spot_img
spot_img

ವಿದ್ಯಾರ್ಥಿಯ ಸಾವು; ಸಿಲಿಂಡರ್ ಸ್ಫೋಟದ ಶಂಕೆ

Must Read

spot_img
- Advertisement -

ಮೂಡಲಗಿ: ತಾಲೂಕಿನ ನಾಗನೂರ ಗ್ರಾಮದ ಶಿವಪ್ಪ ಪ್ಯಾಟಿ ಎಂಬುವರ ಮಗ ಶ್ರೀಧರ  ಶಿವಪ್ಪ ಪ್ಯಾಟಿ  (19) ಸಿಲಿಂಡರ ಸ್ಪೋಟಗೊಂಡು ಸಾವನಪ್ಪಿರುವ ದುರ್ಘಟನೆ ಶುಕ್ರವಾರ ಸಂಭವಿಸಿದೆ.

ಮೂಡಲಗಿಯಲ್ಲಿ ಕಾಲೇಜಿನ  BSC  ನಸಿ೯ಂಗ ವ್ಯಾಸಂಗ ಮಾಡುತ್ತಿದ್ದ ಶ್ರೀಧರ  ತಂದೆ ತಾಯಿಗಳು ಊರಿಗೆ ಹೋಗಿರುವ ಸಂದರ್ಭದಲ್ಲಿ ಶುಕ್ರವಾರ ಸಂಜೆ ಕಾಲೇಜಿನಿಂದ ಮನೆಗೆ ಬಂದು ಚಹಾ ಮಾಡಲು ಸಿಲಿಂಡರ ಹೊತ್ತಿಸಿದ ಸಂದರ್ಭದಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆಯೆನ್ನಲಾಗಿದೆ.

ಅನಿಲ ಸೋರಿಕೆಯಿಂದ ಬೆಂಕಿ ತಗುಲಿ ಆಸ್ಪತ್ರೆಗೆ ಸಾಗಿಸುವ ಮಾಗ೯ ಮಧ್ಯೆ ಶ್ರೀಧರ ಸಾವನ್ನಪ್ಪಿದ್ದಾನೆ ಎಂದು ಸಾವ೯ಜನಿಕರಿಂದ ತಿಳಿದು ಬಂದಿದೆ.

- Advertisement -

ಗ್ಯಾಸ ಕಂಪನಿಯವರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ನಂತರ ಇದು ಗ್ಯಾಸ ಸಿಲಿಂಡರದಿಂದ ಆಗಿದೆಯೋ ಇಲ್ಲವೊ ಎಂದು ಗೊತ್ತಾಬೇಕಾಗಿದೆ. ಮೃತ ವಿದ್ಯಾರ್ಥಿಯ ತಂದೆ ಶಿವಪ್ಪ ಪ್ಯಾಟಿ ನಾಗನೂರ ಸರಕಾರಿ ಶಾಲೆಯ ಶಿಕ್ಷಕರಾಗಿದ್ದು ಘಟನೆಯ ದಿನ ತಂದೆ ತಾಯಿಗಳು ರಾಮದುಗ೯ ತಾಲೂಕಿನ ಶಿವಪೇಟೆ ಗ್ರಾಮಕ್ಕೆ ಹಬ್ಬಕ್ಕೆ ಎಂದು ಹೋಗಿದ್ದರೆನ್ನಲಾಗಿದೆ. ಶಿವಪ್ಪ ಪ್ಯಾಟಿ ಇವರಿಗೆ ಮೂರು ಜನ ಗಂಡು ಮಕ್ಕಳು ಪ್ರಥಮ ಪ್ರುತ್ರನೆ ಶ್ರೀಧರ ಸ್ಥಳಕ್ಕೆ ಮೂಡಲಗಿ ಪೋಲಿಸ ಅಧಿಕಾರಿಗಳು ಭೇಟಿಯಿತ್ತು ಘಟನಾ ಸ್ಥಳವನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

- Advertisement -
- Advertisement -

Latest News

ವಿಶ್ವ ಶಾಂತಿಗೆ ಕುವೆಂಪು ಚಿಂತನೆಗಳೇ ದಾರಿದೀಪ : ಡಾ. ಭೇರ್ಯ ರಾಮಕುಮಾರ್

ಇಂದು ವಿಶ್ವವನ್ನು ಕಾಡುತ್ತಿರುವ ಹಿಂಸೆ, ಭಯೋತ್ಪಾದನೆ, ಯುದ್ಧಗಳ ನಿವಾರಣೆಗೆ ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ತತ್ವವೊಂದೇ ಪರಿಹಾರ ಎಂದು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group