- Advertisement -
ಸವದತ್ತಿ – ತಾಲೂಕಿನಾದ್ಯಂತ ಕೋವಿಡ್ ಲಾಕ್ ಡೌನ್ ಜಾರಿ ಮಾಡಿರುವುದರಿಂದ ತಾಲೂಕಿನ ಬಹಳಷ್ಟು ಪ್ರೇಕ್ಷಣೀಯ ಸ್ಥಳಗಳು ಸಂಪೂರ್ಣ ಬಂದ ಆಗಿರುವುದರಿಂದ ಪ್ರೇಕ್ಷಣೀಯ ಸ್ಥಳಗಳಲ್ಲಿ ವಾಸವಾಗಿರುವ ಪ್ರಾಣಿ ಪಕ್ಷಿಗಳು ಮಂಗಗಳು ಸಾಕಷ್ಟು ತೊಂದರೆ ಅನುಭವಿಸುತ್ತಿವೆ ಬಹಳಷ್ಟು ಖ್ಯಾತಿ ಹೊಂದಿದ ಪರಸಗಡ ಕೋಟೆಯಲ್ಲಿ ಇರುವ ಮಂಗಗಳಿಗೆ ಕೋರೋನಾ ಲಾಕ್ ಡೌನ್ ನಿಂದ ಪ್ರೇಕ್ಷಕರಿಲ್ಲದೆ ಅವುಗಳಿಗೆ ತಿನ್ನಲು ಆಹಾರ ಸಿಗುತ್ತಿಲ್ಲ. ಈ ಮಂಗಗಳಿಗೆ ಓಂಕಾರ ಸಮಗ್ರ ಗ್ರಾಮೀಣ ಸೇವಾ ಸಂಘದ ವತಿಯಿಂದ ಹಣ್ಣುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಾದ್ಯಕ್ಷರಾದ ಸೋಮಯ್ಯ ಪಾಟೀಲ. ಪದಾಧಿಕಾರಿಗಳಾದ ಗುರು ಅಮರಗೋಳ.ಸಂತೋಷ ಯಕ್ಕುಂಡಿ.ಪ್ರಭು ರಾವಳ ಮಂಗಗಳಿಗೆ ಹಣ್ಣುಗಳನ್ನು ನೀಡಿದರು.