- Advertisement -
ಸಿಂದಗಿ: ಚಾಂದಕವಠೆ ಗ್ರಾಮದಲ್ಲಿ ದಿನೇ ದಿನೇ ಕೊರೋನಾ ರೋಗಿಗಳು ಹೆಚ್ಚುತ್ತಿರುವ ಕಾರಣ ಇಂದು ಗ್ರಾಮದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಕನ್ಹೇರಿ ಮಠದ ಕೊರೋನಾ ಇಮ್ಯುನಿಟಿ ಬೂಸ್ಟರ್ ಅನ್ನು ವಿಶ್ವ ಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶೇಖರಗೌಡ ಹರನಾಳ ಹಾಗೂ ಬಿಜೆಪಿ ಮಂಡಲ ಅಧ್ಯಕ್ಷರಾದ ಈರಣ್ಣ ರಾವೂರ್ ಅವರು ಚಾಲನೆ ನೀಡಿದರು.
ಹಾಗೂ ಬಜರಂಗದಳ ತಾಲೂಕ ಸಂಯೋಜಕರಾದ ಯಮನಪ್ಪ ಚೌಧರಿ ಅವರು ಗ್ರಾಮದ ಕೊರೋನಾ ವಾರಿಯರ್ಸ್ ಗಳಾದ ವೈದ್ಯರು, ಆಶಾ ಕಾರ್ಯಕರ್ತೆಯರು, ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಿದರು.
ಇದೆ ಸಂಧರ್ಭದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸದಾಶಿವ ಬುಯಿನ್, ಬಸು ಪಟ್ಟಣ, ವೈದ್ಯರಾದ ಡಾಕ್ಟರ್ ಪತ್ತಾರ,ಪಂಡಿತ ಚೌಧರಿ, ಸಂತೋಷ್ ಬಿರಾದಾರ, ಲಕ್ಷ್ಮಣ ಮಸಳಿ, ಸಂತೋಷ ಕಂಟಿಗೊಂಡ, ಸಚಿನ ಹವಳಗಿ, ಬಸವರಾಜ ಬಿರಾದಾರ, ಚೇತನ್ ಚೌಧರಿ, ಮುದುಕು ನಾವಿ, ಅನಿಲ ಕಂಟಿಗೊಂಡ, ಅನಿಲ ಜೋಳದ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.