ಸಿಂದಗಿ: ಗ್ರಾಮಾಭಿವೃದ್ಧಿ ಯೋಜನೆ ಧರ್ಮಸ್ಥಳ ಸಂಘದ ಅಡಿಯಲ್ಲಿ ನಿರ್ಗತಿಕರಿಗೆ ಆಹಾರ ಕಿಟ್ಟನ್ನು ಒಕ್ಕೂಟದ ಅಧ್ಯಕ್ಷೆ ಮಹಾದೇವಿ ಅವರು ವಿತರಿಸಿದರು.
ಊರ ಹೊರ ವಲಯದಲ್ಲಿರುವ ಸೈಬಣ್ಣ ಎಸೇಗಾರ ಅವರು ಒಳ್ಳೆಯ ಕಲಾವಿದರು. ಅವರಿಗೆ ಪಾರ್ಶ್ವವಾಯು ಆಗಿದ್ದು ಈಗ ಅವರಿಗೆ ಮಾತು ಇಲ್ಲ .ಕಣ್ಣೂ ಕಾಣಲ್ಲ, ತಿರುಗಾಡಲು ಆಗಲ್ಲ ಅವರಿಗೆ ಹೆಂಡತಿ ಎರಡು ಚಿಕ್ಕ ಮಕ್ಕಳು ಇದ್ದು ಅವರಿಗೆ ದುಡಿದು ತಂದು ಹಾಕುವ ಪರಿಸ್ಥಿತಿ ಅವರಲ್ಲಿ ಇಲ್ಲ.ಇಂಥವರನ್ನು ಗುರುತಿಸಿ ಧರ್ಮಸ್ಥಳ ಸಂಘದಿಂದ ಅವರಿಗೂ ಕೂಡಾ ಆಹಾರ ಧಾನ್ಯಗಳ ಕಿಟ್ ಹಾಗೂ ಚಿಕ್ಕ ಮಕ್ಕಳಿಗೆ ಹೊಸ ಬಟ್ಟೆಗಳನ್ನು ಕೊಡಲಾಯಿತು.
ಸೈಬಣ್ಣನ ಹೆಂಡತಿ ಗಂಡನ ಔಷಧಿ ಖರ್ಚು ಮನೆಯಲ್ಲಿ ಮಕ್ಕಳ ಊಟಕ್ಕೆ ನಾನೊಬ್ಬಳೆ ದುಡಿಯಬೇಕು ಸಂಘದಿಂದ ಏನಾದರೂ ಸಹಾಯ ಮಾಡಿ ಎಂದು ಸಂಘದ ಮೇಲ್ವಿಚಾರಕರಲ್ಲಿ ಮಲಮ್ಮ ತಮ್ಮ ನೋವನ್ನು ಹೇಳಿಕೊಂಡರು.
ಆಹಾರ ಕಿಟ್ ಪಡೆದ ಫಲಾನುಭವಿಗಳು ಶಾಂತಾಬಾಯಿ ಗೊಂದಲಗೇರಿ, ಮಮತಾಜ ಅಂತರಗಂಗಿ, ಬಲವಂತರಾಯ ನಾಟಿಕಾರ, ಎಲ್ಲವ್ವ ಕತ್ತಿಮನಿ, ಯಂಕಮ್ಮ ಲಕ್ಷ್ಮಣ, ಸೈಬಣ್ಣ ಎಸೇಗಾರ, ಸಚೀನ್ ಸರ್ ವಲಯದ ಮೇಲ್ವಿಚಾರಕರು,ಸೇವಾ ಪ್ರತಿನಿಧಿಗಳು ನೀಲಮ್ಮ ಅಗಸರ ಶಬಾನಾ ನಾಗಣಸೂರ ಉಪಸ್ಥಿತರಿದ್ದರು.