spot_img
spot_img

ಕವನ: ಸ್ಫೂರ್ತಿ ಚಿಲುಮೆ.!

Must Read

- Advertisement -

“ಇದು ಒಲವಿನೊಳಗಿನ ಚೈತನ್ಯದ ಕವಿತೆ. ಅನುರಾಗದೊಳಗಿನ ಅಂತಃಶಕ್ತಿಯ ಭಾವಗೀತೆ. ಸಾಧನೆಯ ಹಾದಿಗೆ ದೀಪ್ತಿಯಾಗುವ, ಸ್ಫೂರ್ತಿಯ ಚಿಲುಮೆಯೊಳಗಿನ ಜೀವಜಲವಾಗಿ, ನಿರಂತರವಾಗಿ ಮುನ್ನಡೆಸುವ ಪ್ರೇಮವೆಂಬ ಅನುಭೂತಿಯ ಮಧುರ ಸ್ವರಗಳ ಹೃದ್ಯಗೀತೆ. ಪ್ರಾಂಜಲ ಪ್ರೀತಿಯೆಂದರೆ ಹೀಗೆ. ಚಿರಂತನ ಚಿಮ್ಮುವ ಚಿಲುಮೆಯ ಹಾಗೆ. ಏನಂತೀರಾ..?”

– ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.


ಸ್ಫೂರ್ತಿ ಚಿಲುಮೆ.!

ಅನನ್ಯ ಕಾಂತಿಯ ನಿನ್ನೊಂದು
ನೋಟ ಸಾಕು ಗೆಳತಿ
ನಡೆವ ಹಾದಿ ಬೆಳಕಾಗಿಸಲು.!

- Advertisement -

ಅದಮ್ಯ ಸ್ಫೂರ್ತಿಯ ನಿನ್ನೊಂದು
ನಗೆ ಸಾಕು ಗೆಳತಿ
ಪ್ರತಿಕ್ಷಣ ತನುಮನ ಪುಳಕಿಸಲು.!

ಅಪಾರ ಶಕ್ತಿಯ ನಿನ್ನೊಂದು
ನುಡಿ ಸಾಕು ಗೆಳತಿ
ಹೆಜ್ಜೆಹೆಜ್ಜೆಗು ಹುರುಪು ತುಂಬಲು.!

ಅಪೂರ್ವ ಶೃತಿಯ ನಿನ್ನೊಂದು
ಸ್ವರ ಸಾಕು ಗೆಳತಿ
ನರನರ ಉತ್ಸಾಹದಿ ಪುಟಿದೇಳಲು.!

- Advertisement -

ಅಮಿತ ಶಾಂತಿಯ ನಿನ್ನೊಂದು
ಮೌನ ಸಾಕು ಗೆಳತಿ
ತಲ್ಲಣಗಳ ನೀಗಿ ನಿರಾಳವಾಗಿಸಲು.!

ಅಗಣಿತ ಛಾತಿಯ ನಿನ್ನೊಂದು
ಹಸ್ತಲಾಘವ ಸಾಕು ಗೆಳತಿ
ಸಾಧನೆಯ ಶೃಂಗ ಮೆಟ್ಟಿನಿಲ್ಲಲು.!

ಅಗಾಧ ಪ್ರೀತಿಯ ನಿನ್ನೊಂದು
ಒಲವು ಸಾಕು ಗೆಳತಿ
ಬಾಳ ಗುರಿಗಮ್ಯ ತಲುಪಿಸಲು.!

ಎ.ಎನ್.ರಮೇಶ್. ಗುಬ್ಬಿ.

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group