ಮೂಡಲಗಿ: ಪಟಗುಂದಿ ಗ್ರಾಮದಲ್ಲಿ ಸಾವಯವ ಕೃಷಿ ಪದ್ಧತಿಯಿಂದ ಆಗುವ ಉಪಯೋಗಗಳು ಹಾಗೂ ಲಾಭಗಳ ಬಗ್ಗೆ ರೈತ ಬಾಂಧವರಿಗೆ ತಿಳಿಸಲಾಯಿತು ಹಾಗೂ ಸಾವಯವ ಕೃಷಿ ಬಗ್ಗೆ ಪುಸ್ತಕಗಳನ್ನು ವಿತರಿಸಲಾಯಿತು.
ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳನ್ನು ಬಳಸುವುದರಿಂದ ಭೂಮಿಯ ಫಲವತ್ತತೆ ಮೇಲೆ ಗಂಭೀರ ಪರಿಣಾಮಗಳಾಗುತ್ತವೆ. ಭೂಮಿ ಬರಡಾಗುತ್ತದೆ ಆದ್ದರಿಂದ ರೈತರು ಸಾವಯವ ಗೊಬ್ಬರ ಬಳಸಬೇಕು ಎಂದು ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಸುರೇಶ್ ನಾಯ್ಕ ಈ ಸಂದರ್ಭದಲ್ಲಿ ಹೇಳಿದರು.
ಗ್ರಾಮ ಪಂಚಾಯತಿ ಸದಸ್ಯರು ದೇವರಾಜ್ ಪಾಟೀಲ್ ಬಸವಗೌಡ ಪಾಟೀಲ್, ರೈತ ಮುಖಂಡರಾದ ತಮ್ಮಣ್ಣ ನಾಯ್ಕ, ಭರತೇಶ ಪಾಟೀಲ್ ಶಂಕರ್ ಪಾಟೀಲ್,ಉದಯ್ ಪಾಟೀಲ್, ಹೊನ್ನಪ್ಪ ನಾಯಕ್,ಬಾಹುಬಲಿ ನಂದಗಾವ್, ಮಲ್ಲಪ್ಪ ನಾಯಕ್, ಗುರುನಾಥ್ ಪಾಟೀಲ್ ಮತ್ತಿತರರು ಭಾಗಿಯಾಗಿದ್ದರು.