spot_img
spot_img

ಕೋರೋನಾ ನಿರ್ಮೂಲನೆಗಾಗಿ ಹಾಗೂ ಲೋಕಕಲ್ಯಾಣಕ್ಕಾಗಿ ಹೋಮ-ಹವನ.

Must Read

- Advertisement -

ಸವದತ್ತಿ – ಗುಲಹೊಸೂರಿನ ಶ್ರೀ ಚಿದಂಬರೇಶ್ವರ ದೇವಾಸ್ಥಾನದಲ್ಲಿ ಕೊರೋನಾ ನಿರ್ಮೂಲನೆಗಾಗಿ ಹಾಗೂ ಲೋಕಕಲ್ಯಾಣಾರ್ಥವಾಗಿ ವಿವಿಧ ಹೋಮ-ಹವನಗಳನ್ನು ಮಾಡಿ ಶ್ರೀ ಚಿದಂಬರೇಶ್ವರರಿಗೆ ಪ್ರಾರ್ಥಿಸಲಾಯಿತು.

ದೇವಸ್ಥಾನದ ಪೀಠಾಧಿಕಾರಿಗಳಾದ ಪೂಜ್ಯ ಶ್ರೀ ದಂಡಪಾಣಿ ದೀಕ್ಷಿತರ ಸಾನ್ನಿಧ್ಯದಲ್ಲಿ ಎಲ್ಲ ಧಾರ್ಮಿಕ ವಿಧಿ-ವಿಧಾನಗಳು ಜರುಗಿದವು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೊರೋನಾ ಸಂಕಷ್ಟ ಕಾಲದಲ್ಲಿ ನಮ್ಮೆಲ್ಲ ವೈದಿಕ-ವಿದ್ವಾಂಸರು ದೇವ ರಿಗೆ ಮೊರೆ ಹೋಗಿ ನಮ್ಮ ದೇಶವನ್ನು ಸುಭಿಕ್ಷೆಯತ್ತ ಕೊಂಡೊಯ್ಯಬೇಕೆಂದು ಪ್ರಾರ್ಥಿಸಿ, ಲೋಕಕಲ್ಯಾಣಕ್ಕಾಗಿ ನಿಸ್ವಾರ್ಥದಿಂದ ಧಾರ್ಮಿಕ ಕಾರ್ಯಕ್ರಮವನ್ನು ನೆರವೇರಿಸಿ ಆದರ್ಶಪ್ರಾಯರಾಗಿದ್ದಾರೆ. ಬರುವ ದಿನಗಳಲ್ಲಿ ನಾವೆಲ್ಲ ಈ ಕೊರೋನಾದಿಂದ ಮುಕ್ತರಾಗುತ್ತೇವೆ ಹಾಗೂ ಪ್ರತಿಯೊಬ್ಬರು ಲಸಿಕೆಯನ್ನು ಹಾಕಿಸಿಕೊಂಡು ಸರ್ಕಾರದ ನಿಯಮಗಳನ್ನು  ಪಾಲಿಸಬೇಕೆಂದು ತಿಳಿಸಿದರು.

- Advertisement -

ಧಾರ್ಮಿಕ ಕಾರ್ಯಕ್ರಮದ ನೇತೃತ್ವವನ್ನು  ಪ್ರಸನ್ನ ದೀಕ್ಷಿತರು ವಹಿಸಿದ್ದರು ಹಾಗೂ ನ‍ಟೇಶ ದೀಕ್ಷಿತ ದಂಪತಿಗಳು ಯಜ್ಞದ ಪೂರ್ಣಾಹುತಿಯನ್ನು ನೆರವೇರಿಸಿದರು. ಧಾರ್ಮಿಕ ವಿಧಿ-ವಿಧಾನಗಳು ವೇದಮೂರ್ತಿ ಶೇಷಗಿರಿ ಜೋಶಿ, ವೇದಮೂರ್ತಿ ಯೋಗೀಶ ಜೋಶಿ ಇವರ ನೇತೃತ್ವದಲ್ಲಿ ಜರುಗಿದವು.

- Advertisement -
- Advertisement -

Latest News

ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ ಸ್ಮಾರಕ ಭವನ

ಬೆಳಗಾವಿ- ಭಾರತದ ಶೂರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರು ಸನ್ ೧೮೯೨ ರಲ್ಲಿ ಕರ್ನಾಟಕದ ಬೆಳಗಾವಿಗೆ ಭೇಟಿ ಕೊಟ್ಟು ಅಕ್ಟೋಬರ್ ೧೬ ರಿಂದ ೨೭ ರ...
- Advertisement -

More Articles Like This

- Advertisement -
close
error: Content is protected !!
Join WhatsApp Group