spot_img
spot_img

ಕವನ: ಒಂಟಿ ಜೀವ

Must Read

- Advertisement -

ಒಂಟಿ ಜೀವ..

ಒಂಟಿ ಜೀವ ನಾನೆಂಬ ,
ಆತಂಕ ಬೇಡ ,
ಜಗದ ಉತ್ತಮ ನಿಲುವುಗಳು
ರೂಪುಗೊಂಡಿದ್ದು ,
ಒಂಟಿ ಆಲೋಚನೆಯ ಜಗದಲ್ಲಿ…

ಹಿಟ್ಲರ್ ನ ಅಧಿಕಾರ ದಾಹಕೆ ,
ಜಗತ್ತೇ ತಲ್ಲಣಿಸಿತು ,
ಘಜನಿ ಮಹಮ್ಮದ್ ನ
ಅಧಿಕಾರ ದಾಹದ ಆಲೋಚನೆಗೆ ,
ಭಾರತದ ಮೇಲೆ
ಹದಿಮೂರು ಬಾರಿ ಧಾಳಿಯಾಯ್ತು.

ಬಸವಣ್ಣನ ಸಮಾನತೆ,ಕಾಯಕ ತತ್ವಕೆ
ಕಲ್ಯಾಣದಲಿ ಮಹೋನ್ನತ ಕ್ರಾಂತಿಯಾಯ್ತು…
ಬುದ್ದ-ಮಹಾವೀರರ ಚಿಂತನೆಗೆ
ಸತ್ಯ-ಅಹಿಂಸೆ ಸಾರುವ
ಹೊಸ ಧರ್ಮ ಗಳ ಜನನವಾಯ್ತು,
ಗಾಂಧೀಜಿಯವರ ಸತ್ಯ,ತ್ಯಾಗ, ಅಹಿಂಸೆಯ ಹೋರಾಟಕೆ
ಭಾರತದಲಿ‌ ಬ್ರಿಟೀಷರ ಆಳ್ವಿಕೆ ಕೊನೆಯಾಯ್ತು…

- Advertisement -

ಆರ್ಯಭಟನ ‘ಸೊನ್ನೆ’ ಅಂಕಿಯ ಸಂಶೋಧನೆ ,
ಗಣಿತ ಲೋಕದಲಿ‌ ವಿಶ್ವಕೆ ಬೆಳಕು‌ ತಂತು,
ಅಬ್ದುಲ್ ಕಲಾಂರ ವೈಜ್ಞಾನಿಕ ನಿರ್ಧಾರಕೆ,
ಬಾಹ್ಯಾಕಾಶದಲಿ‌ ಭಾರತಕೆ ಕೀರ್ತಿ ಬಂತು…..

ಜಗದ ಅಭ್ಯುದಯದ ಹಿಂದೆ ,
ಒಂಟಿ ಜೀವದ ನಿರ್ಧಾರವಿದೆ,
ನಿರಂತರ ಕಠಿಣ ಪರಿಶ್ರಮ,
ತನ್ನ ನಿರ್ಧಾರವ ಜಗಕೆ ತಿಳಿಸುವ ,
ಜಗದ ಜನರ ಮನವ ಸೆಳೆಯುವ
ಮನೋಬಲದ ನಿರ್ಧಾರವಿದೆ..

ಒಂಟಿತನದ‌ ಬೇಸರ ಬಿಡು ,
ಜೀವನದ ಖಚಿತ ನಿರ್ಧಾರವ
ಒಂಟಿಯಾಗಿ ಕುಳಿತು ಮಾಡಿಬಿಡು,
ಆಪ್ತರಲಿ‌ ಸಲಹೆ-ಸಹಕಾರ‌ಪಡೆದುಬಿಡು,
ಜೀವನದಲಿ ಅಭ್ಯುದಯದತ್ತ ಸಾಗಿಬಿಡು

- Advertisement -

ಡಾ.ಭೇರ್ಯ ರಾಮಕುಮಾರ್ ,
ಸಾಹಿತಿಗಳು,ಪತ್ರಕರ್ತರು

- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group