- Advertisement -
ಮೂಡಲಗಿ: ತಾಲೂಕಿನ ಹುಣಶ್ಯಾಳ ಪಿ.ಜಿ ಗ್ರಾಮದ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ 2022ರ ಜನವರಿ 1ರಿಂದ 3ರವರೆಗೆ ಜರುಗಲಿರುವ ಅಪ್ಪನ ಜಾತ್ರೆಯ ಆಮಂತ್ರಣ ಪತ್ರಿಕೆಯನ್ನು ಶ್ರೀಮಠದಲ್ಲಿ ಶನಿವಾರ ದಂದು ಜರುಗಿದ ಮಾಸಿಕ ಸುವಿಚಾರ ಚಿಂತನಗೋಷ್ಠಿ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದ ಪಾವನ ಸಾನ್ನಿಧ್ಯವನ್ನು ಶ್ರೀ ಮಠದ ನಿಜಗುಣ ದೇವರು ವಹಿಸಿದ್ದರು. ಶ್ರೀ ಗಾಳೇಶ್ವರ ಮಠದ ಚಿದಾನಂದ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಯರಜರವಿ ಶ್ರೀ ಮಠದ ಚಿದಾನಂದ ಮಹಾಸ್ವಾಮಿಗಳು,ಜಿ.ಪಂ.ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಮುತ್ತೆಪ್ಪ ಐದೊಡ್ಡಿ, ಬಸವರಾಜ ಐದೊಡ್ಡಿ ಇದ್ದರು. ಹಣಮಂತ ದಾಸರ, ಗಂಗಾಧರ ಕುಂಬಾರ ಇವರಿಂದ ಸಂಗೀತ ಸೇವೆ ಜರುಗಿತು.