spot_img
spot_img

ಸೊಗಲದಲ್ಲಿ ಪ್ರಾಣಿಗಳಿಗೆ ಆಹಾರ ವಿತರಣೆ

Must Read

- Advertisement -

ಬೈಲಹೊಂಗಲ: ಓಂಕಾರ ಸಮಗ್ರ ಗ್ರಾಮೀಣ ಸೇವಾ ಸಂಘ (ರಿ) ನೇತೃತ್ವದಲ್ಲಿ ಇಂದು ಬೈಲಹೊಂಗಲ ತಾಲೂಕಿನ ಶ್ರೀಕ್ಷೇತ್ರ ಸೊಗಲ ಗ್ರಾಮದಲ್ಲಿ ಪ್ರಾಣಿಗಳಿಗೆ ಆಹಾರ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷರು ಸೋಮಯ್ಯ ಪಾಟೀಲ, ಹಲವು ಕಡೆಗೆ ಪ್ರವಾಸಿಗರ ಸಂಖ್ಯೆ ಕಡಿಮೆ ಆಗುತ್ತಿರುವುದರಿಂದ ಪ್ರಾಣಿಗಳಿಗೆ ಆಹಾರದ ಕೊರತೆಯಾಗುತ್ತಿದೆ. ಮನುಷ್ಯರಾದರೆ ಬಾಯಿ ಬಿಟ್ಟು ತಮ್ಮ ಹಸಿವನ್ನು ತೋಡಿಕೊಳ್ಳುತ್ತಾರೆ.

ಆದರೆ ಮೂಕ ಪ್ರಾಣಿಗಳು ಪ್ರವಾಸಿಗರತ್ತ ಆಶಾಭಾವನೆಯಿಂದ ಆಹಾರಕ್ಕಾಗಿ ನೋಡುತ್ತವೆ, ಒಂದು ಕಡೆಗೆ ಪ್ರವಾಸಿಗರ ಸಂಖ್ಯೆ ಕಡಿಮೆ ಮತ್ತೊಂದೆಡೆ ಪ್ರವಾಸಿಗರ ಖಾಲಿ ಕೈಗಳು ಮೂಕ ಪ್ರಾಣಿಗಳ ಹಸಿವು ನೀಗದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

- Advertisement -

ಈ ಸಂದರ್ಭದಲ್ಲಿ ಸಂಘದ ಸದಸ್ಯರು ಶ್ರೀಮತಿ ಶಶಿಕಲಾ ಹಿರೇಮಠ, ಬೈಲಹೊಂಗಲ ತಾಲೂಕು ಪ್ರಮುಖರು ನಿರ್ಗುಣ ರೇವಣ್ಣವರ, ಗುರುರಾಜ ಉಳ್ಳಿಗೇರಿ, ಪ್ರಸಾದ್ ಪಾಟೀಲ್, ಸೊಗಲ ಗ್ರಾಮದ ನಾಗರಾಜ್ ಹಾಗೂ ಅನೇಕ ಸದಸ್ಯರು ಪಾಲ್ಗೊಂಡಿದ್ದರು.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಮಂಗದಿಂ ಮಾನವನು ಜನಿಸಿಬಂದೆನ್ನುವರು ಈಗಿರುವ ಮಂಗದಿಂ ಜನಿಸನೇಕೆ ? ಮಂಗ ಮಾನಸದಿಂದ ಮನುಜ‌ ಮಾನಸವೆಂಬ ಸಿದ್ಧಾಂತ ಸರಿಯೇನೋ ! - ಎಮ್ಮೆತಮ್ಮ ಶಬ್ಧಾರ್ಥ ಮಂಗ = ಕೋತಿ. ಮಾನಸ = ಮನ. ಮನುಜ...
- Advertisement -

More Articles Like This

- Advertisement -
close
error: Content is protected !!
Join WhatsApp Group