ಬೀದರ – ಬೀದರ ದಕ್ಷಿಣ ಕ್ಷೇತ್ರದ ಬುದೇರಾ ಗ್ರಾಮದಲ್ಲಿ ಸೋಲಾರ್ ಬೀದಿ ದೀಪವನ್ನು ಕೇಂದ್ರ ಸಚಿವ ಭಗವಂತ ಖೂಬಾ ಉದ್ಘಾಟನೆ ಮಾಡಿದರು.
ಬುದೇರಾ ಗ್ರಾಮ ಚರ್ಚ ಮುಂಭಾಗದಲ್ಲಿ ಅಳವಡಿಸಿದ ಸ್ಟ್ರೀಟ್ ಲೈಟ್ 12.5 ಲಕ್ಷದ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
ಬಿಜೆಪಿ ಯವ ನಾಯಕ ಮಲ್ಲೇಶ ಗಣಾಪುರ ಅವರು ಸಾರ್ವಜನಿಕ ಅಹವಾಲು ಸಲ್ಲಿಸಿದ ಮೇರೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ಸ್ಟ್ರೀಟ್ ಲೈಟ್ ನಿರ್ಮಿಸಲಾಗಿದೆ ಎಂದು ಸಚಿವರು ನುಡಿದರು.
ಬೀದರ ದಕ್ಷಿಣ ಕ್ಷೇತ್ರದ ಯುವ ನಾಯಕ ಮಲ್ಲೇಶ ಗಣಾಪುರ, ಕೆ ಎಸ್ ಐಐಡಿಸಿ ಅಧ್ಯಕ್ಷ ಬೆಲ್ದಾಳೆ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಭಾಗಿಯಾಗಿದ್ದರು.
ವರದಿ: ನಂದಕುಮಾರ ಕರಂಜೆ, ಬೀದರ