ಧಾರ್ಮಿಕ ಕ್ಷೇತ್ರಗಳು ಬೆಳೆದರೆ ಆರೋಗ್ಯ ಪೂರ್ಣ ಸಮಾಜ: ರಂಭಾಪುರಿ ಶ್ರೀ

Must Read

ಸಿಂದಗಿ: ಧರ್ಮದ ಪವಿತ್ರ ಕ್ಷೇತ್ರಗಳು ಬೆಳೆದುಕೊಂಡು ಬಂದರೆ ಆರೋಗ್ಯ ಪೂರ್ಣ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ಬಾಳೆಹೊನ್ನೂರು ರಂಬಾಪೂರಿ ಪೀಠದ ಶ್ರೀಮದ್ರಂಭಾಪುರಿ ವೀರಸಿಂಹಾಸನಾಧೀಶ್ವರ ಜಗದ್ಗುರು ಪ್ರಸನ್ನರೇಣುಕಾ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಮಂಗಳವಾರದಂದು ಪಟ್ಟಣದ ಬಸ್‍ಡಿಪೋ ಬಳಿಯಿರುವ ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದಲ್ಲಿ ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದ 28ನೆಯ ಜಾತ್ರಾ ಮಹೋತ್ಸವ-ಧರ್ಮಸಭೆ ಕಾರ್ಯಕ್ರಮ ಹಾಗೂ ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಪುರಾಣ ಪ್ರವಚನ ಮಹಾ ಮಂಗಲೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಭಾರತ ದೇಶ ಧರ್ಮದಿಂದ ಬಹಳಷ್ಟು ಜನ ಸಮುದಾಯಕ್ಕೆ ತನ್ನದೇಯಾದ ಕೊಡುಗೆಯನ್ನು ಕೊಟ್ಟಿದೆ. ಧರ್ಮ ಎಂದರೆ ಹೇಳುವಂತಹದಲ್ಲ. ಧರ್ಮ ಎಂದರೆ ನಡೆದು ತೋರಿಸುವಂತಹದ್ದು. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಸಂಸ್ಕೃತಿ ಭಾರತ ದೇಶದ್ದು. ಈ ದೇಶದಲ್ಲಿ ಹಲವಾರು ಧರ್ಮ ಮತ್ತು ಆಚರಣೆಗಳು ಬೆಳೆದುಕೊಂಡು ಬಂದಿವೆ. ಧರ್ಮ ಬೇರೆ ಬೇರೆಯಾದರೂ ಆಚರಣೆ ಬೇರೆಯಾದರೂ ಎಲ್ಲ ಧರ್ಮಗಳ ಕೊನೆಯ ಗುರಿ ಮಾನವನ ಕಲ್ಯಾಣವನ್ನು ಬಯಸುತ್ತದೆ. ತಾಲೂಕಿನ ಜನತೆಯಲ್ಲಿ ಮಾನವ ಧರ್ಮ ಹಿರಿದಾಗಿದ್ದು, ಎಲ್ಲವನ್ನೂ ಗಮನಿಸಿ ಸಿಂದಗಿ ನಗರದಲ್ಲಿ ಉತ್ತಮ ಧಾರ್ಮಿಕ ವಾತವರಣವನ್ನುಂಟು ಮಾಡುವ ಅಪೇಕ್ಷೆ ನಮ್ಮದು ಎಂದು ಆಶಿರ್ವದಿಸಿದರು.

ಈ ವೇಳೆ ಶಾಸಕ ಅಶೋಕ ಮನಗೂಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅವರು, ಇಂತಹ ಪುರಾಣ ಪ್ರವಚನ ಸಂತ್ಸಂಗಗಳನು ಆಲಿಸಬೇಕು. ಈ ಮಾನವ ಜನ್ಮ ಬಲು ದೊಡ್ಡದು ಮತ್ತು ಅಪೂರ್ವವಾಗಿದೆ. ಶರಣರ, ಸಂತರ, ಮಹಾಂತರ ಜೀವನ ಚರಿತ್ರೆಗಳನ್ನು ಅರಿತುಕೊಂಡು ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಕೊಳ್ಳಬೇಕು. ಕಳೆದ ಬಾರಿ ರಾಜಕೀಯ ಮುಖಂಡನಾಗಿ ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಾಗ ಶಾಸಕರಾಗಿ ಆಯ್ಕೆಯಾಗಿ ಬಾ ಎಂದು ಆಶೀರ್ವದಿಸಿದ್ದರು. ಈ ಕಾರಣ ಇಂದು ಶ್ರೀಗಳ ಆಶೀರ್ವಾದದಿಂದ ಮತ್ತು ಜನತೆಯ ಪ್ರೀತಿಯಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ ಎಂದರು.

ಹಾಗೆಯೇ ಸಿಂದಗಿ ಆದಿಶೇಷ ಸಂಸ್ಥಾನ ಮಠಕ್ಕೆ ಶಾಸಕರ ಅನುದಾನ ಅಡಿಯಲ್ಲಿ 25ಲಕ್ಷ ರೂ. ಅನುದಾವನ್ನು ನೀಡುವುದಾಗಿ ಶಾಸಕರು ವಾಗ್ದಾನ ಮಾಡಿದರು.

ಕಾರ್ಯಕ್ರಮದ ಸಮ್ಮುಖವನ್ನು ನಾಲವಾರ ಶ್ರೀಮಠದ ಶಿವಯೋಗಿ ಡಾ.ಚಂದ್ರಶೇಖರ ಸ್ವಾಮಿಗಳು ವಹಿಸಿದ್ದರು. ಈ ವೇಳೆ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಮಳಲಿ ಸಂಸ್ಥಾನ ಮಠದ ಡಾ.ಗುರು ನಾಗಭೂಷಣ ಶಿವಾಚಾರ್ಯರು, ಚಳಗೇರಾ ಮಠದ ವೀರಸಂಗಮೇಶ್ವರ ಶಿವಾಚಾರ್ಯರು, ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದ ಸಿಂದಗಿ ಆದಿಶೇಷ ಶ್ರೀಮಠದ ನಾಗರತ್ನ ರಾಜಯೋಗಿ ವೀರರಾಜೇಂದ್ರ ಸ್ವಾಮಿಗಳು ಮಾತನಾಡಿದರು.

ಕಲಾದಗಿ ಪಂಚಗೃಹ ಹಿರೇಮಠದ ಶ್ರೀಗಳು,    ಕೆಂಭಾವಿ ಶ್ರೀಗಳು, ಖೈನೂರ ಶ್ರೀಗಳು, ಅಕ್ಕಲಕೋಟ ನಾವದಗಿ-ಮಂಗಳೂರ ಶ್ರೀಗಳು, ಮಲಘಾಣ ಶ್ರೀಗಳು ಉಪಸ್ಥಿತರಿದ್ದರು. 

ಇದೇ ಸಂದರ್ಭದಲ್ಲಿ ಶ್ರೀಮದ್ ರಂಭಾಪುರಿ ಜಗದ್ಗುರುಗಳ ಭವ್ಯ ಮೆರವಣಿಗೆಯು ಬಸವೇಶ್ವರ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತ, ಅಂಬಿಗರ ಚೌಡಯ್ಯ ವೃತ್ತ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಹಾಗೂ ಟಿಪ್ಪು ಸುಲ್ತಾನ್ ವೃತ್ತದ ಮಾರ್ಗವಾಗಿ ಶ್ರೀಆದಿಶೇಷ ಹಿರೇಮಠದವರೆಗೆ ಬೃಹತ್ ಕಾರ್ ರ್ಯಾಲಿ ಮೂಲಕ ಶ್ರೀಮಠಕ್ಕೆ ತಲುಪಿತು.

ಈ ವೇಳೆ ಬಾಗಲಕೋಟೆಯ ಚರ್ಮರೋಗ ತಜ್ಞೆ ಡಾ.ಮಹಾಜಬೀನ ಮದರಕರ ಹಾಗೂ ನಾಯಕ ನಟ ವಿಶ್ವಪ್ರಕಾಶ ಮಲಗೊಂಡ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಿದ್ದು ಪಾಟೀಲ ಹೂವಿನಹಳ್ಳಿ, ಸಚಿನಗೌಡ ಪಾಟೀಲ, ರವಿ ದೇಸಾಯಿ, ಶಿಲ್ಪಾ ಕುದುರಗೊಂಡ, ಅಶೋಕ ವಾರದ, ರಾಜೇಶ ಹಿರೇಮಠ, ನಾಗರತ್ನ ಮನಗೂಳಿ, ಈ ಸಂದರ್ಭದಲ್ಲಿ ನಾಲವಾರ ಜಹಾಗೀರವಾರ ಆದಿಶೇಷ ಸಂಸ್ಥಾನ ಹಿರೇಮಠದ ಸದ್ಗುರು ಶಿವಯೋಗಿ ಡಾ.ಚಂದ್ರಶೇಖರ ಸ್ವಾಮಿಗಳು, ಕಲಾದಗಿ ಪಂಚಗೃಹ ಹಿರೇಮಠದ ಶ್ರೀ ಗಂಗಾಧರ ಶಿವಾಚಾರ್ಯರು, ಕೆಂಭಾವಿ ಹಿರೇಮಠ ಶ್ರೀ ಚನ್ನಬಸವ ಶಿವಾಚಾರ್ಯರು, ಮಲಘಾಣ ಜಡೆಶಾಂತಲಿಂಗ ಶಿವಾಚಾರ್ಯರು, ಕೇರೂಟಗಿಯ ಶಿವಬಸವ ಸ್ವಾಮಿಗಳು,  ದೇವರ ಹಿಪ್ಪರಗಿ ಶಾಸಕರ ಸಹೋದರ ಸಚಿನಗೌಡ ಪಾಟೀಲ,  ಭೂದಾನಿ ಗೊಲ್ಲಾಳಪ್ಪ ಮಲ್ಲೇಶಪ್ಪ ಬಗಲಿ, ವಿಜಯಪುರದ  ಬಸವರಾಜ ಮಸಳಿ, ಮಡಿವಾಳಯ್ಯ ಹಿರೇಮಠ,  ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಎಂ. ಎಂ. ಹಂಗರಗಿ, ಪ್ರ.ದ.ಗುತ್ತಿಗೆದಾರ ರವಿ ದೇಸಾಯಿ, ಶ್ರೀಮತಿ ಶಿಲ್ಲಾ ಕುದರಗೊಂಡ, ರಾಜ್ಯ ಪರಿಷತ್ ಸದಸ್ಯ ಸಂಗನಗೌಡ ಎಸ್. ಪಾಟೀಲ, ಇಲಕಲ್ ಉದ್ಯಮಿ ನಾಗರಾಜ ತಂಗಡಗಿ, ಕಾವ್ಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಚಂದ್ರಶೇಖರ ನಾಗರಬೆಟ್ಟ, ಅಶೋಕ ವಾರದ, ನಿವೃತ್ತ ಪ್ರಾಧ್ಯಾಪಕ ಶಾಂತೂ ಹಿರೇಮಠ, ಹೋರ್ತಿಯ ರೇವಣಸಿದ್ದ ಪೂಜಾರಿ, ರಾಜೇಶ ಹಿರೇಮಠ, ನಾಗರತ್ನಾ ಮನಗೂಳಿ, ಕಸಾಪ ಅದ್ಯಕ್ಷ ಶಿವಾನಂದ ಬಡಾನೂರ, ಮಲ್ಲನಗೌಡ ಪಾಟೀಲ ಇಬ್ರಾಹೀಂಪೂರ, ಜೇರಟಗಿ ವೇ.ಮೂ ಸಿದ್ದಯ್ಯಶಾಸ್ತ್ರಿ ಹಾಗೂ ಸುರೇಶ ಹೊನ್ನಕಿರಣಗಿಯಿಂದ ಪ್ರಾರ್ಥನೆ ಗೈದರು. ಮಹಾಂತೇಶ ನೂಲಾನವರ ಸ್ವಾಗತಿಸಿದರು. ಪೂಜಾ ಹಿರೇಮಠ ನಿರೂಪಿದರು. ಪತ್ರಕರ್ತರ ಸಂಘದ ಪಂಡಿತ ಯಂಪೂರೆ ವಂದಿಸಿದರು.

- Advertisement -
- Advertisement -

Latest News

ಮೂಡಲಗಿಯಲ್ಲಿ ಶಾಸಕರ ನೇತೃತ್ವದಲ್ಲಿ ತಿರಂಗಾ ಯಾತ್ರೆ

ಮೂಡಲಗಿ:- ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ಹಿನ್ನೆಲೆ ಮೇ,೨೦ ರಂದು ಮಂಗಳವಾರ,ಸಂಜೆ ೪ ಗಂಟೆಗೆ ಮೂಡಲಗಿ ಪಟ್ಟಣದಲ್ಲಿ  ಶಾಸಕರಾದ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ತಿರಂಗಾ ಯಾತ್ರೆ...
- Advertisement -

More Articles Like This

- Advertisement -
close
error: Content is protected !!
Join WhatsApp Group