ಸೊಗಲದಲ್ಲಿ ಪ್ರಾಣಿಗಳಿಗೆ ಆಹಾರ ವಿತರಣೆ

Must Read

ಬೈಲಹೊಂಗಲ: ಓಂಕಾರ ಸಮಗ್ರ ಗ್ರಾಮೀಣ ಸೇವಾ ಸಂಘ (ರಿ) ನೇತೃತ್ವದಲ್ಲಿ ಇಂದು ಬೈಲಹೊಂಗಲ ತಾಲೂಕಿನ ಶ್ರೀಕ್ಷೇತ್ರ ಸೊಗಲ ಗ್ರಾಮದಲ್ಲಿ ಪ್ರಾಣಿಗಳಿಗೆ ಆಹಾರ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷರು ಸೋಮಯ್ಯ ಪಾಟೀಲ, ಹಲವು ಕಡೆಗೆ ಪ್ರವಾಸಿಗರ ಸಂಖ್ಯೆ ಕಡಿಮೆ ಆಗುತ್ತಿರುವುದರಿಂದ ಪ್ರಾಣಿಗಳಿಗೆ ಆಹಾರದ ಕೊರತೆಯಾಗುತ್ತಿದೆ. ಮನುಷ್ಯರಾದರೆ ಬಾಯಿ ಬಿಟ್ಟು ತಮ್ಮ ಹಸಿವನ್ನು ತೋಡಿಕೊಳ್ಳುತ್ತಾರೆ.

ಆದರೆ ಮೂಕ ಪ್ರಾಣಿಗಳು ಪ್ರವಾಸಿಗರತ್ತ ಆಶಾಭಾವನೆಯಿಂದ ಆಹಾರಕ್ಕಾಗಿ ನೋಡುತ್ತವೆ, ಒಂದು ಕಡೆಗೆ ಪ್ರವಾಸಿಗರ ಸಂಖ್ಯೆ ಕಡಿಮೆ ಮತ್ತೊಂದೆಡೆ ಪ್ರವಾಸಿಗರ ಖಾಲಿ ಕೈಗಳು ಮೂಕ ಪ್ರಾಣಿಗಳ ಹಸಿವು ನೀಗದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಂಘದ ಸದಸ್ಯರು ಶ್ರೀಮತಿ ಶಶಿಕಲಾ ಹಿರೇಮಠ, ಬೈಲಹೊಂಗಲ ತಾಲೂಕು ಪ್ರಮುಖರು ನಿರ್ಗುಣ ರೇವಣ್ಣವರ, ಗುರುರಾಜ ಉಳ್ಳಿಗೇರಿ, ಪ್ರಸಾದ್ ಪಾಟೀಲ್, ಸೊಗಲ ಗ್ರಾಮದ ನಾಗರಾಜ್ ಹಾಗೂ ಅನೇಕ ಸದಸ್ಯರು ಪಾಲ್ಗೊಂಡಿದ್ದರು.

Latest News

ಸನಾತನ ಧರ್ಮ ಎಂದಿಗೂ ನಶಿಸುವುದಿಲ್ಲ – ಅಭಿನವ ಮಂಜುನಾಥ ಸ್ವಾಮೀಜಿ

ಮೂಡಲಗಿ: ‘ಭಾರತದ ಸನಾತನ ಹಿಂದೂ ಧರ್ಮವು  ಶಾಶ್ವತವಾಗಿರುವಂತದ್ದು ಅದು ಎಂದಿಗೂ ನಶಿಸಿ ಹೋಗುವಂತದಲ್ಲ’ ಎಂದು ಹುಕ್ಕೇರಿ ಕ್ಯಾರಗುಡ್ಡ ಮಠದ ಅಭಿನವ ಮಂಜುನಾಥ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಕಲ್ಲೋಳಿಯ...

More Articles Like This

error: Content is protected !!
Join WhatsApp Group