ಮೂಡಲಗಿ: ಕೊರೋನಾ ಸಂಧರ್ಭದಲ್ಲಿ ನಾವು ಬಡವ ಬಲ್ಲಿದ ಎನ್ನದೇ ಮಾನವೀಯತೆಯಿಂದ ಕರ್ತವ್ಯ ಮಾಡುವುದರ ಮುಖಾಂತರ ವೈದ್ಯ ವೃತ್ತಿಯ ಪ್ರಾಮುಖ್ಯತೆಯನ್ನು ಕಾಪಾಡಿದ್ದೇವೆ ಎಂದು ತುಕ್ಕಾನಟ್ಟಿಯ ವೈದ್ಯ ಡಾ. ವಸಂತ ನಾಯಿಕವಾಡಿ ಹೇಳಿದರು.
ತಾಲೂಕಿನ ತುಕ್ಕಾನಟ್ಟಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಜರುಗಿದ ರಾಷ್ಟ್ರೀಯ ವೈದ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯವನ್ನು ನಿರ್ಲಕ್ಷ ಮಾಡುತ್ತಿರುವುದರಿಂದ ತುಂಬಾ ತೊಂದರೆಯಾಗುತ್ತಿದೆ ಎಲ್ಲರೂ ಕರೋನಾವನ್ನು ಉಪಾಯದಿಂದ ಎದುರಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಧಾನ ಗುರು ಎ.ವ್ಹಿ.ಗಿರೆಣ್ಣವರ ಮಾತನಾಡಿ, ವೈದ್ಯ ವೃತ್ತಿ ಸರ್ವಕಾಲಕ್ಕೂ ಪವಿತ್ರವಾದದ್ದು, ಸಮಾಜದಲ್ಲಿ ವೈದ್ಯರನ್ನು ದೇವರೆಂದು ಭಾವಿಸಲಾಗುತ್ತಿದೆ ಎಂದರು.
ಶಾಲೆಯ ವತಿಯಿಂದ ತುಕ್ಕಾನಟ್ಟಿ ಗ್ರಾಮದ ವೈದ್ಯರಾದ ಡಾ: ವಸಂತ ನಾಯಿಕವಾಡಿ, ಆನಂದ ಹುಕ್ಕೇರಿ, ಡಾ: ಸಿದ್ಧಾರ್ಥ ಉಪ್ಪಾರ ಅವರನ್ನು ಸತ್ಕರಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಪುಷ್ಪಾ ಬರಮದೆ, ಕುಸುಮಾ ಚಿಗರಿ, ವಿಮಲಾಕ್ಷಿ ತೋರಗಲ್ಲ, ಎಸ್.ಡಿ.ಲಮಾಣಿ, ಎಸ್.ಆರ್.ಕುಲಕರ್ಣಿ, ಕಿರಣ ಭಜಂತ್ರಿ, ಎಮ್.ಕೆ.ಕಮ್ಮಾರ್, ಮತ್ತಿತರು ಇದ್ದರು. ದೈಹಿಕ ಶಿಕ್ಷಕ ಕೆ.ಆರ್.ಭಜಂತ್ರಿ ನಿರೂಪಿಸಿ ವಂದಿಸಿದರು.