ಬೈಲಹೊಂಗಲ : ವಿಶ್ವಹಿಂದೂಪರಿಷತ್, ಭಜರಂಗದಳ ಬೈಲಹೊಂಗಲ ವತಿಯಿಂದ ಉಚಿತ ಅಂಬುಲೆನ್ಸಗೆ ನಗರದ ವೀರರಾಣಿ ಕಿತ್ತೂರು ಚೆನ್ನಮ್ಮ ಸಮಾಧಿ ಹತ್ತಿರ ನಯಾನಗರ ಸುಖದೇವಾನಂದ ಪುಣ್ಯಾಶ್ರಮದ ಅಭಿನವ ಸಿದ್ಧಲಿಂಗ ಸ್ವಾಮೀಜಿ ಸಾನಿಧ್ಯದಲ್ಲಿ ಚಾಲನೆ ನೀಡಲಾಯಿತು.
ವಿಶ್ವಹಿಂದು ಪರಿಷತ್ ಉತ್ತರ ಕರ್ನಾಟಕ ಪ್ರಾಂತ ಸಹ ಕೋಶಾಧ್ಯಕ್ಷ ಕೃಷ್ಣಾಜೀ ಭಟ್, ವಿಭಾಗ ಸಹಕಾರ್ಯದರ್ಶಿ ಅಚ್ಯುತ್ ಕುಲಕರ್ಣಿ, ಸಿಪಿಐ ಯು ಎಚ್ ಸಾತೇನಹಳ್ಳಿ ವಿಶ್ವಹಿಂದೂಪರಿಷತ್ ತಾಲೂಕ ಗೌರವ ಅಧ್ಯಕ್ಷ ಚಿದಂಬರ ಕುಲಕರ್ಣಿ, ಅಧ್ಯಕ್ಷರು ಪ್ರಮೋದ್ ಕುಮಾರ್ ವಕ್ಕುಂದಮಠ ಇವರ ಸಮ್ಮುಖದಲ್ಲಿ ಚಾಲನೆ ಕೊಡಲಾಯಿತು.
ಕಾರ್ಯದರ್ಶಿ ಅಶೋಕ ಸವದತ್ತಿ, ಉಪಾಧ್ಯಕ್ಷ ಶಿವಾನಂದ ಬಡ್ಡಿಮನಿ, ರಾಜು ಬಡಿಗೇರ, ಸಾಮಾಜಿಕ ಸಾಮರಸ್ತಾ ಪ್ರಮುಖ ವಿವೇಕಾನಂದ ಪೂಜೇರಿ, ಮಹಾಂತೇಶ ಹೊಸೂರ, ಮಲ್ಲಿಕಾರ್ಜುನ ಏಣಗಿಮಠ, ರವಿ ಹುಲಕುಂದ, ಬಸವರಾಜ ಈಟಿ, ಯಲ್ಲಪ್ಪ ದೇವರಹುಬ್ಬಳ್ಳಿ, ಕುಮಾರ ಹೂಗಾರ, ಸಚಿನ ಚೀಲದ, ದಯಾನಂದ ಗೆಜ್ಜಿ, ಮಲ್ಲು ಬೆಳಗಾವಿ ಸೇರಿದಂತೆ ವಿ.ಎಚ್.ಪಿ ಹಾಗೂ ಭಜರಂಗದಳ ಕಾರ್ಯಕರ್ತರು ಉಪಸ್ಥಿತರಿದ್ದರು.