spot_img
spot_img

ಕವನ: ಓಗೊಟ್ಟು ಬರುವಳು ಶಾಂಭವಿ

Must Read

- Advertisement -

ಓಗೊಟ್ಟು ಬರುವಳು ಶಾಂಭವಿ

ಮೈಸೂರ ಸಿಲ್ಕ್ ಸೀರೆ ಉಟ್ಟು/
ಮೈಸೂರ ಪಾಕ್ ಬಾಯಲ್ಲಿಟ್ಟು/
ಹೋಗೋಣ ಗೆಳತಿ ಸರ-ಸರನೆ/
ಜಂಬೂಸವಾರಿ ಸಡಗರವ ನೋಡುದಕ/

ನಾಡ ಹಬ್ಬ ದಸರಾ ಚಂದ/
ಮೈಸೂರ ಅರಮನೆ ಏನ ಚಂದ/
ಆನೆಯ ಅಂಬಾರಿ ಮ್ಯಾಲೆ ದೇವಿಯು/
ಚಾಮುಂಡಿ ತಾಯಿಯು ಕುಳಿತಿಹಳು/

ಒಂಬತ್ತು ದಿವಸ ನಾವು ಮುತೈದೆಯರು ಎಲ್ಲರೂ/
ಬನ್ನಿಗಿಡವ ಪೂಜೆ ಮಾಡಿ ಉಡಿಯ ತುಂಬೋಣ/
ಆದಿಶಕ್ತಿಯಲ್ಲಿ ನಾವು ವರವನು ಕೇಳೋಣ/
ಘಟ್ಟ ಹಾಕಿ,ದೀಪಾ ಹಚ್ಚಿ ಉಪವಾಸ ಮಾಡೋಣ/

- Advertisement -

ಆಯುಧ ಪೂಜೆ ಮಾಡೋಣ ಗೆಳತಿ/
ಮಾವಿನ ತೋರಣ ಕಟ್ಟೋಣ ಗೆಳತಿ/
ಚಂಡು ಹೂ,ತರ-ತರದ ಹೂವಿಂದ ಶೃಂಗಾರ ಮಾಡೋಣ/
ಸಿಹಿ ಅಡುಗೆ ಮಾಡಿ ನಾವು ಎಡೆಯ ಹಿಡಿಯೋಣ/

ಬನ್ನಿ ಮುಡದ ಬಂದರು ಗೆಳತಿ/
ಮೈಸೂರ ಪೇಟ ಧರಿಸ್ಯಾರ ಗೆಳತಿ/
ದೇವಿ ಪುರಾಣ ಕೇಳಿ ನಾವು ಪಾವನರಾಗೋಣ/
ಬನ್ನಿ ಕೊಟ್ಟು ಬಂಗಾರದಂಗ ಬಾಳೋಣರಿ./

- Advertisement -

ಅಂಬೆ ಎಂಬ ಕೂಗಿಗೆ ಓಗೊಟ್ಟು ಬರುವಳು ಶಾಂಭವಿದೇವಿ/
ಬಂದ ಕಷ್ಟಗಳನ್ನೆಲ್ಲಾ ಸರಿಸಿ ಹರಸುವಳು ಕಾಳಿಕಾದೇವಿ/
ದುಷ್ಟರನು ಸಂಹರಿಸಿ,ಶಿಷ್ಟರನು ರಕ್ಷಿಸುವಳು ರುಂಡಮಾಲಿನಿದೇವಿ/
ನವರಾತ್ರಿ ವೈಭವದ ಸಿರಿದೇವಿ,ಎಲ್ಲರನು ರಕ್ಷಿಸುವಳು ಉಧೋ..ಉಧೋ..ಎಲ್ಲಮ್ಮದೇವಿ./


ಶ್ರೀಮತಿ-ಕಸ್ತೂರಿ ಎಸ್ ಬಿ.

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group