ಸಿಂದಗಿ : ತಾಲೂಕಿನ ಕೊಕಟನೂರ ಗ್ರಾಮದ. ಸೋಮಲಿಂಗ ಅಗಸರ ಎಂಬುವವರ ಜಮೀನಿನ ಶೆಡ್ಡಿನಲ್ಲಿ ಅಗ್ನಿ ಅವಘಡದಲ್ಲಿ 6 ಆಕಳು, ಮಶೀನ್, ಮೇವು, ಮ್ಯಾಡ್ ಸೇರಿದಂತೆ ಅನೇಕ ವಸ್ತುಗಳು ಬೆಂಕಿಗಾಹುತಿಯಾಗಿವೆ.
ಅಗ್ನಿಆಹುತಿಯಲ್ಲಿ 4 ಲಕ್ಷ ರೂ. ಮೌಲ್ಯದ ವಸ್ತುಗಳು
ಹಾನಿಯಾಗಿವೆ. 4.70ಲಕ್ಷ ರೂ.ಮೌಲ್ಯದ ಹಸು ಹಾಗೂ
ಕೆಲವು ವಸ್ತುಗಳ ರಕ್ಷಣೆ ಮಾಡಲಾಗಿದೆ
1 ಆಕಳು ಸಜೀವ ದಹನವಾಗಿದೆ. ಇನ್ನೊಂದಕ್ಕೆ ತೀವ್ರ
ಗಾಯವಾಗಿದೆ. ರಕ್ಷಣೆಗೆ ಮುಂದಾದ ಮಾಲೀಕ
ಸೋಮಲಿಂಗ ಅಗಸರಗೆ ಬೆಂಕಿ ನಂದಿಸಲು
ಪ್ರಯತ್ನಿಸಿದಾಗ ಸಣ್ಣಪುಟ್ಟಗಾಯಗಳಾಗಿವೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ
ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿ 4 ಆಕಳು ಹಾಗೂ
ಮಾಲಿಕನನ್ನು ರಕ್ಷಣೆ ಮಾಡಿದ್ದಾರೆ. ಈ ವೇಳೆ ಎಫ್ಎಸ್ಒ
ಎಂ.ಬಿ.ಪೂಜಾರಿ, ಸಿಬ್ಬಂದಿಗಳಾದ ಶೀಮಲಿಂಗಯ್ಯ
ಮಠ, ರವಿ ನಾಯಕ, ಶ್ರೀಧರ ರತ್ನಪ್ಪಗೋಳ,
ವಿಜಯಕುಮಾರ ಬಿರಾದಾರ, ಹನುಮಂತ ಕುಂಬಾರ
ಸೇರಿದಂತೆ ಅನೇಕರಿದ್ದರು. ಇನ್ನೂ ಈ ಪ್ರಕರಣ ಸಿಂದಗಿ
ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.