spot_img
spot_img

ನೇಕಾರ ಇಂದು ಇರದಿದ್ದರೆ ಮಾನವ ಕುಲ ಅಂಧಕಾರದಲ್ಲಿ ಇರುತ್ತಿತ್ತು – ಉಮೇಶ ಬೆಳಕೂಡ

Must Read

spot_img
- Advertisement -

ಮೂಡಲಗಿ – ನೇಕಾರ ಎನ್ನುವಂಥ ಜೀವಿ ಇಂದು ಇರದಿದ್ದರೆ ಮಾನವ ಕುಲವೇ ಅಂಧಕಾರದಲ್ಲಿ ಇರುತ್ತಿತ್ತು. ನೇಕಾರಿಕೆ ಕೇವಲ ಒಂದು ಉದ್ಯೋಗವಲ್ಲ ಮಾನವನ ಮಾನ ಮುಚ್ಚುವ ಪವಿತ್ರ ಕಾರ್ಯವಾಗಿದೆ ಎಂದು ಪತ್ರಕರ್ತ ಉಮೇಶ ಬೆಳಕೂಡ ಹೇಳಿದರು.

ಬಿಜೆಪಿಯ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ನೇಕಾರ ಪ್ರಕೋಷ್ಠದ ವತಿಯಿಂದ ರಾಷ್ಟ್ರೀಯ ನೇಕಾರ ದಿನವನ್ನು ಶ್ರೀ ನೀಲಕಂಠ ಮಠದಲ್ಲಿ ಆಚರಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.ಲ್ಲರ ಮಾನ ಮುಚ್ಚುವ ನೇಕಾರರು ಇಂದು ಕಷ್ಟದಲ್ಲಿದ್ದಾರೆ. ನಾವೆಲ್ಲ ಸೇರಿ ನೇಕಾರರಿಗೆ ಸರ್ಕಾರಿ ಸೌಲಭ್ಯಗಳು ಸಿಗುವಂತೆ ಪ್ರಯತ್ನ ಮಾಡಬೇಕು ಎಂದು ಅವರು ಹೇಳಿದರು.

ಶಿವು ಮುರಗೋಡ ಮಾತನಾಡಿ, ನೇಕಾರರ ಬದುಕಿಗೆ ಒಳ್ಳೆಯದಾಗಲು ನಾವೆಲ್ಲ ಶ್ರಮಿಸಬೇಕು ಎಂದರು.

- Advertisement -

ಜಗದೀಶ ಓಂಕಾರಿ ಹಾಗೂ ಈಶ್ವರ ಮುರಗೋಡ ಮಾತನಾಡಿದರು.

ನೀಲಕಂಠ ಮಠದ ಶ್ರೀ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಸಮಾರಂಭದಲ್ಲಿ ನೇಕಾರರಾದ ರತ್ನಪ್ಪಾ ಕುಂಬಾರ, ಸದಾಶಿವ ಮುಗಳಖೋಡ, ಮಡಿವಾಳ ಜಿಡ್ಡಿ ಹಾಗೂ ಈರಪ್ಪ ಬೆಳವಿ ಇವರನ್ನು ಶಿವಾನಂದ ಶ್ರೀಗಳು ಸತ್ಕರಿಸಿದರು.

- Advertisement -

ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ನೇಕಾರ ಪ್ರಕೋಷ್ಠದ ಸಂಚಾಲಕ ಮಹಾಲಿಂಗ ಒಂಟಗೋಡಿ ವಂದಿಸಿದರು.

ಈ ಸಂದರ್ಭದಲ್ಲಿ ಕುರುಹಿನಶೆಟ್ಟಿ ಸಮಾಜದ ಹಿರಿಯರಾದ ಗೊಡಚಪ್ಪಾ ಮುರಗೋಡ, ಸುಭಾಸ ಬೆಳಕೂಡ, ಸದಾಶಿವ ಬೆಳಕೂಡ, ಈಶ್ವರ ಮುಗಳಖೋಡ, ಚನ್ನಪ್ಪಾ ವಂಟಗೂಡಿ, ಸುರೇಶ ಮುರಗೋಡ, ರಮೇಶ ವಂಟಗೂಡಿ, ಮಂಜು ಬೆಳವಿ, ಮಹಾದೇವ ಮುಗಳಖೋಡ ಸೇರಿದಂತೆ ಅನೇಕ ಬಾಂಧವರು ಉಪಸ್ಥಿತರಿದ್ದರು

- Advertisement -
- Advertisement -

Latest News

ಕವನ: ಕಲೆಯ ಲೀಲೆ

"ಕಲೆಯ ಲೀಲೆ" ಲೀಲಾವತಿ ಎಂದರೆ ಕಲೆಯ ಕಡಲು ನಟನೆಯಲ್ಲಿ ಕೈಗೆಟುಕದ ಮುಗಿಲು ಮರೆಯದ ಕಲಾವಿದೆ ಇವರು ಮರೆತರು ಇವರ ಇವರಿಂದ ಬೆಳೆದವರು ಸಾರುತ್ತಿದ್ದವು ಮೌಲ್ಯ ಇವರ ಚಿತ್ರಗಳು ಕಲಿಸುತ್ತಿದ್ದವು ಪಾಠ ಇವರ ಹಾಡುಗಳು ಜೀವನವೇ ಇರುತ್ತಿತ್ತು ಇವರ ಸಿನಿಮಾದಲ್ಲಿ ಬದುಕುತ್ತಿದ್ದರು ಸಿನಿಮಾದಂತೆ ಜನರು ಜೀವನದಲ್ಲಿ ಬಡವಾಯಿತು ಸಿನಿಮನೆ ಹಿರಿಯ ಕಲೆ ತಲೆಗಳಿಲ್ಲದೆ ಚಿತ್ರರಂಗ ಸಾಗಿದೆ ಕಲೆ...
- Advertisement -

More Articles Like This

- Advertisement -
close
error: Content is protected !!
Join WhatsApp Group