ಪರಿಸರ ಪ್ರೇಮಿ, ಸಾಹಿತಿ ಎಂ. ಡಿ.ಅಯ್ಯಪ್ಪ ಅವರಿಗೆ ಜನರಲ್ ಕಾರ್ಯಪ್ಪ ಪ್ರಶಸ್ತಿ

Must Read

ಕೊಡಗು ಜಿಲ್ಲೆಯ ಬಲ್ಲಮಾವಟಿ ಗ್ರಾಮದ ಸಾಹಿತಿ, ಪರಿಸರ ಪ್ರೇಮಿ ಎಂ. ಡಿ.ಅಯ್ಯಪ್ಪ ಅವರಿಗೆ ಬೆಂಗಳೂರಿನ ಚೈತನ್ಯ ರಾಷ್ಟ್ರೀಯ ಅಕಾಡೆಮಿಯು ರಾಜ್ಯ ಮಟ್ಟದ ಜನರಲ್ ಕಾರ್ಯಪ್ಪ ಪ್ರಶಸ್ತಿ ನೀಡಿ ಅವರ ಸಾಹಿತ್ಯ ಹಾಗೂ ಪರಿಸರ ಸೇವೆಯನ್ನು ಗುರ್ತಿಸಿದೆ.

ಬೆಂಗಳೂರಿನ ಕೆಂಪೇಗೌಡ ನಗರದ ಉದಯ ಭಾನು ಕಲಾ ಸಂಘದಲ್ಲಿ ಭಾನುವಾರದಂದು ಜನವರಿ 5 ರಂದು ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಲೇಖಕಿ ಹಾಗೂ ಸಮಾಜಸೇವಕಿ ಡಾ.ಸೌಜನ್ಯ ಶರತ್ ಚಂದ್ರ ಅವರು ಅಯ್ಯಪ್ಪ ಅವರಿಗೆ ಜನರಲ್ ಕಾರ್ಯಪ್ಪ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಮೈಸೂರಿನ ಹಿರಿಯ ಸಾಹಿತಿ ಡಾ.ಭೇರ್ಯ ರಾಮಕುಮಾರ್ ,
ಹಾಸನದ ಸಮಾಜಸೇವಕ ಎಂ. ಸಿ. ರಾಜು , ಸಂಸ್ಥೆಯ ಅಧ್ಯಕ್ಷರಾದ ಡಾ. ವಸುಧಾ ಶ್ರೀನಿವಾಸ್,ಅಧ್ಯಾತ್ಮಿಕ ಚಿಂತಕ ಮುದ್ದಪ್ಪ ಆರಾಧ್ಯ ಮೊದಲಾದವರು ವೇದಿಕೆಯಲ್ಲಿದ್ದರು.

Latest News

ಉಪ್ಪಾರ ಸಮಾಜ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನೆರವು – ಬರಮಣ್ಣ ಉಪ್ಪಾರ

ಮೂಡಲಗಿ: ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ರೂ.೫ ಕೋಟಿ ಹಣವಿದೆ ಸಮಾಜದ ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಸಾಧನೆ...

More Articles Like This

error: Content is protected !!
Join WhatsApp Group