- Advertisement -
ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ಕೋರೋನಾ ವೈರಸ್ ಆರ್ಭಟ ಸಂದರ್ಭದಲ್ಲಿ ಹಗಲು ರಾತ್ರಿ ಕೆಲಸ ಮಾಡಿದ ಕೋರೋನಾ ವಾರಿಯರ್ಸ್ ಅವರನ್ನು ಏಕತಾ ಫೌಂಡೇಶನ್ ವತಿಯಿಂದ ಸನ್ಮಾನಿಸಲಾಯಿತು.
ಬೀದರ್ ಜಿಲ್ಲೆಯಲ್ಲಿ ಏಕತಾ ಫೌಂಡೇಷನ್ ಹಲವಾರು ಕಾರ್ಯಕ್ರಮ ಮಾಡುತ್ತಾ ಬಂದಿದ್ದು ಇಂದು ಔರಾದ ತಾಲ್ಲೂಕಿನ ಸಂತಪೋರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಧ್ಯಕ್ಷ ರವಿ ಸ್ವಾಮಿ ಕೋರೋನಾ ವಾರಿಯರ್ಸ್ ಗೆ ಸನ್ಮಾನ ಮಾಡಿದರು.
- Advertisement -
ಈ ಸಂದರ್ಭದಲ್ಲಿ ಭಾಗಿಯಾಗಿದ್ದ ಡಾ.ಲಕ್ಷ್ಮಿಕಾಂತ .ಪಿ ಎಸ್ ಐ ಸಿದ್ದಲಿಂಗಯ್ಯ ಉಪಸ್ಥಿತರಿದ್ದರು.
ಏಕತಾ ಫೌಂಡೇಷನ್ ಕಾರ್ಯಕ್ರಮಕ್ಕೆ ಇಡಿ ಬೀದರ್ ಜಿಲ್ಲೆಯ ಜನರ ಮೆಚ್ಚುಗೆ ಹರ್ಷ ವ್ಯಕ್ತಪಡಿಸಿದರು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ