spot_img
spot_img

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

Must Read

- Advertisement -

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ ಶ್ರೀ ಮ.ನಿ.ಪ್ರ ಮಹಾಂತ ಮಹಾಸ್ವಾಮಿಗಳು ಅವರು ಎರಡನೆಯ ದಿನದ ಪುರಾಣ ಪ್ರವಚನದಲ್ಲಿ ಅವರು ಮಾತನಾಡಿ, ಸತ್ಯವಂತರ ಕಥೆಗಳನ್ನು ಆಲಿಸಬೇಕು.ಸತ್ಯದ ನೆಲೆಗಟ್ಟಿನ ಮೇಲೆ ಸುಂದರ ಬದುಕು ಕಟ್ಟಿ ಕೊಂಡು ಸಮಾಜದಲ್ಲಿ ಸತ್ಯವಂತರಾಗಿ ಬಾಳಬೇಕು.

ಮಾತನಾಡುವಾಗ ಸತ್ಯವಂತರಾಗಿ ನುಡಿಯಬೇಕು. ಸುಳ್ಳು ಹೇಳುವವರನ್ನು ಎಂದಿಗೂ ನಂಬಬಾರದು. ಗುರು ತೋರಿರುವ ಸನ್ಮಾರ್ಗದಲ್ಲಿ ಮನಸ್ಸು ತೊಡಗಿಸಬೇಕು. ಸದಾ ಗುರು ಸ್ಮರಣೆ ಮಾಡುವ ಮೂಲಕ ಅವರ ಚಿಂತನೆಯಲ್ಲಿ ತೊಡಗಬೇಕು. ಭಕ್ತಿಯಲ್ಲಿ ನಿತ್ಯ ನಿರಂತರವಾಗಿ ಧಾನ ಧರ್ಮ ಪರೋಪಕಾರದಲ್ಲಿ ತೊಡಗಿದಾಗ ನಮ್ಮ ಜೀವನ ಪಾವನವಾಗುತ್ತದೆ. ದೇವರ ಮುಂದೆ ಪ್ರಾರ್ಥನೆ ಮಾಡುವಾಗ ನಮ್ಮ ಮನಸ್ಸು ಆತ್ಮವಿಶ್ವಾಸದಿಂದ ಕೂಡಿರಬೇಕು.

ಕುಟುಂಬದಲ್ಲಿ ಅಂಜಿಕೆಯಿಂದ ಬದುಕಿದರೆ ಅದು ಯಾವಗಲು ಮನಸ್ಸು ಸುಂದರವಾಗಿರುವುದಿಲ್ಲ. ನಾವು ಸಾತ್ವಿಕ ಜೀವನ ನಡೆಸಬೇಕು. ಮನಸ್ಸು ಸುಂದರವಾಗಿರಬೇಕು ಅದು ಒಳ್ಳೆಯ ಜೀವನಕ್ಕೆ ಉತ್ತಮ ದಾರಿ ದೀಪವಾಗುತ್ತದೆ. ವಿದ್ಯಾರ್ಥಿಗಳ ಕೈಯಲ್ಲಿ ಮೊಬೈಲ್ ಕೊಡುವದರಿಂದ ಉತ್ತಮ ಶಿಕ್ಷಣ ದೂರವಾಗುತ್ತದೆ.

- Advertisement -

ಅವರಿಗೆ ಒಳ್ಳೆಯ ಶಿಕ್ಷಣ ಕೊಡಬೇಕು. ಸತತ ಅಧ್ಯಯನದಲ್ಲಿ ತೊಡುಗುವಂತೆ ಗುರುವಿನ ಮೂಲಕ ಉತ್ತಮ ಪ್ರೇರಣೆ ನೀಡಬೇಕು . ಮನಸ್ಸು ಶುದ್ದವಾಗಿರಬೇಕು.ಗುರು ಪರಂಪರೆ ಮುಂದುವರಿಸಿ ಕೊಂಡು ಅವರ ತತ್ವ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕೇರೂಟಗಿ ಹಿರೇಮಠದ ಸಂಗೀತ ಶಿಕ್ಷಕ ವೇ.ರೇಣುಕಾಚಾರ್ಯರು ಹಿರೇಮಠ ಸಂಗೀತ ಸೇವೆ ನೆರವೇರಿಸಿದರು.ಜೇರಟಗಿಯ ವೇ .ಶಾಂತು ಮುದಗಲ್ಲಮಠ ಸುಂದರವಾಗಿ ತಬಲಾ ನುಡಿಸಿದರು. ಪಂಚಯ್ಯ ಹಿರೇಮಠ.ಬಸಯ್ಯ ಮಠಪತಿ ವೇದಿಕೆ ಮೇಲೆ ಇದ್ದರು.

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group