- Advertisement -
ಹಾವೇರಿ – ಹಾವೇರಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಮಂಜೂರಾಗಿರುವುದು ಸಂತಸದ ವಿಷಯ ಅದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಒಕ್ಕೂಟದ ನಿರ್ದೇಶಕರಿಗೆ ಈ ಮುಖೇನ ಅಭಿನಂದನೆ ಸಲ್ಲಿಸುವುದಾಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ಇಂದು ಕಳಗೊಂಡ ಗ್ರಾಮದಲ್ಲಿ ಮಿಶ್ರ ತಳಿ ಹಾಗೂ ದೇಶಿ ತಳಿ ಆಕಳು ಹಾಗೂ ಕರುಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಲಲಿತಾ ಶಂಬನಗೌಡ ಪಾಟೀಲ, KMF ನಿರ್ದೇಶಕರಾದ ಬಸವರಾಜ ಅರಬಗೊಂಡ, ಶಂಕ್ರಣ್ಣ ಮಾತನವರ, ಶಿವಬಸಣ್ಣ ಕುಳೆನೂರ, ಮಂಜುನಾಥ ಕನವಳ್ಳಿ, ವೀರಯ್ಯ ಹಿರೇಮಠ, ಹನಮಂತಪ್ಪ ಕರಡೆರ, ಕೆಂಪೇಗೌಡ್ರ ಪಾಟೀಲ, ರುದ್ರಯ್ಯ ಹಿರೇಮಠ, ಬಸವಣ್ಣೆಪ್ಪ ಚಿಕ್ಕಣಜಿ, ನಾಗಪ್ಪ ಕರಡೆರ, ಶ್ರೀ ಮೃತ್ಯುಂಜಯ ಅಂಗಡಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಇಲಾಖಾ ಸಿಬ್ಬಂದಿ ವರ್ಗ ಜೊತೆಗಿದ್ದರು.