- Advertisement -
ಬೆಳಗಾವಿ – ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ 2019 ನೆ ಸಾಲಿನ ಅಪ್ಪಾಸಾಹೇಬ ಸದರಜೋಶಿ ಹಾಗೂ ಕುಟುಂಬ ದತ್ತಿನಿಧಿ ಪ್ರಶಸ್ತಿ ಡಾ. ಹೇಮಾವತಿ ಸೊನೊಳ್ಳಿ ಅವರಿಗೆ ದೊರಕಿದೆ. ಅವರ ಸ್ಪಂದನ ವೈಚಾರಿಕ ಲೇಖನಗಳ ಕೃತಿಗೆ ಈ ಪ್ರಶಸ್ತಿ ದೊರಕಿದ್ದು, ಡಾ. ಹೇಮಾವತಿ ಸೊನೊಳ್ಳಿ ಅವರು ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ ಹಾಗೂ ಪೃಥ್ವಿ ಫೌಂಡೇಶನ್ ಅಧ್ಯಕ್ಷರು ಹಾಗೂ ಖಾನಾಪುರ ತಾಲೂಕಿನ ನಂದಗಡದಲ್ಲಿ ಎನ್ ಆರ್ ಇ ಸಂಸ್ಥೆಯ ಮಹಾತ್ಮಾ ಗಾಂಧಿ ಪದವಿ ಪೂರ್ವ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರು ಡಾ ಹೇಮಾವತಿ ಸೊನೊಳ್ಳಿ ಸಾಹಿತ್ಯಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ವಿವಿಧ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ ಖಾನಾಪುರ ತಾಲೂಕಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು ವಿವಿಧೆಡೆಯಿಂದ ಸನ್ಮಾನ ಹಾಗೂ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.