ಮೂಡಲಗಿ: ಬರಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಳಸಲಾಗುವ ವಿದ್ಯುನ್ಮಾನ ಮತಯಂತ್ರದ ಪ್ರಾತ್ಯಕ್ಷಿಕೆಯನ್ನು ಮೂಡಲಗಿ ದಿವಾಣಿ ಹಾಗೂ ಜೆಎಮ್ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶೆ ಜ್ಯೋತಿ ಪಾಟೀಲ ವೀಕ್ಷಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ದಂಡಾಧಿಕಾರಿ ಪ್ರಶಾಂತ ಚನಗೊಂಡ ಮಾತನಾಡಿ, ವಿದ್ಯುನ್ಮಾನ ಮತಯಂತ್ರ ಕುರಿತಂತೆ ಮತದಾರರಲ್ಲಿ ಇರುವ ಗೊಂದಲಗಳ ಪರಿಹಾರಕ್ಕಾಗಿ ಹಾಗೂ ಮಾದರಿ ಮತದಾನ ವಿವರಿಸುವ ಈ ಪ್ರಾತ್ಯಕ್ಷಿಕೆಯ ಪ್ರಯೋಜನವನ್ನು ಎಲ್ಲ ಮತದಾರರು ಪಡೆದುಕೊಂಡು ಇತರರಿಗೂ ಮಾಹಿತಿ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಸಾರ್ವಜನಿಕರಿಗೆ ತಿಳಿಸಿದರು.
ಚುನಾವಣೆ ನೀತಿ ಸಂಹಿತೆ ಜಾರಿಯಾಗುವವರೆಗೂ ಅರಭಾವಿ ಕ್ಷೇತ್ರದಲ್ಲಿ ಪ್ರತಿ ಹಳ್ಳಿಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದರು.
ಈ ಸಮಯದಲ್ಲಿ ಅರಭಾವಿ ಮತಕ್ಷೇತ್ರದ ಸೆಕ್ಟರ ಅಧಿಕಾರಿಗಳಾದ ಬಿಇಒ ಅಜಿತ ಮನ್ನಿಕೇರಿ, ತಾ.ಪಂ ಇಒ ಎಫ್.ಜಿ.ಚಿನ್ನನವರ, ಸಿಡಿಪಿ ಯಲ್ಲಪ್ಪ ಗದಾಡಿ ಮತ್ತು ತಾಲೂಕಾ ಶಿರಸ್ತೆದಾರ ಪರಸಪ್ಪ ನಾಯಿಕ, ಚುನಾವಣಾ ವಿಷಯ ನಿರ್ವಾಹಕ ಪಿ.ಎಸ್.ಕುಂಬಾರ ಹಾಗೂ ಗೋಪಾಲ ಭಸ್ಮೆ ಮತ್ತಿತರರು ಇದ್ದರು.