- Advertisement -
ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ “ಕಲಾಸೃಷ್ಟಿ” ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ ನಿರ್ದೇಶಕ ಪರಸು ಹಾದಿಮನಿಯವರು ಉದ್ಘಾಟಿಸಿದರು.
ಇದರ ಮಾಲಿಕರಾದ ಮಳಿಯಪ್ಪ ದಾಸರವರು ಹುಟ್ಟು ವಿಶೇಷ ಕಲಾವಿದರಾಗಿದ್ದು, ಹಲವಾರು ಕಥೆ, ಸಾಹಿತ್ಯದಲ್ಲಿ ಮತ್ತು ಹಾಡುಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಜೀವನದಲ್ಲಿ ಸಾಕಷ್ಟು ನೋವು, ಅವಮಾನ, ಸಂಕಷ್ಟಗಳನ್ನು ಅನುಭವಿಸಿ, ಕೆಲವೊಮ್ಮೆ ತಮ್ಮ ಇಷ್ಟಾರ್ಥಗಳನ್ನು ತ್ಯಾಗ ಮಾಡಿ, ಸಾಧಿಸುವ ನಿಟ್ಟಿನಲ್ಲಿ ಇಂದು ತಮ್ಮ ಕನಸಾದ “ಕಲಾಸೃಷ್ಟಿ” ಆರ್ಟ್ ವರ್ಕ್ ನ್ನು ಪ್ರಾರಂಭ ಮಾಡಿದರು.