ಸವದತ್ತಿ : ತಾಲೂಕಿನ ಸವದತ್ತಿ ಉತ್ತರ ಸಮೂಹ ಸಂಪನ್ಮೂಲ ಕೇಂದ್ರದ ವ್ಯಾಪ್ತಿಯ ಪ್ರಧಾನ ಗುರುಗಳ ಸಭೆಯಲ್ಲಿ ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸವದತ್ತಿ ತಾಲೂಕು ಘಟಕದ ಅಧ್ಯಕ್ಷರಾದ ಹೆಚ್. ಆರ್. ಪೆಟ್ಲೂರ ಗುರುಗಳಿಗೆ ಎಲ್ಲ ಪ್ರಧಾನ ಗುರುಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಆರ್. ಪಿ. ನಲವಡೆ ಸ್ವಾಗತಿಸಿದರು. ಶ್ರೀಮತಿ ಕೆ ಜಿ ಶಿಂಧೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಸನ್ಮಾನಿತರಾದ ಎಚ್. ಆರ್. ಪೆಟ್ಲೂರ ರವರು ಶಿಕ್ಷಕರ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು.
ಗುರುಭವನ ಕಾಯ೯ ಪೂರ್ಣಗೊಳಿಸುವಲ್ಲಿ ಪ್ರಾಮಾಣಿಕ ಕಾಯ೯ನಿವ೯ಹಿಸುವುದಾಗಿ ಹೇಳಿದರು ಎನ್. ಎನ್. ಕಬ್ಬೂರ ನಿರೂಪಣೆ ಮಾಡಿದರು. ಎಪ್.ಪಿ.ಹುಡೆದ ವಂದಿಸಿದರು.
ಕಾರ್ಯಕ್ರಮದಲ್ಲಿ ಕ.ರಾ.ಪ್ರಾ.ಶಾಲಾ.ಶಿಕ್ಷಕರ ಸಂಘದ ಕಾಯ೯ದಶಿ೯ಗಳಾದ ಎಫ್. ಜಿ. ನವಲಗುಂದ , ಪ್ರಧಾನ ಗುರುಗಳಾದ ಎಸ್ ಎ ಖಾಜಿ . ಎಮ್ ಎಲ್ ಕುಂಕುಮಗಾರ. ಕೆ ಎಸ್ ಸಿಂದೋಗಿ, ಶ್ರೀಮತಿ ಟಿ ಎಸ್ ಪೀರಜಾದೆ, ಶ್ರೀಮತಿ ಆರ್ ಡಿ ಮುರಾಳ ,ಕಾತ್ರಾಳ , ಶಿಕ್ಷಕರ ಪತ್ತಿನ ಸಂಘದ ಸದಸ್ಯರಾದ ಶ್ರೀಮತಿ ಜೆ ವಿ ಕಾತ್ರಾಳ ಸಹಶಿಕ್ಷಕಿಯರಾದ ಎನ್ ಎಸ್ ಚಂದಾಪುರ, ಮಾಣಿಕನವರ,ಆರ್ ಎಸ್ ಪಾಟೀಲ ,ಎಮ್ ಜೆ ಅಂಬಲಿ ಮೊದಲಾದವರು ಭಾಗವಹಿಸಿದ್ದರು.