spot_img
spot_img

ಅ.ರಾ.ಮಿತ್ರರ ಮಹತ್ವದ ಕೃತಿಗಳು

Must Read

- Advertisement -

ಕನ್ನಡ ಸಾಹಿತ್ಯ-ವಿದ್ವತ್ ಕ್ಷೇತ್ರದಲ್ಲಿ ಪರಿಚಿತ ಹೆಸರು, ಪ್ರೊ|| ಅ. ರಾ. ಮಿತ್ರ ಅವರದ್ದು. ಉಪನ್ಯಾಸಕರಾಗಿ, ಭಾಷಣಕಾರರಾಗಿ, ಕನ್ನಡೇತರರಿಗೆ ಕನ್ನಡ ಕಲಿಸುವ ಶಿಕ್ಷಕರಾಗಿ, ಹಾಸ್ಯೋತ್ಸವಗಳಲ್ಲಿ ಮುಖ್ಯ ಕಲಾವಿದರಾಗಿ _ ಹೀಗೆ ಕನ್ನಡದ ಕೆಲಸದಲ್ಲಿ ನಿರಂತರ ತೊಡಗಿಕೊಂಡಿರುವ ಮಿತ್ರರ ಬರವಣಿಗೆ ನವುರಾದದ್ದು, ಸುಲಲಿತವಾದದ್ದು. ಹೆಸರಿನಲ್ಲಷ್ಟೇ ಅಲ್ಲ, ಭಾಷೆ-ಶೈಲಿ-ಕಥನಕಲೆಗಳಲ್ಲಿ ಅವರು ಓದುಗರ ನಿಜವಾದ ಮಿತ್ರರು! ಹಾಗಾಗಿ ಅವರ ಬರಹಗಳನ್ನು ಓದುವುದೇ ಸೊಗಸು.

ರಾಮಾಯಣ ಮಿತ್ರ ಮತ್ತು ಮಹಾಭಾರತದ ಪಾತ್ರ-ಸಂಗತಿಗಳು ಇವೆರಡೂ ಅ. ರಾ. ಮಿತ್ರರ ಮಹತ್ತ್ವದ ಕೃತಿಗಳು. “ತರ್ಕ, ಸಂವಾದ, ಅಂತರೀಕ್ಷಣೆ – ಈ ಕಿಟಕಿಗಳಿಂದ ರಾಮಾಯಣಗೃಹವನ್ನು ಸ-ಹೃದಯನಾಗಿ ಪ್ರವೇಶಿಸುತ್ತಿದ್ದೇನೆ” ಎಂದು ಹೇಳುತ್ತ, ರಾಮಾಯಣದ ಪಾತ್ರ-ಸನ್ನಿವೇಶಗಳ ವಿವರವನ್ನು ನಮ್ಮೆದುರು ಹರಡುವ ಅವರ ಪರಿ ಅನನ್ಯವಾದದ್ದು.

ಮಹಾಭಾರತವಂತೂ ವಿಸ್ತಾರವಾದದ್ದು. ಎರಡೆರಡು ಬಾರಿ ಓದಿದರೂ ಯಾವ ಪಾತ್ರ ಯಾವ ಸಂದರ್ಭದ್ದು ಎಂದು ನೆನಪು ಮಾಡಿಕೊಳ್ಳಲು, ಆ ಪಾತ್ರದ ಸಂದರ್ಭವನ್ನು ಮೆಲುಕುಹಾಕಲು ನಮಗೆ ಬೇರೊಂದು ಸಹಾಯ ಬೇಕು. ಅದಕ್ಕೆ ಒದಗಿಬರುವಂಥದ್ದು, ಮಹಾಭಾರತದ ಪಾತ್ರ-ಸಂಗತಿಗಳು.

- Advertisement -

492 ಪುಟಗಳ ರಾಮಾಯಣ ಮಿತ್ರ ಪುಸ್ತಕದ ಬೆಲೆ: ರೂ.380.00

440 ಪುಟಗಳ ಮಹಾಭಾರತದ ಪಾತ್ರ-ಸಂಗತಿಗಳು ಪುಸ್ತಕದ ಬೆಲೆ: ರೂ.340.00

ಈ ಎರಡೂ ಪುಸ್ತಕಗಳನ್ನು ಕೊಳ್ಳಲು WhatsApp ಮಾಡಿ: 7483681708

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group