ಡಾ ಸುರೇಶ ನೆಗಳಗುಳಿಯವರ ‘ಕಾವ್ಯ ಕಿರಣ’ ಲೋಕಾರ್ಪಣೆ ಹಾಗೂ ಕನ್ನಡ ಶ್ರೀ ಪ್ರಶಸ್ತಿ ಪ್ರದಾನ

Must Read

ಮಂಗಳೂರು – ಮಂಗಳೂರಿನ ಜನಪ್ರಿಯ ದಿನಪತ್ರಿಕೆ ಜಯಕಿರಣದ ವಾರದ ವಿಭಾಗದಲ್ಲಿ ಪ್ರಕಟವಾದ ಮಂಗಳೂರಿನ ಕಣಚೂರು ಹಾಗೂ ಮಂಗಳಾ ಆಸ್ಪತ್ರೆಯ ಶಸ್ತ್ರ ಕ್ರಿಯಾ ಕ್ಷಾರ ತಜ್ಞ ,ಬರಹಗಾರ ಡಾ ಸುರೇಶ ನೆಗಳಗುಳಿಯವರ ಕವನಗಳ ಸಂಕಲನ ‘ಕಾವ್ಯಕಿರಣ’ದ ಲೋಕಾರ್ಪಣೆಯನ್ನು ದಿನಾಂಕ 18 ಏಪ್ರಿಲ್ 25ರಂದು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಮಾಡಲಾಯಿತು

63 ಕವನಗಳಿರುವ ಈ ಸಂಕಲನವು ತಯಾರಾಗುವಲ್ಲಿ ತನ್ನ. ರಚನೆಗಳನ್ನು ಪ್ರಕಟಿಸುತ್ತಾ ಸ್ಪೂರ್ತಿಯಾದ ಜಯಕಿರಣ ದಿನಪತ್ರಿಕೆ ಸಂಪಾದಕ  ಜಿತೇಶ್ ಹಾಗೂ ಪ್ರಕಟಿಸುವಲ್ಲಿ ನೆರವಾದ ಕಥಾಬಿಂದು ಪ್ರಕಾಶನದ ಪಿ.ವಿ. ಪ್ರದೀಪ ಕುಮಾರ ಅವರನ್ನು ಲೇಖಕರು ಸ್ಮರಿಸಿದರು. ಇದರಲ್ಲಿ ಗಜಲ್,ನವ್ಯ ನವ್ಯೋತ್ತರ, ಷಟ್ಪದಿ ,ತನಗ ಮುಂತಾದ ಪ್ರಕಾರಗಳ ತನ್ನ ರಚನೆಗಳನ್ನು ಪ್ರಕಟಿಸಲಾಗಿದೆ. ಇದು ಹಲವು ಪ್ರಕಾರಗಳ ಮಾಹಿತಿಗೆ ಅನುಕೂಲ ಎಂದು ಅವರು ನುಡಿದರು.

ಕಿನ್ನಿಗೋಳಿಯ ಯುಗಪುರುಷ ಸಭಾಂಗಣದಲ್ಲಿ ಕಥಾ ಬಿಂದು ಪ್ರಕಾಶನ ಏರ್ಪಡಿಸಿದ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರ ಹಸ್ತದಿಂದ ಈ‌ ಕೃತಿಯು ಬಿಡುಗಡೆಯಾಯಿತಲ್ಲದೆ ಈ ವೇಳೆ ಯುಗಪುರುಷ ಪ್ರಕಾಶನದ ಮುಖ್ಯಸ್ಥ ಭುವನಾಭಿರಾಮ ಉಡುಪ , ರತ್ನಾ ಕೆ ಭಟ್ ,ಪಡಂಬೈಲು ಡಾ ಕೃಷ್ಣೇಗೌಡ, ಮಂಗಳೂರು ವಿ.ವಿ.ಪ್ರಾಚಾರ್ಯ, ಡಾ ಗಣಪತಿ ಗೌಡ, ವಿ.ವಿ.ಪ್ರಾಧ್ಯಾಪಕ ಡಾ ಮೇಜರ್ ಜಯರಾಜ್ ಎನ್ , ಹಿರಿಯ ಕವಿ ಹರಿ ನರಸಿಂಹ ಉಪಾಧ್ಯಾಯ , ಕೊಳಚಪ್ಪೆ ಗೋವಿಂದ ಭಟ್, ಲಕ್ಷ್ಮಿ ವಿ ಭಟ್, ಪ್ರದೀಪ್ ಕುಮಾರ್ ಪಿ.ವಿ. , ಸತ್ಯವತಿ ಭಟ್ ಕೊಳಚಪ್ಪು ವಾಮನರಾವ್ ಬೇಕಲ್, ಜಯಾನಂದ ಪೆರಾಜೆ ,ಶಾಂತಾ ಪುತ್ತೂರು ಮುಂತಾದವರು ಉಪಸ್ಥಿತರಿದ್ದರು.

ಲೇಖಕರ ಶುಭಪ್ರಕಾಶನ ಹೊರತಂದ ಈ ಕೃತಿಯನ್ನು ಕಥಾಬಿಂದು ಪ್ರಕಾಶನವು ಪ್ರಕಟಿಸಿದೆ.

ಇದೇ ವೇಳೆ ಡಾ ಸುರೇಶ ನೆಗಳಗುಳಿ ಅವರಿಗೆ “ಕನ್ನಡ ಶ್ರೀ” ಎಂಬ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀಮತಿ ವಿದ್ಯಾಶ್ರೀ ಅಡೂರು ಕಾರ್ಯಕ್ರಮ ನಿರ್ವಹಣೆ ಮಾಡಿದರು.

- Advertisement -
- Advertisement -

Latest News

ಕವನ : ಸಮರದ ಮಾತು

ಸಮರದ ಮಾತು ಅದೆಷ್ಟು ಇವೆ ನಿನ್ನ ಮಾತಿನ ಸಮರದ ಬಾಣಗಳು ಎದೆಯ ಗುಂಡಿಗೆಯನು ಸೀಳಿ ನಿಂತಿವೆವೀರ ಪರಾಕ್ರಮದ ಕೂಸೂ ನಾನಲ್ಲ ನಿನ್ನ ಜೊತೆ ಹೋರಾಡಿ ಜಯಿಸುವ ಶಕ್ತಿಯೂ ನನ್ನಲಿಲ್ಲ ಏಕೆಂದರೆಆ ಶಕ್ತಿ ಎಲ್ಲವನ್ನೂ ಕಿತ್ತು ಕೊಂಡ ವೀರ ಯೋಧ ಮಾತಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group