spot_img
spot_img

ಧನ್ವಂತರಿ ಜಯಂತಿ

Must Read

- Advertisement -

ಚಂದ್ರ ವಂಶದಲ್ಲಿ ಹುಟ್ಟಿದ ಧೀರ್ಘತಮನ ಮಗನಾಗಿ ಹುಟ್ಟಿದವ ಈ ಧನ್ವ0ತರಿ ದೇವ.‌ ಚಂದ್ರನಂತಹ ಹಾಲಿನ ಬೆಳಕಿನ ಬಣ್ಣ ಹೊಂದಿದವ. ಆ ಚಂದ್ರ ಮಂಡಲದಲ್ಲಿ ಧನ್ವಂತರಿ ಎರಡು ಕೈಗಳಲ್ಲಿ ಅಮೃತ ಕಲಶಗಳನ್ನು ಹಿಡಿದಿದ್ದಾನೆ.

ಇವನು ಕಮಲದಂತೆ ಅಗಲವಾದ  ಕಣ್ಣುವುಳ್ಳ , ಅಶ್ವಿನಿ ದೇವತೆಗಳಿಂದ ಸ್ತೋತ್ರಿಸಿಕೊಂಡು ಪೂಜಿತನಾಗಿ ಅನುಗ್ರಹಿಸಿದವನು. ಚಂದ್ರನ ಮೂಲಕ ಧರೆಯ  ತಾಪವನ್ನು ಓಡಿಸಿ , ಚಂದ್ರನಿಂದ ಜನಿಸಿದ ಗಿಡ ‌ಬಳ್ಳಿ , ಪೊದೆಗಳ ಬೆಳಿಸಿ ಔಷಧಯನ್ನು‌ ಧನ್ವಂತರಿ‌ ಕೊಡುವನು.

ತುಳಸಿಯ ಜನಕ ಧನ್ವಂತರಿ.  ಧನ್ವಂತರಿಯ ಆನಂದ ಭಾಷ್ಪಗಳು ಅಮೃತ ಕಲಶದಲ್ಲಿ ಬಿದ್ದಾಗ ಅದರಿಂದ ಜನಿಸಿದವಳೆ ತುಳಸಿ.

- Advertisement -

ಮುಂದೆ ಸುರಾಸುರರು ಮಂದಾರ ಪರ್ವತ  ತಂದು ಸಮುದ್ರದಲ್ಲಿ ಮಥಿಸಿದಾಗ  ನಗುನಗುತ್ತಾ ಅಮೃತ  ಕಲಶ ಹಿಡಿದು ಹುಟ್ಟಿದ ಈ ಧನ್ವಂತರಿ ದೇವಗೆ ಸಮನಾರು ಇಲ್ಲ. ಅಂತಹ ನಿನ್ನ ಮಹಿಮೆಗೆ ನಮಸ್ಕಾರಗಳು. ಬ್ರಹ್ಮ , ರುದ್ರಾದಿ , ದೇವತಾ ಸಮೂಹ , ಋಷಿಗಳು ಕೂಡಿ ಎಲ್ಲರೂ ಸ್ತುತಿಸುವರು. ದಶ ದಿಕ್ಕುಗಳಲ್ಲಿ ವೈದ್ಯಮೂರ್ತಿ ಸರ್ವ ಪ್ರಾಣಿಗಳ ಇಂದ್ರಿಯ ರೋಗಗಳನ್ನು ಕಳೆಯುತ್ತಾನೆ.

ಪ್ರತಿ ಮನುಷ್ಯನು ತಾನು ಮಾಡಬೇಕಾದ ಕರ್ಮಗಳಲ್ಲಿ ಅನುಕ್ಷಣವು ಅವನ ನೆನೆದರೆ , ಆರೋಗ್ಯ ಶುಭದಾಯಕ ಆಗುವದು.


ಪ್ರಿಯಾ ಪ್ರಾಣೇಶ ಹರಿದಾಸ‌ ಆದರ್ಶ ನಗರ ವಿಜಯಪುರ

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group