spot_img
spot_img

ಡಾ. ಫ ಗು ಹಳಕಟ್ಟಿಯವರ ಸಾವಿನ ನಾಲ್ಕು ದಿನ ಮುನ್ನ

Must Read

spot_img
- Advertisement -

ವಚನ ಪಿತಾಮಹ ಡಾ ಫ ಗು ಹಳಕಟ್ಟಿಯವರು ಮಗ ಮತ್ತು ಮಡದಿ ಹಳಕಟ್ಟಿಯವರ ಕಣ್ಣು ಮುಂದೆಯೇ ಲಿಂಗೈಕ್ಯರಾದರು. ಸಾವು ನೋವು ಡಾ ಫ ಗು ಹಳಕಟ್ಟಿ ಅವರಿಗೆ ಸಹಜವಾಗಿದ್ದವು.

ಸಾಯುವ ನಾಲ್ಕು ದಿನ ಮುನ್ನ ಅವರನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದ ಬಬಲೇಶ್ವರ ಶಾಂತವೀರ ಸ್ವಾಮಿಗಳು ಹಾಸಿಗೆಯ ಮೇಲೆ ಮಲಗಿದ್ದ ಡಾ ಫ ಗು ಹಳಕಟ್ಟಿ ಅವರನ್ನು ನಿಮಗೆ ಮತ್ತೇನಾದರೂ ಬೇಕಾ .? ಎಂದು ಪ್ರಶ್ನಿಸಿದರಂತೆ. ಶಾಂತವೀರ ಸ್ವಾಮಿಗಳು ಕೇಳಿದ್ದು ತಿನ್ನಲು ಏನಾದರೂ ತರಬೇಕಾ ಅಥವಾ ಔಷಧಿ
ಮಾತ್ರೆಗಳೇನಾದರೂ ಬೇಕಾ ಎಂಬರ್ಥದಲ್ಲಿದ್ದರೆ,  ಡಾ ಫ ಗು ಹಳಕಟ್ಟಿ ಅವರು ಬಯಲೊಳಗೆ ಬಯಲಾಗುವ ಶರೀರವು ಏನು ತಿಂದು ಏನಾಗುವುದು ಎಂದು ಯೋಚಿಸಿ. ಅತ್ಯಂತ ಸಂಕೋಚದಿಂದ ಮುಜುಗರ ಮನದಿಂದ ಬಬಲೇಶ್ವರ ಸ್ವಾಮಿಗಳನ್ನು ಉದ್ಧೇಶಿಸಿ ತಮ್ಮ ತಲೆದಿಂಬಿನ ಕೆಳಗಡೆಯಿಂದ ಕೆಲ ಕಾಗದಗಳನ್ನು ತೆಗೆದು ” ಸ್ವಾಮಿಗಳೇ ಇನ್ನು ಹತ್ತು ವಚನ ಅಚ್ಚುಹಾಕಿಸಬೇಕಿದೆ ತಾವು ದಯವಿಟ್ಟು ಆ ವಚನಗಳನ್ನು ಅಚ್ಚು ಹಾಕಿ ಪ್ರಿಂಟ್ ಮಾಡಿಸಿದರೆ ಮಹದುಪಕಾರವಾಗುತ್ತದೆ ಎಂದು ವಿನಂತಿಸಿಕೊಂಡರಂತೆ !

ಇದರಿಂದ ಸಾಯುವ ಕೆಲವೆ ದಿನಗಳ ಮುನ್ನ ಡಾ ಫ ಗು ಹಳಕಟ್ಟಿ ಅವರು ಎಷ್ಟೊಂದು ವಚನಗಳ ಸಂಪಾದನೆ ತಾಡೋಲೆಗಳ ಅಧ್ಯಯನದಲ್ಲಿ ಮುಳುಗಿದ್ದರು ಎಂದು ತಿಳಿದು ಬರುತ್ತದೆ. ಅವರ ಆತ್ಮಕ್ಕೊಂದು ಸಲಾಮು .
ಒಮ್ಮೆ ಕೂಗಿದರೆ ಏಳು ಸಲ ಪ್ರತಿಧ್ವನಿಸುವ ಗೋಲ ಗುಂಬಜ ಆದರೆ ಡಾ ಫ ಗು ಹಳಕಟ್ಟಿ ಅವರ ಸಾಧನೆ ಸೂರ್ಯ ಚಂದ್ರವಿರುವವರೆಗೆ ಸ್ಮರಣೀಯವಾಗಿರುತ್ತದೆ.

- Advertisement -

ಅವರು ಲಿಂಗೈಕ್ಯರಾದಾಗ ಕೇವಲ ನೂರಾರು ಜನ ಮಾತ್ರ ಮಣ್ಣಿಗೆ ಬಂದಿದ್ದರಂತೆ. 1903 ರಲ್ಲಿ ಎಲ್ ಎಲ್ ಬಿ ಪದವಿ ಪಡೆದ ಮಹಾ ಕ್ರಿಯಾಶೀಲ ಕನ್ನಡ ನೆಲಕ್ಕೆ ವಚನಗಳ ಪರಿಚಯಿಸಿ ವಚನಗಳ ಪಿತಾಮಹವೆಂದೆನಿಸಿಕೊಂಡರು.
————————————
ಸಂಗ್ರಹದಿಂದ – ಡಾ .ಶಶಿಕಾಂತ.ಪಟ್ಟಣ ರಾಮದುರ್ಗ
.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಅವ ಹಿಂದು ಅವ ಜೈನ ಅವ ಬೌದ್ಧ ಅವ ಸಿಖ್ಖ ಅವ ಕ್ರೈಸ್ತ ಅವ ಮಹಮದೀಯನೆಂದು ದಯಮಾಡಿ ಕರೆಯದಿರು ಬೇರೆಯವರೆನ್ನದಿರು ಅವರು ನಮ್ಮವರೆನ್ನು - ಎಮ್ಮೆತಮ್ಮ ಶಬ್ಧಾರ್ಥ ಮಹಮದೀಯ‌ = ಮುಸಲ್ಮಾನ ತಾತ್ಪರ್ಯ ಜಗತ್ತಿನಲ್ಲಿ‌ ಹಿಂದು‌,...
- Advertisement -

More Articles Like This

- Advertisement -
close
error: Content is protected !!
Join WhatsApp Group