Homeಸುದ್ದಿಗಳುಎಲ್ಲಾ ಕೋಮುಗಲಭೆಗೆ ಜಮೀರನೇ ಕಾರಣ - ರೇಣುಕಾಚಾರ್ಯ

ಎಲ್ಲಾ ಕೋಮುಗಲಭೆಗೆ ಜಮೀರನೇ ಕಾರಣ – ರೇಣುಕಾಚಾರ್ಯ

ಬೀದರ – ಜಮೀರ ಅಹ್ಮದ್ ನೀನೊಬ್ಬ ನಕಲಿ. ಮೊದಲು ನೀನು ಕೋಮು ಪ್ರಚೋದನೆ ಮಾಡೋದನ್ನ ಬಿಡು.ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆಗೆ ಜಮೀರನೇ ಕಾರಣ. ಈಗ ಹಲ್ಲು ಕಡಿದು ನಾನು ಯುದ್ಧಕ್ಕೆ ಹೋಗ್ತೀನಿ ಅನ್ನೋದೆಲ್ಲ ನಾಟಕ ಎಂದು ಮಾಜಿ ಸಚಿವ ರೇಣುಕಾಚಾರ್ಯ ಕಿಡಿ ಕಾರಿದರು.

ಬೀದರನಲ್ಲಿ ಮಾಧ್ಯಮದವರೊಡನೆ ಮಾತನಾಡಿದ ಅವರು, ಮೋದಿ ಅಮಿತ್ ಷಾ ಪರವಾನಿಗೆ ಕೊಟ್ಟರೆ ಯುದ್ಧಕ್ಕೆ ಹೋಗ್ತೀನಿ ಎಂಬ ಜಮೀರ ಹೇಳಿಕೆ ಬರೀ ಬೂಟಾಟಿಕೆ ಎಂದ ಅವರು, ನಿನ್ನ ಬೂಟಾಟಿಕೆ ಬಿಡು ಮಾರಾಯ ಕೋಮು ಗಲಭೆ ಸೃಷ್ಟಿ ಮಾಡೋದನ್ನೂ ಬಿಡು ಎಂದು ಜಮೀರ ಅಹ್ಮದ ಉದ್ದೇಶಿಸಿ ಹೇಳಿದರು.
ನಕಲಿ ಹಿಂದೂ ಬಗ್ಗೆ ನಾನೇನು ಹೇಳೋದಿಲ್ಲ ಎಂದು ರೇಣುಕಾಚಾರ್ಯ ಅವರು ಯತ್ನಾಳ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.

ಜೆಡಿಎಸ್ ಸೇರಿ ಚಿಕನ್ ಕಬಾಬ್ ತಿಂದು ಅಲ್ಪಸಂಖ್ಯಾತರ ಟೋಪಿ ಧರಿಸಿದ್ರು, ಟಿಪ್ಪು ಖಡ್ಗ ಹಿಡಿದು ಇಫ್ತಿಯಾರ ಕೂಟ ಮಾಡಿದವರು ಇವರೇ ನಕಲಿ ಹಿಂದೂ ಎಂದರು.

ಅವ್ವಗ ಹುಟ್ಟಿದೆ, ಅಪ್ಪಗ ಹುಟ್ಟಿದೆ ಅಂತ ಎಲುಬಿಲ್ಲದ ನಾಲಿಗೆ ಮಾತನಾಡುತ್ತದೆ. ಒಂದು ಸಾರಿ ಹಿಂದೂ ಹುಲಿ, ವೀರಶೈವ ಹುಲಿ, ಪಂಚಮಸಾಲಿ ಹುಲಿ ಅಂತ ಕರೆಸ್ಕೊಂಡು ಏನಾಯಿತು ಅವರೇ ಒಂದು ಸಾಲ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ರೇಣುಕಾಚಾರ್ಯ ಹೇಳಿದರು

ವರದಿ : ನಂದಕುಮಾರ ಕರಂಜೆ, ಬೀದರ

RELATED ARTICLES

LEAVE A REPLY

Please enter your comment!
Please enter your name here

Most Popular

close
error: Content is protected !!
Join WhatsApp Group