spot_img
spot_img

ವೆಂಕಟಾಪುರದಲ್ಲಿ ಸಂಭ್ರಮದಿಂದ ಜರುಗಿದ ಹನುಮಾನ್ ದೇವರ ಕಾರ್ತಿಕೋತ್ಸವ

Must Read

spot_img
- Advertisement -

ಮೂಡಲಗಿ: ತಾಲೂಕಿನ ವೆಂಕಟಾಪುರ ಗ್ರಾಮದ ಆರಾಧ್ಯ ದೇವನಾದ ಶ್ರೀ ಹನುಮಾನ್ ದೇವರ ಕಾರ್ತಿಕೋತ್ಸವ ಅಂಗವಾಗಿ ಪಲ್ಲಕ್ಕಿ ಉತ್ಸವ ಸಡಗರ ಸಂಭ್ರಮದಿಂದ ಜರುಗಿತು.

ವೆಂಕಟಾಪುರದಲ್ಲಿ ದೀಪಾವಳಿ ಪಾಡ್ಯ ದಿನದಂದು ದೀಪೋತ್ಸವ ಪ್ರಾರಂಭಗೊಂಡು ಸತತ ಮೂರು ತಿಂಗಳು ೧೫ ದಿನಗಳವರೆಗೆ ನಡೆದು ಬಂದು ಕಾರ್ತಿಕೋತ್ಸವ ಭಾರತ ಹುಣ್ಣಿಮೆಯ ದಿನದಂದು ಹನುಮಾನ್ ದೇವರ ಪೂಜಾರಿಗಳಾದ ಗ್ರಾಮದ ದಳವಾಯಿ ಬಂಧುಗಳು ಹಾಗೂ ಗ್ರಾಮದ ಮುಖಂಡರು ಸೇರಿ ದೀಪ ಹಚ್ಚುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದರು.

ನಾಡಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೀಪ ಹಚ್ಚುವ ಮೂಲಕ ತಮ್ಮ ಭಕ್ತಿಯನ್ನು ದೇವರಿಗೆ ಸಮರ್ಪಿಸಿದರು.

- Advertisement -

ವೆಂಕಟಾಪೂರ ಗ್ರಾಮದಲ್ಲಿ ದೀಪಾವಳಿಯಿಂದ ಭಾರತ ಹುಣ್ಣಿಮೆಯವರೆಗೆ ಈ ಗ್ರಾಮದಲ್ಲಿ ಯಾವುದೇ ಹೊಸ ಬಟ್ಟೆ ಖರೀದಿಯಾಗಲಿ ಚಪ್ಪಲಿ ಖರೀದಿ ಆಗಲಿ ಮದುವೆಗಳಾಗಲಿ ಹಾಗೂ ಹೊಸ ಮನೆ ಕಟ್ಟುವುದು ಆಗಲಿ ಯಾವುದೇ ಹೊಸ ಕೆಲಸವನ್ನು ಕೈಗೊಳ್ಳುವುದಿಲ್ಲ.

ಈ ಸಂದರ್ಭದಲ್ಲಿ ಗದ್ದುಗೆ ಪೂಜಾರಿಗಳಾದ ಯಲ್ಲಪ್ಪ ಗಾಂಜಿ, ಮಹಾದೇವ ಗಾಂಜಿ, ಯಲ್ಲಪ್ಪ ಗಾಂಜಿ, ಗ್ರಾಮದ ಮುಖಂಡರುಗಳಾದ ಶಾಸಪಗೌಡ ಪಾಟೀಲ್ ಗಿರೀಶ ಹಳ್ಳೂರ್, ತಿಮ್ಮಣ್ಣ ಢವಳೇಶ್ವರ, ಮಹಾದೇವ ವಟವಟಿ, ಹನುಮಂತ ಕೋಳಿಗುಡ, ಹನುಮಂತ ಪೂಜಾರಿ, ಕರೆಪ್ಪ ಹಾದಿಮನಿ, ಹನುಮಂತ ಹೊಸಮನಿ, ವೆಂಕಪ್ಪ ನೀಲಪ್ಪಗೋಳ, ಕಲ್ಲಪ್ಪ ಬಡಕಲಿ, ಸೇರಿದಂತೆ ಸಾವಿರಾರು ಭಕ್ತಾದಿಗಳು ಉಪಸ್ಥಿತರಿದ್ದರು.

- Advertisement -
- Advertisement -

Latest News

ಮಹಿಳೆಯರು ಒಳ್ಳೆಯ ಗೃಹಿಣಿಯಾಗುವುದರ ಜೊತೆಗೆ ಸಾಹಿತಿಗಳಾಗಿಯೂ ಹೊರಹೊಮ್ಮುತ್ತಿದ್ದಾರೆ – ಶಾಸಕ ವಿಶ್ವಾಸ ವೈದ್ಯ

ಸವದತ್ತಿ : ಈಗಿನ ಮಹಿಳೆಯರು ಮನಸ್ಸು ಮಾಡಿದರೆ ಏನೆಲ್ಲವನ್ನು ಸಾಧಿಸಬಹುದು ಈಗಿನ ಮಹಿಳೆಯರು ಎಲ್ಲ ರಂಗಗಳಲ್ಲಿಯೂ ಮುಂದೆ ಇದ್ದಾರೆ ಅದರಂತೆ ಸಾಹಿತ್ಯದಲ್ಲಿಯೂ ಕೂಡ ಅವರು ಮುಂದೆ...
- Advertisement -

More Articles Like This

- Advertisement -
close
error: Content is protected !!
Join WhatsApp Group