- Advertisement -
ಬೆಳಗಾವಿ: ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಿಗೆ (ಬಿಐಇಆರ್ ಟಿ) ಮೂರು ದಿನಗಳ ಕಾಲ ಜರುಗಲಿರುವ ತರಬೇತಿ ಕಾರ್ಯಾಗಾರ ಕ್ಕೆ ಸಿದ್ದತೆ ಕುರಿತು ಬೆಳಗಾವಿ ಯ ಉಪನಿರ್ದೇಶಕರ ಕಾರ್ಯಾಲಯದಲ್ಲಿ ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿಗಳಾದ ಕೆ ಎಸ್ ನಂದೇರ ಹಾಗೂ ಜಿಲ್ಲಾ ಯೋಜನಾ ಸಹಾಯಕ ಸಮನ್ವಯಾಧಿಕಾರಿಗಳಾದ ಎಸ್. ಡಿ. ನದಾಫ್ ಇವರ ನೇತೃತ್ವದಲ್ಲಿ ಸಭೆ ಜರುಗಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿ ಗಳಾದ ಎಸ್. ಎನ್. ಕಮ್ಮಾರ (ಖಾನಾಪುರ) ಮತ್ತು ವೈ. ಬಿ. ಕಡಕೋಳ (ಸವದತ್ತಿ) ಮತ್ತು ಡಿ. ಡಿ. ಪಿ. ಐ ಕಛೇರಿಯ ತಾಂತ್ರಿಕ ಸಹಾಯಕ ರಾದ ರೋಹಿಣಿ ನಾಯ್ಕ ಉಪಸ್ಥಿತರಿದ್ದು ತರಬೇತಿಯ ವೇಳಾಪಟ್ಟಿ. ಅವಧಿ ಹಂಚಿಕೆ ಕುರಿತು ಮಾಹಿತಿಯನ್ನು ಹಂಚಿಕೊಂಡರು.