- Advertisement -
ಶಿವಮೊಗ್ಗ– ಸರ್ಜಿ ಆಸ್ಪತ್ರೆಗಳ ಸಮೂಹ ಹಾಗೂ ಸರ್ಜಿ ಫೌಂಡೇಶನ್ ವತಿಯಿಂದ ಇದೇ ದಿ.೨೬ ರಂದು ಶನಿವಾರ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಗರದ ವೆಂಕಟೇಶ ನಗರದ ಅನಕೃ ರಸ್ತೆಯ ೩ ನೇ ತಿರುವಿನಲ್ಲಿರುವ ಬಸವಕೇಂದ್ರದಲ್ಲಿ ಚಿಂತನ ಕಾರ್ತಿಕ – ೨೦೨೨ ಸಮಾರೋಪ, ಗಣಪರ್ವ ಕಾರ್ಯಕ್ರಮದ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ಜನರಲ್ ಫಿಜಿಶಿಯನ್, ಸ್ತ್ರೀ ರೋಗ ತಜ್ಞರು, ಮೂಳೆ ರೋಗ ತಜ್ಞರು, ಮಕ್ಕಳ ತಜ್ಞರು ಹಾಗೂ ಮಧುಮೇಹ ತಜ್ಞರು ತಪಾಸನೆ ಮಾಡುವರು.
ಸಮಾರಂಭದ ಸಾನ್ನಿಧ್ಯವನ್ನು ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ವಹಿಸುವರು.
- Advertisement -
ನೇತೃತ್ವವನ್ನು ಸರ್ಜಿ ಸಮೂಹ ಆಸ್ಪತ್ರೆಗಳ ಚೇರ್ಮನ್ ಡಾ.ಧನಂಜಯ ಸರ್ಜಿ ವಹಿಸುವರು.
ಹೆಚ್ಚಿನ ಮಾಹಿತಿಗಾಗಿ ಮೊ. ಸಂಖ್ಯೆ- ೮೮೬೭೯೧೯೮೫೯ ಹಾಗೂ ೯೯೬೪೧೭೬೩೦೨ ಸಂಪರ್ಕಿಸಲು ಕೋರಲಾಗಿದೆ.