವಿಯ ಸಂಶೋದಕಿಯಾಗಿ ಪ್ರಸಿದ್ಧಿ ಹೊಂದಿದವರು.

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ರಹವಾಸಿಯಾಗಿರುವ ಇವರು. ಶರಣ ಸಾಹಿತಿ ದಂಪತಿಗಳಾಗಿ ಸರ್ವರಿಗೂ ಚಿರಪರಿಚಿತರು. ಇವರೀರ್ವರ ಸಾಹಿತ್ಯ ಮತ್ತು ಧಾರ್ಮಿಕ ಸೇವೆಯನ್ನು ಅವರ ಅಭಿಮಾನಿಗಳು ಮೆಟ್ಟಿಕೊಂಡು 1072 ಪುಟಗಳ ಬೃಹತ್ “ಸಿದ್ಧಕಲ್ಯಾಣ” ಎಂಬ ಗ್ರಂಥವನ್ನು ಅರ್ಪಿಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಈ ಅಭಿನಂದನಾ ಗ್ರಂಥದಲ್ಲಿ ರಾಜ್ಯ ಹೊರರಾಜ್ಯಗಳ ಒಟ್ಟು 393 ಸಾಹಿತಿಗಳು, ಲೇಖಕರು, ಕವಿಗಳು, ಲೇಖನ, ಕವನ, ಆಧುನಿಕ ವಚನಗಳನ್ನು ಬರೆದಿರುವುದು ಸ್ವಾರಸ್ಯಕರವಾಗಿದೆ.

“ಸಿದ್ಧಕಲ್ಯಾಣ” ನಮ್ಮ ದೇಶದ ಸ್ವಾತಂತ್ರ್ಯ ಅಮೃತಮಹೋತ್ಸವದ ಶುಭಗಳಿಗೆಯಲ್ಲಿ ನಾಡಿನ ಪೂಜ್ಯರು ಸಾಹಿತಿಗಳು, ಅಭಿಮಾನಿಗಳು ಇವರ ಸಮ್ಮುಖದಲ್ಲಿ ವೈಚಾರಿಕತೆಯ, ಕ್ರಾಂತಿಯ ಇಳಕಲದ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದಲ್ಲಿ ಬಿಡುಗಡೆಯಾಗುತ್ತಿರುವುದು ಬಸವ ಬೆಳಗಿನ ಭಾಗವೇ ಆಗಿದೆ. ಈ ಗ್ರಂಥ ಬಿಡುಗಡೆ ಸಮಾರಂಭವು ಯಶಸ್ವಿಯಾಗಲೆಂದು ಹೊಂಬೆಳಕು ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಸ.ರಾ. ಸುಳಕೂಡೆ, ಕಕ್ಕಯ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅಶೋಕ ಉಳೇಗಡ್ಡಿ, ಸ್ವದೇಶಿ ವಿಜ್ಞಾನ ಆಂದೋಲನ ಕರ್ನಾಟಕದ ಬೆಳಗಾವಿ ಜಿಲ್ಲಾ ಘಟಕ ಖಜಾಂಚಿ, ಸೋಮಪ್ಪ ವಾಲಿಕರ ತನ್ಮಯ ಪ್ರಕಾಶ ಸಂಚಾಲಕಿ ಶೋಭಾ ಇಂಡಿ ಹಾಗೂ, ಜನಪರ ಸೇವಾ ಸಂಸ್ಥೆಯ ಕಾರ್ಯದರ್ಶಿ ಅಶೋಕ ಹಲಗಲಿ, ಡಾ. ಡಿ.ಎಸ್. ಕರ್ಕಿ ಪ್ರತಿಷ್ಠಾನ ಇವರುಗಳು ಶುಭಕೋರಿದ್ದಾರೆ.


ಅಶೋಕ ಉಳೇಗಡ್ಡಿ
ರಾಮತೀರ್ಥ ನಗರ, ಬೆಳಗಾವಿ.
ಮೊ: 9964885728

- Advertisement -
- Advertisement -

Latest News

ಪುಸ್ತಕ ಪರಿಚಯ

ಪುಸ್ತಕದ ಹೆಸರು :- "ಬಸವ ಜನ್ಮಸ್ಥಳ ಬಸವನಬಾಗೇವಾಡಿ ಕ್ಷೇತ್ರ ಚರಿತ್ರೆ"ಲೇಖಕರು :- ಮುರುಗೇಶ ಸಂಗಮ (೯೪೪೯೪೩೭೬೦೪) ಬೆಲೆ :- ೧೧೦ನಮ್ಮ ಜ್ಞಾನ ವಿಸ್ತರವಾಗಬೇಕಾದರೆ ಪುಸ್ತಕ ಓದುವ ಹವ್ಯಾಸ...
- Advertisement -

More Articles Like This

- Advertisement -
close
error: Content is protected !!
Join WhatsApp Group