ಸದನದ ಪಾವಿತ್ರ್ಯ ಹಾಳುಗೆಡವಿದ ಸಚಿವ ರಾಜಣ್ಣ ವಿರುದ್ಧ ಭೀಮಪ್ಪ ಗಡಾದ ದೂರು

Must Read

ಹನಿಟ್ರ್ಯಾಪ್ ಹೇಳಿಕೆ ನೀಡಿದ ಸಚಿವ ರಾಜಣ್ಣ ದೂರು ನೀಡಿದ್ದರೂ F.I.R ದಾಖಲಿಸದ ಪೋಲಿಸರು ಶೀಘ್ರವೇ ನ್ಯಾಯಾಲಯದಲ್ಲಿ ‘ಮೊಕದ್ದಮೆ’ ದಾಖಲು ‘ಪ್ರಾಷಿಕ್ಯೂಶನ್’ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ

ಮೂಡಲಗಿ –  ಪ್ರಜಾಪ್ರಭುತ್ವದ ದೇಗುಲವೆಂದೇ ಕರೆಯಲ್ಪಡುವ ಸದನದಲ್ಲಿಯೇ “ಹನಿ-ಟ್ರ್ಯಾಪ್” ವಿಷಯವನ್ನು ಪ್ರಸ್ತಾಪಿಸುವ ಮೂಲಕ ಗೋಪ್ಯತಾ ಪಾಲನಾ ಪ್ರಮಾಣ ವಚನ ಮಾಡಿದಂತೆ ನಡೆದುಕೊಳ್ಳದೇ ಸಂವಿಧಾನಕ್ಕೆ ಅಪಚಾರ ಎಸಗಿದ್ದು ಹಾಗೂ ಇಂಥ ಅಶ್ಲೀಲ ಹೇಳಿಕೆಯಿಂದ ಸಂವಿಧಾನದ ಘನತೆ-ಗೌರವಗಳಿಗೆ ಚ್ಯುತಿ ಉಂಟು ಮಾಡಿರುವ ಸಚಿವ ರಾಜಣ್ಣ ವಿರುದ್ಧ ವಿಳಂಬಕ್ಕೆ ಅವಕಾಶ ನೀಡದೇ ಇವರ ಮೇಲೆ F.I.R ದಾಖಲಿಸಿ ಇವರನ್ನು ವಶಕ್ಕೆ ಪಡೆದು ಕಾನೂನು ರೀತಿ ಕ್ರಮ ಕೈಗೊಂಡು ಸಮಗ್ರ ತನಿಖೆ ನಡೆಸಬೇಕೆಂದು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಜಯಂತಿಯಂದೇ ಅಂದರೆ ದಿನಾಂಕ : 14/04/2025 ರಂದು ಬೆಂಗಳೂರು ಜೆ.ಸಿ ನಗರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರೂ ಇದುವರೆಗೆ ಪೋಲಿಸರು F.I.R ದಾಖಲಿಸದೇ ಇರುವುದರಿಂದ ಸಚಿವ ರಾಜಣ್ಣ ಇವರ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲು (ಪ್ರಾಷಿಕ್ಯೂಶನ್) ಅನುಮತಿ ನೀಡುವಂತೆ ಕೋರಿ ಸಂವಿಧಾನದ ಪಾಲಕರಾಗಿರುವ ಗೌರವಾನ್ವಿತ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ.

ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಈ ವಿಷಯವನ್ನು ತಿಳಿಸಿದ್ದು,  ಯಾವುದೇ ಒಬ್ಬ ವ್ಯಕ್ತಿಯು ಪೋಲಿಸ್ ಠಾಣೆಯಲ್ಲಿ ದೂರು ನೀಡಿದ ನಂತರ ದೂರಿನಲ್ಲಿರುವ ವಿಷಯ ನಿಜವಾಗಿರಲಿ ಅಥವಾ ಸುಳ್ಳಾಗಿರಲಿ ದೂರಿನನ್ವಯವಾಗಿ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) 2023ರ ಕಲಂ 173ರ ಪ್ರಕಾರ ಆಪಾಧಿತ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡು 24 ಗಂಟೆಯಿಂದ 48 ಗಂಟೆಯ ಒಳಗಾಗಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿ (ಎಪ್‌ಆಯ್‌ಆರ್) ಸಲ್ಲಿಸಬೇಕೆಂಬ ನಿಯಮ ಇರುತ್ತದೆ, ಆದರೆ ದೂರು ನೀಡಿ ಒಂದು ವಾರ ಕಳೆದಿದ್ದರೂ ಆಪಾಧಿತ ವ್ಯಕ್ತಿಯಾಗಿರುವ  ರಾಜಣ್ಣ ಇವರ ಮೇಲೆ ಪೋಲಿಸರು ಎಪ್‌ಆಯ್‌ಆರ್ ದಾಖಲಿಸದೇ ಇರುವ ಅಂಶವನ್ನು ಮಾನ್ಯ ರಾಜ್ಯಪಾಲರ ಗಮನಕ್ಕೆ ತರಲಾಗಿದೆ ಎಂದರು.

“ಹನಿ-ಟ್ರ್ಯಾಪ್” ಜಾಲದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಎಲ್ಲಾ ಪಕ್ಷಗಳ 48 ನಾಯಕರುಗಳು ಸಿಲುಕಿದ್ದು ಅವರ ಪೆನ್ ಡ್ರೈವ್ ಗಳಿವೆ ಎಂದು ಸದನದಲ್ಲಿಯೇ ಬಹಿರಂಗ ಪಡಿಸಿದಲ್ಲದೇ ನನ್ನ ವಿರುದ್ಧವೂ “ಹನಿ-ಟ್ರ್ಯಾಪ್” ಯತ್ನ ನಡೆದಿದ್ದು ಈ ಕುರಿತು ನನ್ನ ಬಳಿ ಪುರಾವೆಗಳು ಇರುತ್ತವೆ, ಅಲ್ಲದೇ ಬಿಜೆಪಿ ಮತ್ತು ಕಾಂಗ್ರೆಸ್ಸಿನ 48 ಮಂದಿ ಜನ ಪ್ರತಿನಿಧಿಗಳ ಸಿ.ಡಿ/ ಪೆನ್ ಡ್ರೈವಗಳಿವೆ ಎಂದು ಗೊತ್ತಾಗಿದ್ದು ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ ರಾಷ್ಟ್ರ ಮಟ್ಟದ ಜನ ಪ್ರತಿನಿಧಿಗಳ ಮೇಲೂ ಆರೋಪವಿದೆ ಎಂದು ಸಚಿವರಾಗಿ ಜವಾಬ್ದಾರಿ ಸ್ಥಾನದಲ್ಲಿರುವ ರಾಜಣ್ಣ ಇವರು ಸದನದಲ್ಲಿಯೇ ಹೇಳಿದ್ದರು.

ಇದನ್ನು  ಗಮನಿಸಿದಾಗ ಈ ವಿಷಯದ ಬಗ್ಗೆ ಇವರಿಗೆ ಸಂಪೂರ್ಣ ಮಾಹಿತಿ ಇರುವದು ಎಂಬುದು ಹೊರ ನೋಟಕ್ಕೆ ಕಂಡು ಬರುತ್ತಿದ್ದು, ಕಾರಣ ಇವರನ್ನು ಕೂಡಲೇ ವಶಕ್ಕೆ ಪಡೆದುಕೊಂಡು ಸಮಗ್ರ ತನಿಖೆಗೆ ಒಳಪಡಿಸುವದು ಅವಶ್ಯವಿರುವ ಅಂಶವನ್ನು ಮಾನ್ಯ ರಾಜ್ಯಪಾಲರಿಗೆ ಬರೆದ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರತಿ ನಿಮಿಷಕ್ಕೂ ಲಕ್ಷ-ಲಕ್ಷ ರೂ.ಗಳಷ್ಟು ಸಾರ್ವಜನಿಕರ ತೆರಿಗೆ ಹಣವನ್ನು ವೆಚ್ಚ ಮಾಡಿ ಅಧಿವೇಶನಗಳನ್ನು ನಡೆಸಲಾಗುತ್ತಿದೆ. ಆದರೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸದೇ “ಹನಿ-ಟ್ರ್ಯಾಪ್” ಎಂಬ ಅಶ್ಲೀಲ ವಿಷಯದ ಕುರಿತ ಚರ್ಚೆಯಲ್ಲಿಯೇ 02 ದಿವಸಗಳ ಕಾಲ ಇಡೀ ಸದನದ ಕಾರ್ಯ-ಕಲಾಪಗಳನ್ನು ಹಾಳು ಮಾಡಿದಲ್ಲದೇ 18 ಜನ ಶಾಸಕರುಗಳು 06 ತಿಂಗಳುಗಳು ಕಾಲ ಅಮಾನತ್ತು ಆಗುವುದರ ಮೂಲಕ ಇತಿಹಾಸದಲ್ಲಿ ದಾಖಲೆ ನಿರ್ಮಿಸಲು ಮತ್ತು ಸಾರ್ವಜನಿಕರ ಕೋಟಿ-ಕೋಟಿ ತೆರಿಗೆ ಹಣ ಪೋಲು ಆಗಲು ಕಾರಣರಾಗಿದಲ್ಲದೇ ಸಂವಿಧಾನದ ಆಶಯದ ವಿರೋಧವಾಗಿ ಸದನದಲ್ಲಿ ಈ ರೀತಿ ಹೇಳಿಕೆ ನೀಡಿದ್ದರ ಬಗ್ಗೆ ಸಂಪೂರ್ಣ ತನಿಖೆ ಆಗಬೇಕೆಂಬ ಅಂಶವನ್ನು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.

ಈ ವಿಷಯದ ಬಗ್ಗೆ ರಾಜ್ಯದ ಗೃಹ ಸಚಿವರಿಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಹಾಗೂ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳಿಗೂ ಸಹ ಪತ್ರ ಬರೆದು ತನಿಖೆಗೆ ವಿನಂತಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಇರುವ ವಿಷಯವನ್ನು ಈ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯದ ಬಹು ಸಂಖ್ಯಾತ ಜನರ ಅಭಿಪ್ರಾಯದಂತೆ ಸಚಿವ ರಾಜಣ್ಣ ಇವರ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆ  (prosecution) ದಾಖಲಿಸಲು ಅನುಮತಿ ನೀಡುವುದರ ಮೂಲಕ ಕಾನೂನಿನ ಘನತೆ-ಗೌರವಗಳನ್ನು ಹೆಚ್ಚಿಸುವಂತೆ ಸಂವಿಧಾನದ ಪಾಲಕರಾಗಿರುವ ರಾಜ್ಯಪಾಲರಲ್ಲಿ ವಿನಂತಿಸಲಾಗಿದೆ ಎಂದು ಭೀಮಪ್ಪ ಗಡಾದ ತಿಳಿಸಿದ್ದಾರೆ.

ವಿರೋಧ ಪಕ್ಷಗಳು ಮೌನವೇಕೆ ?

ಸಚಿವ ರಾಜಣ್ಣ ಅವರು ಸದನದಲ್ಲಿಯೇ ಹನಿ ಟ್ರ್ಯಾಪ್ ವಿಷಯ ಪ್ರಸ್ತಾಪಿಸಿ ಇದರಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರುಗಳ ಸಿಡಿಗಳು ಇವೆಯೆಂಬುದನ್ನು ಪ್ರಸ್ತಾಪಿಸಿದ್ದನ್ನು ಖಂಡಿಸದೇ ಇರುವ ವಿರೋಧ ಪಕ್ಷಗಳ ನಾಯಕರ ನಡೆಯ ಬಗ್ಗೆಯೂ ಅನುಮಾನಗಳು ಹುಟ್ಟಿಕೊಳ್ಳುತ್ತವೆ. ಈ ಹೆದರಿಕೆಯಿಂದಲೇ ವಿರೋಧಿ ನಾಯಕರು ಮೌನವಾಗಿರಬೇಕು ಎಂಬ ಸಂದೇಹವನ್ಙು ಗಡಾದ ವ್ಯಕ್ತಪಡಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕವನ : ಸಮರದ ಮಾತು

ಸಮರದ ಮಾತು ಅದೆಷ್ಟು ಇವೆ ನಿನ್ನ ಮಾತಿನ ಸಮರದ ಬಾಣಗಳು ಎದೆಯ ಗುಂಡಿಗೆಯನು ಸೀಳಿ ನಿಂತಿವೆವೀರ ಪರಾಕ್ರಮದ ಕೂಸೂ ನಾನಲ್ಲ ನಿನ್ನ ಜೊತೆ ಹೋರಾಡಿ ಜಯಿಸುವ ಶಕ್ತಿಯೂ ನನ್ನಲಿಲ್ಲ ಏಕೆಂದರೆಆ ಶಕ್ತಿ ಎಲ್ಲವನ್ನೂ ಕಿತ್ತು ಕೊಂಡ ವೀರ ಯೋಧ ಮಾತಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group