- Advertisement -
ಸಿಂದಗಿ: ಬೆಳಗಾವಿ ವಿಭಾಗ ಅಬಕಾರಿ ಜಂಟಿ ಆಯುಕ್ತರ ಮಾರ್ಗದರ್ಶನದಲ್ಲಿ ಹಾಗೂ ವಿಜಯಪುರ ಅಬಕಾರಿ ಉಪ ಆಯುಕ್ತರ ನಿರ್ದೇಶನದಲ್ಲಿ ಜು. 26ರಂದು ಸಿಂದಗಿ ವಲಯದ ತುರಕನಗೇರಿ ಗ್ರಾಮದಿಂದ ಕಲಕೇರಿ ಗ್ರಾಮಕ್ಕೆ ಹೋಗುವ ರಸ್ತೆಯ ಮಧ್ಯೆ ತುರಕನಗೇರಿಯಿಂದ ಅಂದಾಜು 2 ಕಿ.ಮೀ ಅಂತರದಲ್ಲಿ ದ್ವಿಚಕ್ರ ವಾಹನದ ಮೇಲೆ 3.780 ಲೀ. ಗೋವಾ ರಾಜ್ಯದ ಮದ್ಯವನ್ನು ಸಾಗಾಣಿಕೆ ಮಾಡುತ್ತಿದ್ದಾಗ ಪತ್ತೆ ಹಚ್ಚಿ ತುರಕನಗೇರಿ ಗ್ರಾಮದ ಶಮೀದ.ತಂ.ಕಾಶೀಮ ಪಟೇಲ.ಬಿರಾದಾರ ಮಹಬೂಬಪಟೇಲ, ತಂ.ಸಾಹೇಬಪಟೇಲ, ಬಿರಾದಾರ ಇವರನ್ನು ಬಂಧಿಸಿ ಅಬಕಾರಿ ಉಪ ನಿರೀಕ್ಷಕ ಡಿ.ವ್ಹಿ.ರಜಪೂತ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ.
ದಾಳಿಯಲ್ಲಿ ಅಬಕಾರಿ ನಿರೀಕ್ಷಕಿ ಆರತಿ ಖೈನೂರ ಹಾಗೂ ಸಿಂದಗಿ ವಲಯದ ಅಬಕಾರಿ ಸಿಬ್ಬಂದಿಗಳಾದ ಎಮ್.ಜೆ.ಮೊಕಾಶಿ, ಆರ್.ಬಿ.ಮುಳಸಾವಳಗಿ, ರೇವಣ ಸಿದ್ದಪ್ಪ ಅತಾಪಿ, ಜೈರಾಮ ರಾಠೋಡ ಹಾಗೂ ಎನ್.ಎಸ್.ಸಾತಲಗಾಂವ ಮತ್ತು ವಾಹನ ಚಾಲಕ ಯಮನಪ್ಪ ಹರಿಜನರವರು ಭಾಗವಹಿಸಿದ್ದರು.