ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದಲ್ಲಿ ಧ್ವಜಾರೋಹಣ
ಮೂಡಲಗಿ – ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸಂಘದ ಅಧ್ಯಕ್ಷ ಪತ್ರಕರ್ತ ಉಮೇಶ ಬೆಳಕೂಡ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಮಲ್ಲು ಬೋಳನವರ, ಖಜಾಂಚಿ ಭೀಮಶಿ ತಳವಾರ, ಹಣಮಂತ ಕಂಕಣವಾಡಿ, ಭಗವಂತ ಉಪ್ಪಾರ, ಸಚಿನ್ ಪತ್ತಾರ ಸೇರಿದಂತೆ ಸಂಘದ ಎಲ್ಲ ಸದಸ್ಯ ಪತ್ರಕರ್ತರು ಉಪಸ್ಥಿತರಿದ್ದರು.
ಪ್ರಗತಿ ಬ್ಯಾಂಕಿನಲ್ಲಿ ಸ್ವಾತಂತ್ರ್ಯೋತ್ಸವ
ಮೂಡಲಗಿ – ಸ್ಥಳೀಯ ಪ್ರಗತಿ ಗ್ರಾಮೀಣಾಭಿವೃದ್ಧಿ ಸೊಸಾಯಿಟಿಯಲ್ಲಿ ಅಧ್ಯಕ್ಷ ಡಾ.ಬಿ ಎಮ್ ಪಾಲಭಾಂವಿ ಧ್ವಜಾರೋಹಣ ನೆರವೇರಿಸಿದರು.
ಉಪಾಧ್ಯಕ್ಷ ಉಮೇಶ ಬೆಳಕೂಡ,ಸದಸ್ಯರಾದ ವಿಠ್ಠಲ ತುಪ್ಪದ, ಈರಪ್ಪ ಕಂಬಾರ, ಬಸಪ್ಪ ಬೆಳಗಲಿ, ಶಿವಾನಂದ ಕತ್ತಿ, ಭೀಮಶಿ ಢವಳೇಶ್ವರ, ಹಾಲಪ್ಪ ಅಂತರಗಟ್ಡಿ ಹಾಗೂ ಕಾರ್ಯದರ್ಶಿ ಶಿವಬಸು ಕತ್ತಿ, ಸಿಬ್ಬಂದಿಯಾದ ಮಹಾಂತೇಶ ಫಿರೋಜಿ, ರಾಜು ಸೊರಗಾವಿ ಉಪಸ್ಥಿತರಿದ್ದರು.
ಶಾಂತಿನಿಕೇತನ ಶಾಲೆಯಲ್ಲಿ ಧ್ವಜಾರೋಹಣ
ವಿಶ್ವ ಭಾರತಿ ಶಿಕ್ಷಣ ಸಂಸ್ಥೆಯ ಪಾರವ್ವಾ ವಂಟಗೋಡಿ ಪ್ರಾಥಮಿಕ ಶಾಲೆಯಲ್ಲಿ ಅಧ್ಯಕ್ಷ ಈಶ್ವರ ಮುರಗೋಡ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀ ಶಿವಾನಂದ ಸ್ವಾಮಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ವಿದ್ಯಾ ಸಂಸ್ಥೆಯ ನಿರ್ದೇಶಕರು ಹಾಗೂ ಕುರುಹಿನಶೆಟ್ಟಿ ಸಮಾಜ ಬಾಂಧವರು ಉಪಸ್ಥಿತರಿದ್ದರು