- Advertisement -
ಬೈಲಹೊಂಗಲ – ವಿಶ್ವವನ್ನೇ ಕಾಡುತ್ತಿರುವ ಕರೋನಾ ಮಹಾಮಾರಿ ತೊಲಗಿ ಮನುಕುಲದ ಜೀವನ ಸಂವರ್ಧನೆಯಾಗಲಿ ಎಂದು ಯೋಗಗುರು ಡಾ.ಸಂಗಮೇಶ ಸವದತ್ತಿಮಠ ಹೇಳಿದರು.
ಅವರು ಗುರುವಾರ ಪಟ್ಟಣದ ವೈದ್ಯ ಯೋಗ ಶಾಲಾ ಶಿಬಿರಾರ್ಥಿಗಳು, ಹೆಲ್ಪಿಂಗ ಹ್ಯಾಂಡ್ಸ ತಂಡ ಹಾಗೂ ತಮ್ಮ ವೈಯುಕ್ತಿಕವಾಗಿ ಆಹಾರದ ಪೊಟ್ಟಣಗಳನ್ನು ತಮ್ಮ ಮನೆಯಲ್ಲಿ ತಯಾರಿಸಿ ಕಡುಬಡವರಿಗೆ ವಿತರಿಸಿ ಮಾತನಾಡಿ, ಲಾಕಡೌನ್ ಹಿನ್ನೆಲೆಯಲ್ಲಿ ಎಲ್ಲರೂ ಮನೆಯಲ್ಲೇ ಉಳಿದಿದ್ದಾರೆ ಕೈಗೆ ಕೆಲಸವಿಲ್ಲ. ಹಣದ ಕೊರತೆಯಿದೆ. ಇಂತಹ ಕಷ್ಟದ ಸಮಯದಲ್ಲಿ ಜನರಿಗೆ ನೆರವಾಗುತ್ತಿದ್ದೇವೆ ಎಂದರು.
ಮುಂದಿನ ದಿನಮಾನಗಳಲ್ಲಿ ತಾಲೂಕಿನ ಎಲ್ಲ ಬಡ ಜನತೆಗೆ ಆಹಾರದ ಕಿಟ್ಗಳನ್ನು ಪೂರೈಸುವ ಯೋಜನೆ ಇದೆ ಎಂದರು.
- Advertisement -
ಸತೀಶ ದೊಡ್ಡಮನಿ, ಈಶ್ವರ ಶಿಲ್ಲೇದಾರ ಹಾಗೂ ಹೆಲ್ಪಿಂಗ ಹ್ಯಾಂಡ್ಸ ತಂಡದ ಸದಸ್ಯರು ಇದ್ದರು.