- Advertisement -
ಮೂಡಲಗಿ: ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ಗುರುನಾಥ ಉಪ್ಪಾರ ಅವರ ನೇತೃತ್ವ ಮತ್ತು ಡಾ.ರಾಮನ್ನವರ ಚಾರಿಟೇಬಲ್ ಟ್ರಸ್ಟ ಹಾಗೂ ಅಮ್ಮ ಪ್ರತಿಷ್ಠಾನದ ಆಶ್ರಯದಲ್ಲಿ ಡಾ.ಪುನೀತ ರಾಜಕುಮಾರ ಅವರ ಹುಟ್ಟು ಹಬ್ಬದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಬೆಳಗಾವಿ ಕೆಎಲ್ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ನೇತ್ರ ಭಂಡಾರಕ್ಕೆ 60 ಜನರು ಮರಣಾನಂತರದಲ್ಲಿ ಸ್ವಯಂ ಪ್ರೇರಿತರಾಗಿ ನೇತ್ರದಾನ ಮಾಡಲು ಮುಂದೆ ಬಂದಿದ್ದಾರೆ.
ಕೆಎಲ್ಇ ವಿಶ್ವವಿದ್ಯಾಲಯದ ಬಿ.ಎಮ್.ಕಂಕಣವಾಡಿ ಆಯುರ್ವೆದ ಮಹಾವಿದ್ಯಾಲಯದ ರಚನಾ ಶಾಸ್ತ್ರ ವಿಭಾಗದ ಡಾ.ಮಹಾಂತೇಶ ರಾಮಣ್ಣವರ ಅವರು ನೇತ್ರದಾನದ ಮಹತ್ವ ಹಾಗೂ ಅದರ ಉಪಯುಕ್ತತೆ ಕುರಿತು ತಿಳಿಸಿದರು.
ಭರಮ್ಮಣ್ಣ ಉಪ್ಪಾರ, ಗುರುನಾಥ ಉಪ್ಪಾರ, ಬಾಳಾಸಾಹೇಬ ಉದಗಟ್ಟಿ, ಶೀಮಾ ಗುರುನಾಥ, ಡಾ.ತುಕಾರಾಮ ಉಮರಾಣಿ ಶಿವಕುಮಾರ ಬೆನಕನಕೊಂಡ, ಪುಂಡಲೀಕ ಕೊಡ್ಲಿ ಉಪಸ್ಥಿತರಿದ್ದರು.