- Advertisement -
ಸಿಂದಗಿ: ಕಳೆದ ಜ.26 ರಂದು ರಾಯಚೂರು ಜಿಲ್ಲೆ ನ್ಯಾಯಾಲಯದಲ್ಲಿ ನಡೆದ ಅಸಾಂವಿಧಾನಿಕ ಕೃತ್ಯದ ಕುರಿತು ಹಾಗೂ ಆ ಕೃತ್ಯವನ್ನು ಎಸಗಿದ ಸಮಾನತೆ ವಿರೋಧಿ ವಿಕೃತ ಮನಸ್ಸಿನ ಮಲ್ಲಿಕಾರ್ಜುನ ಗೌಡರನ್ನು ಆ ಸ್ಥಾನದಿಂದ ವಜಾ ಮಾಡಬೇಕು ಹಾಗೂ ಅವರನ್ನು ಗಡಿಪಾರು ಮಾಡಬೇಕು ಹಾಗೂ ಇನ್ನು ಹತ್ತು ಹಲವಾರು ಬೇಡಿಕೆಗಳಿಗೆ ಒತ್ತಾಯಿಸಿ ಫೇ.19 ರಂದು ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ ಹೈಕೋರ್ಟ ಚಲೋ ಎಂಬ ಬೃಹತ್ ಪ್ರಮಾಣದ ಕಾರ್ಯಕ್ರಮಕ್ಕೆ ನಾಡಿನ ಯುವ ಹೋರಾಟಗಾರರು ಸಮಾನ ಮನಸ್ಕರು ಪ್ರಗತಿಪರ ಚಿಂತಕರು ಸಂವಿಧಾನದ ಹಿತೈಷಿಗಳು ಹಾಗೂ ಬುದ್ದಿಜೀವಿಗಳು ಪಾಲ್ಗೊಳ್ಳಬೇಕು ಅದಲ್ಲದೆ ವಿಜಯಪುರ ಜಿಲ್ಲೆ ಹಾಗೂ ಸಿಂದಗಿ ತಾಲೂಕಿನಿಂದ ಲಕ್ಷೋಪಲಕ್ಷ ಸಮಾನ ಮನಸುಗಳು ಈ ಕಾರ್ಯಕ್ರಮವನ್ನು ಯಶಸ್ವಿ ಮಾಡಿ ಕೊಡಬೇಕೆಂದು ಹರ್ಷವರ್ಧನ ಪೂಜಾರಿಯವರು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.